Fact check: ಸರಕು ಸಾಗಣೆ ರೈಲು ನಾಪತ್ತೆ: ಈ ವೈರಲ್ ಸಂದೇಶದ ಹಿಂದಿರುವ ಸತ್ಯವೇನು?
ಸಾಮಾಜಿಕ ಜಾಲತಾಣದಲ್ಲಿ ಯಾವ ಸಂದೇಶಗಳು ಯಾವಾಗ ವೈರಲ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲ ಸಂದೇಶಗಳು ತಪ್ಪಾಗಿಯೂ ಹಂಚಿಕೊಳ್ಳಲಾಗುತ್ತದೆ. ಹೀಗೊಂದು ಸಂದೇಶದಲ್ಲಿ 'ಸರಕು ಸಾಗಣೆ ರೈಲು ನಾಪತ್ತೆಯಾಗಿದೆ' ಎಂದು ವೈರಲ್ ಮಾಡಲಾಗಿದೆ. ಈ ಸಂದೇಶ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಯಾಕೆಂದರೆ ಕಾಣೆಯಾಗಿದೆ ಎಂದು ಹೇಳಲಾಗಿದ್ದು ಬಂಗಾರವಲ್ಲ, ಹಣವಲ್ಲ. ಬದಲಿಗೆ ರೈಲು.
ಫೆಬ್ರವರಿ 1 ರಂದು ಮಹಾರಾಷ್ಟ್ರದ ನಾಗ್ಪುರದ ಮಿಹಾನ್ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸರಕುಗಳೊಂದಿಗೆ ಕಾರ್ಗೋ ರೈಲು ಹೊರಟಿದೆ. 90 ಕಂಟೈನರ್ಗಳೊಂದಿಗೆ ಹೊರಟಿರುವ ರೈಲು ನಾಲ್ಕೈದು ದಿನಗಳಲ್ಲಿ ಮುಂಬೈನ ಜವಾಹರಲಾಲ್ ನೆಹರೂ ಬಂದರನ್ನು ತಲುಪಬೇಕು. ರೈಲು ಹೊರಟು 13 ದಿನಗಳ ನಂತರ ನಾಪತ್ತೆಯಾಗಿದ್ದು, ಮುಂಬೈನ ಜವಾಹರಲಾಲ್ ನೆಹರೂ ಬಂದರನ್ನು ತಲುಪಿಲ್ಲ ಎಂದು ವರದಿಯಾಗಿದೆ.
ಮತ್ತೊಂದು ಸಂದೇಶದಲ್ಲಿ 'ಫೆಬ್ರವರಿ 1 ರಂದು ಸರಕು ಸಾಗಣೆ ರೈಲು ನಾಸಿಕ್ ಮತ್ತು ಕಲ್ಯಾಣ್ ನಡುವಿನ ಉಂಬರ್ಮಲಿ ರೈಲು ನಿಲ್ದಾಣಕ್ಕೆ ತಲುಪಿದೆ. ಆದರೆ ಅದರ ನಂತರ ರೈಲು ಇರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ' ಎಂದಿದೆ. ಈ ಕುರಿತು ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟವಾದಾಗ ಅನೇಕರು ಆಶ್ಚರ್ಯಚಕಿತಾಗಿದ್ದಾರೆ. ಈ ಬಗ್ಗೆ ಹಲವಾರಿಗೆ ಹಲವಾರು ಪ್ರಶ್ನೆಗಳು ಉದ್ಬವಿಸಿವೆ.
𝗙𝗔𝗖𝗧 𝗖𝗛𝗘𝗖𝗞
— Central Railway (@Central_Railway) February 14, 2023
The news in circulation about the missing of rake carrying containers from Nagpur to Mumbai is 𝗳𝗮𝗰𝘁𝘂𝗮𝗹𝗹𝘆 𝗶𝗻𝗰𝗼𝗿𝗿𝗲𝗰𝘁. The clarification issued may please be carried for the correct information of readers. @RailMinIndia pic.twitter.com/nVIY1proWV
ಇನ್ನೂ ಕೆಲವು ಸಂದೇಶಗಳ ಪ್ರಕಾರ, 'ಕೆಲವು ವಾರಗಳ ಹಿಂದೆ ಬಿಹಾರದಲ್ಲಿ ರೈಲಿನ ಇಂಜಿನ್ಗಳು ಕಳ್ಳತನವಾಗಿದ್ದರೆ, ಮಹಾರಾಷ್ಟ್ರದಲ್ಲಿ ರೈಲು ನಾಪತ್ತೆಯಾಗಿದೆ' ಎಂದಿದೆ. ಈ ಸುದ್ದಿ ಅನೇಕರನ್ನು ಗೊಂದಲಕ್ಕೀಡು ಮಾಡಿದೆ.

ಈ ಬಗ್ಗೆ ವಿವರಣೆ ನೀಡಿರುವ ರೈಲ್ವೇ ಆಡಳಿತ, ಕಂಟೈನರ್ ಕಾರ್ಪೊರೇಷನ್ ರೈಲನ್ನು ಜವಾಹರಲಾಲ್ ನೆಹರು ಬಂದರಿಗೆ ಕೊಂಡೊಯ್ದಿದೆ ಎಂದು ಹೇಳಿದೆ. ಆದರೆ ರೈಲು ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಸಂದೇಶಗಳನ್ನು ಪ್ರಕಟಿಸುವಂತೆ ಮನವಿ ಮಾಡಿದೆ.
ಹೀಗಾಗಿ ನಾಗ್ಪುರದಿಂದ ಮುಂಬೈಗೆ ಕುಂಟೆ ಹೊತ್ತೊಯ್ಯುವ ರೈಲು ನಾಪತ್ತೆಯಾಗಿರುವ ಸುದ್ದಿ ವಾಸ್ತವಿಕವಾಗಿ ತಪ್ಪಾಗಿದೆ.

Fact Check
ಕ್ಲೇಮು
ನಾಗ್ಪುರದಿಂದ ಮುಂಬೈಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರಕುಗಳೊಂದಿಗೆ ಕಾರ್ಗೋ ರೈಲು ನಾಪತ್ತೆ.
ಪರಿಸಮಾಪ್ತಿ
ನಾಗ್ಪುರದಿಂದ ಮುಂಬೈಗೆ ಕುಂಟೆ ಹೊತ್ತೊಯ್ಯುವ ರೈಲು ನಾಪತ್ತೆಯಾಗಿರುವ ಸುದ್ದಿ ವಾಸ್ತವಿಕವಾಗಿ ತಪ್ಪಾಗಿದೆ.
Rating
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications