ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ಹೊರಕ್ಕೆ... Anchor Anushree
ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ಕನ್ನಡ ರಿಯಾಲಿಟಿ ಶೋಗಳ ಕಿಂಗ್ ಆಗಿದೆ. ಅದರಲ್ಲೂ ಈ ವಾರದ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಬಂದಿದ್ದರು. ನಟಿ ತಾರಾ, ಶೃತಿ, ಸುಧಾರಾಣಿ ಸೇರಿದಂತೆ ಶಿವಣ್ಣ ಕೂಡ ಬಂದಿದ್ದರು. ಇದೇ ಸಮಯದಲ್ಲಿ ಆಂಕರ್ ಅನುಶ್ರೀ ಹೊರಕ್ಕೆ...
ಹೌದು, ಪಟಪಟ ಅಂತಾ ಮಾತನಾಡುವ ಆಂಕರ್ ಅನುಶ್ರೀ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಕಳಸ ಇದ್ದಂತೆ ಅಂತಾ ಅವರ ಅಭಿಮಾನಿಗಳು ಹೇಳುತ್ತಾರೆ. ಯಾಕಂದ್ರೆ ಹರಳು ಹುರಿದಂತೆ ಮಾತನಾಡುವ ಆಂಕರ್ ಅನುಶ್ರೀ ಅವರು ಕಳೆದ 10 ವರ್ಷದಿಂದ ಕೂಡ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಆಂಕರಿಂಗ್ ಮಾಡುತ್ತಾ ಬಂದಿದ್ದಾರೆ. ಆದರೆ ಇದೀಗ ದಿಢೀರ್, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ಹೊರಕ್ಕೆ...

ಆಂಕರ್ ಅನುಶ್ರೀ ಮಹತ್ವದ ನಿರ್ಧಾರ!
ಅಂದಹಾಗೆ ಆಂಕರ್ ಅನುಶ್ರೀ ಕನ್ನಡದ ನಂಬರ್ 1 ನಿರೂಪಕಿ ಆಗಿದ್ದು, ಆಂಕರ್ ಅನುಶ್ರೀ ಅವರು ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರಿಗೆ ದೊಡ್ಡ ಪ್ರಮಾಣದ ಸಂಭಾವನೆ ಕೂಡ ನೀಡುತ್ತಾರೆ ಚಾನಲ್ ಅವರು. ಇಷ್ಟೆಲ್ಲದರ ನಡುವೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ಹೊರಕ್ಕೆ...
ಅಂದಹಾಗೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಭಾನುವಾರದ ಎಪಿಸೋಡ್ ನಡೆಸಿಕೊಡುವ ಸಮಯದಲ್ಲಿ ಆಂಕರ್ ಅನುಶ್ರೀ ಅವರು ಒಂದು ಡಿಮ್ಯಾಂಡ್ ಇಟ್ಟರು, ಆ ಪ್ರಕಾರ ತಾವು ಕೂಡ ಹಾಡು ಹಾಡಬೇಕು ಅಂತಾ ಹೇಳಿ ಒಂದು ಹಾಡನ್ನು ಹಾಡಿದರು. ಕೊನೆಗೆ ಅದ್ಭುತವಾಗಿ ಹಾಡು ಹಾಡಿದ ಆಂಕರ್ ಅನುಶ್ರೀಗೆ ಮಿಕ್ಕವರು ಕೂಡ ಸಪೋರ್ಟ್ ಮಾಡಿದರು. ಇದೇ ಸಮಯದಲ್ಲಿ ಅನುಶ್ರೀ ಏನಂದ್ರು ಗೊತ್ತಾ?
ಆಂಕರಿಂಗ್ ಬಿಡ್ತೀನಿ ಅಂದ್ರಾ ಅನುಶ್ರೀ?
ಹೀಗೆ ಆಂಕರ್ ಅನುಶ್ರೀ ಅದ್ಭುತವಾಗಿ ಹಾಡು ಹಾಡಿದ ನಂತರ, ತಾವು ಆಂಕರಿಂಗ್ ಬಿಟ್ಟು ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಯಾಗ್ತೀನಿ ಅಂದ್ರು. ಈ ಮೂಲಕ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಆಂಕರಿಂಗ್ನಿಂದ ಅನುಶ್ರೀ ಹೊರಕ್ಕೆ ಹೋಗಿ, ಸ್ಪರ್ಧಿಯಾಗಿ ಬರ್ತಾರಾ? ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅನುಶ್ರೀ ಅವರ ಮಾತುಗಳಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಅನುಶ್ರೀ ಸ್ಪರ್ಧಿಯಾಗಿ ಬಂದರೆ ಗೆಲ್ಲೋದು ಗ್ಯಾರಂಟಿ ಅಂತಾ ಬೆಂಬಲ ನೀಡ್ತಿದ್ದಾರೆ. ಹಾಗೇ ಅನುಶ್ರೀ ಅವರು ಇಷ್ಟು ಚನ್ನಾಗಿ ಹಾಡು ಹಾಡುತ್ತಾರಾ? ಅಂತಾ ಜ್ಯೂರಿಗಳು ಮತ್ತು ಜಡ್ಜ್ ಸೇರಿದಂತೆ ವಿಶೇಷ ಅತಿಥಿಗಳು ಕೂಡ ಶಾಕ್ ಆದರು!












Click it and Unblock the Notifications