ಆಂಕರ್ ಅನುಶ್ರೀ ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ ಕಣ್ಣೀರು ಹಾಕಿ... Zee Kannada Saregamapa
ಜೀ ಕನ್ನಡ ಸರಿಗಮಪ... ಅಂದಹಾಗೆ ಕನ್ನಡಿಗರು ಶನಿವಾರ & ಭಾನುವಾರ ಬಂತು ಅಂದ್ರೆ ಸಾಕು ಟಿವಿ ಬಿಟ್ಟು ಹೋಗಲ್ಲ. ಇದಕ್ಕೆಲ್ಲಾ ಕಾರಣ, ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಎನ್ನಬಹುದು. ಕೋಟಿ ಕೋಟಿ ವೀಕ್ಷಕರ ಸೆಳೆದು ಇಟ್ಟುಕೊಂಡಿರುವ 'ಜೀ ಕನ್ನಡ ಸರಿಗಮಪ' ಟಿಆರ್ಪಿ ವಿಚಾರದಲ್ಲೂ ಅಬ್ಬರಿಸುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ ಕಣ್ಣೀರು ಹಾಕಿ...
ಆಂಕರ್ ಅನುಶ್ರೀ ಅಂದ್ರೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯದಲ್ಲೂ ಸಿಕ್ಕಾಪಟ್ಟೆ ಕ್ರೇಜ್. ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳ ಸಂಪಾದಿಸಿದ್ದಾರೆ. ಅದೇ ರೀತಿ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಕೂಡ ಆಂಕರ್ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಆದರೆ ದಿಢೀರ್, ಆಂಕರ್ ಅನುಶ್ರೀ ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ ಕಣ್ಣೀರು ಹಾಕಿ...

ಸರಿಗಮಪ ವೇದಿಕೆಯಲ್ಲಿ ಅನುಶ್ರೀ ಕಣ್ಣೀರು...
ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ದೊಡ್ಡ ಇತಿಹಾಸ ಇದ್ದು, ಆಂಕರ್ ಅನುಶ್ರೀ ಅವರೇ ಮೊದಲಿನಿಂದಲೂ ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅಲ್ಲದೆ ಆಂಕರ್ ಅನುಶ್ರೀ ಮಾತಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಹರಳು ಹುರಿದಂತೆ ಅನುಶ್ರೀ ಮಾತು ಆಡುತ್ತಿದ್ದರೆ ಜನರು ಟಿವಿ ಸ್ಕ್ರೀನ್ ಬಿಟ್ಟು ಆಚೆ & ಈಚೆ ತಿರುಗಲ್ಲ. ಹೀಗಿದ್ದರೂ ಆಂಕರ್ ಅನುಶ್ರೀ ಅವರು ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಕಣ್ಣೀರು ಹಾಕಿದ್ದೇಕೆ?
ಆಂಕರ್ ಅನುಶ್ರೀ ಕಣ್ಣೀರು ಹಾಕಿದ್ದೇಕೆ?
ಈ ವಾರದ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಹಾನ್ ನಟಿಯರ ಸಮಾಗಮವಾಗಿ ವಿಶೇಷ ಎಪಿಸೋಡ್ ಆಯೋಜನೆ ಮಾಡಲಾಗಿದೆ. ಇದೇ ಸಮಯದಲ್ಲಿ ಉಳಿದವರು ಕಂಡಂತೆ ಸಿನಿಮಾದ ಅಮ್ಮನ ಬಗ್ಗೆ ಭಾವನಾತ್ಮಕವಾಗಿ ಮೂಡಿ ಬಂದಿರುವ ಹಾಡಿನ ಬಗ್ಗೆ ಚರ್ಚೆಯು ಶುರುವಾಯ್ತು. ಕೊನೆಗೆ ನಟಿ ತಾರಾ ಅವರು ಈ ಹಾಡಿಗೆ ಮತ್ತೊಮ್ಮೆ ನಟನೆ ಮಾಡಿದರು. ಹೀಗೆ ತಾರಾ ಅವರ ಅದ್ಭುತ ನಟನೆ ಕಂಡು ಎಲ್ಲರೂ ಕಣ್ಣು ತುಂಬಿಕೊಂಡರು. ಅದ್ರಲ್ಲೂ ಆಂಕರ್ ಅನುಶ್ರೀ ಅವರು ಕೂಡ ಅತ್ತುಬಿಟ್ಟರು. ಹೀಗೆ ಆಂಕರ್ ಅನುಶ್ರೀ ಅವರು ಕಣ್ಣೀರು ಹಾಕಿದ್ದನ್ನು ನೋಡಿ ಅವರ ಅಭಿಮಾನಿಗಳು ಕೂಡ ಎಮೋಷನಲ್ ಆಗಿದ್ದಾರೆ.












Click it and Unblock the Notifications