Rithanya Vijay: ದುನಿಯಾ ವಿಜಯ್ ಪುತ್ರಿ ಹೆಸರು ಬದಲಿಸಿದ್ದೇಕೆ? ಎಲ್ಲರಿಗೂ ಇರುವ ಆ ಗೊಂದಲವೇನು?
ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರ ಮಕ್ಕಳು ಇದೀಗ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಪ್ರೇಮ್ ಪುತ್ರಿ ಹಾಗೂ ನಟಿ ಮಾಲಾಶ್ರೀ ಪುತ್ರಿ ಸಿನಿಮಾ ರಂಗಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಯಶಸ್ಸುಗಳಿಸಿದ್ದಾರೆ. ಇದೀಗ ಮತ್ತೋರ್ವ ನಟನ ಮಗಳು ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದು, ವಿಶೇಷವೆಂದರೆ ಹೆಸರು ಬದಲಿಸಿಕೊಂಡೇ ನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ನಟ ದುನಿಯಾ ವಿಜಯ್ ಮಗಳು ಮೋನಿಕಾ ಸ್ಯಾಂಡಲ್ವುಡ್ಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಂದೆಯ ಚಿತ್ರದ ಮೂಲಕವೇ ಮೋನಿಕಾ ಚಿತ್ರರಂಗ ಪ್ರವೇಶಿಸುತ್ತಿದ್ದು, ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ ಮೋನಿಕಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಪುತ್ರಿ ಮೋನಿಕಾ ಇದೀಗ ರಿತನ್ಯ ವಿಜಯ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬರುವಾಗ ಹೆಸರು ಬದಲಿಸಿಕೊಳ್ಳುವುದು ಕನ್ನಡ ಚಿತ್ರರಂಗದಲ್ಲಿ ಹೆಳೆಯ ಸಂಪ್ರದಾಯ. ಅನೇಕ ನಟ ದಿಗ್ಗಜರು ಸಹ ಹೆಸರು ಬದಲಿಸಿಕೊಂಡಿದ್ದರು. ನಟಿಯರೂ ಕೂಡ ಹೆಸರು ಬದಲಿಸಿಕೊಂಡು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದರು. ಅಷ್ಟೇ ಯಾಕೆ ಇತ್ತೀಚಿಗೆ ಕಾಟೇರ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ನಟಿ ಮಾಲಾಶ್ರೀ ರಾಮ್ ಪುತ್ರಿ ಆರಾಧನಾ ಕೂಡ ಹಳೆಯ ಹೆಸರು ಬದಲಿಸಿಕೊಂಡಿದ್ದರು. ಅದೇ ರೀತಿ ಈಗ ದುನಿಯಾ ವಿಜಯ್ ಪುತ್ರಿ ಮೋನಿಕಾ ಕೂಡ ಹೆಸರು ಬದಲಿಸಿಕೊಂಡಿದ್ದಾರೆ.
ಮೋನಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಒಂದು ಇಂಟ್ರಸ್ಟಿಂಗ್ ವಿಚಾರವಿದೆ. ಇದಕ್ಕೆ ತಂಗಿ ಹಾಗೂ ಅವರ ಹೆಸರುಗಳ ನಡುವೆ ಇದ್ದ ಗೊಂದಲವೇ ಕಾರಣವಾಗಿದೆ. ಈ ಬಗ್ಗೆ ಸ್ವತಃ ರಿತನ್ಯ ಮಾತನಾಡಿದ್ದು, ಹೆಸರು ಬದಲಿಸಿದ್ಯಾಕೆ ಎನ್ನುವುರ ಬಗ್ಗೆ ವಿವರಣೆ ನೀಡಿದ್ದಾರೆ.

'ವಿ.ಕೆ 29' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ರಿತನ್ಯ, ನಾನು ಮೋನಿಕಾ..ತಂಗಿ ಮೋನಿಷಾ, ಈ ಹೆಸರುಗಳ ಬಗ್ಗೆ ಎಲ್ಲರಿಗೂ ಒಂದು ಗೊಂದಲ. ನನಗೆ ಮೋನಿಷಾ ಅಂತಾ ಕರೆಯುತ್ತಾರೆ, ಅವಳಿಗೆ ಮೋನಿಕಾ ಅಂತಾ ಕರೆಯುತ್ತಾರೆ. ನನ್ನ ಕೆಲವೊಂದಿಷ್ಟು ವಿಡಿಯೋಗಳಿಗೆ ಅವಳ ಹೆಸರನ್ನು ಹಾಕಲಾಗಿತ್ತು. ಹೀಗಾಗಿ ಆ ಗೊಂದಲ ಬೇಡ, ಒಂದು ಕ್ಯಾರಿಟಿ ಇರಲಿ ಎನ್ನುವ ಕಾರಣಕ್ಕೆ ನಾವು ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದೇವೆ' ಎಂದು ಹೆಸರಿನ ಹಿಂದಿನ ಗೊಂದಲ ಹಾಗೂ ಹೆಸರು ಬದಲಿಸಿಕೊಂಡ ಕಾರಣವನ್ನು ವಿವರಿಸಿದ್ದಾರೆ.
ಇನ್ನು 'ಕಾಟೇರ' ಚಿತ್ರದ ಬರಹಗಾರ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 'ವಿ.ಕೆ 29' ಚಿತ್ರದ ಮುಹೂರ್ತ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
-
ಮುಖ್ಯಮಂತ್ರಿ ಸಿದ್ದರಾಮಯ್ಯ “ಕ್ಲಿಫ್ ಹ್ಯಾಂಗರ್” ಬಜೆಟ್ ಲೆಕ್ಕಾಚಾರ: ರಾಜಾರಾಂ ತಲ್ಲೂರು ಬರಹ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ












Click it and Unblock the Notifications