Sudha Rani: ನಟಿ ಸುಧಾರಾಣಿ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದೇಕೆ..?
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ ಖ್ಯಾತ ನಟಿ ಸುಧಾರಾಣಿ ಇದೀಗ ಕಿರುತೆರೆ ಮೂಲಕ ಮತ್ತೆ ಜನರಿಗೆ ಹತ್ತಿರವಾಗಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುಧಾರಾಣಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೀಗಿರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಒಂದಿಷ್ಟು ಕುತೂಹಲವಿದೆ. ಮುಖ್ಯವಾಗಿ ಅವರು ಮೊದಲ ಪತಿಯಿಂದ ಯಾಕೆ ವಿಚ್ಛೇದನ ಪಡೆದರು ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.
ಈ ಪ್ರಶ್ನೆಗೆ ಸ್ವತಃ ಸುಧಾರಾಣಿ ಅವರೇ ಉತ್ತರಿಸಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬಂದ ಕಾರಣ ಅಮ್ಮ ಮೊದಲೇ ಹೇಳಿದ್ದರು, 20-22 ವರ್ಷ ಅಷ್ಟೇ ಸಿನಿಮಾ. ಆಮೇಲೆ ಸಿನಿಮಾ ಬೇಡ ಅಂತಾ. ಬಳಿಕ ಲೈಫ್ ಅಲ್ಲಿ ಸೆಟ್ಲ್ ಆಗಬೇಕು ಎನ್ನುತ್ತಿದ್ದರು. ಅವರ ಆಗಿನ ಆಲೋಚನೆಯಂತೆ ನೋಡಿ ಮದುವೆ ಮಾಡಿದರು.

ಆರಂಭದಲ್ಲಿ ಬೇರೆ ದೇಶಕ್ಕೆ ಹೋಗಿ ಬದುಕುವುದು ಕಷ್ಟ ಆಯ್ತು. ಯಾಕೆಂದರೆ ಇಲ್ಲಿದ್ದಾಗ ತುಂಬಾ ಪ್ರೊಟೆಕ್ಟಿವ್ ಆಗಿದ್ದೆ. ಚಿಕ್ಕವಳು ಅಂತಾ ಎಲ್ಲಿಗೂ ಕಳುಹಿಸುತ್ತರಲಿಲ್ಲ. ಏನು ವ್ಯವಹಾರ, ಬ್ಯಾಂಕ್ ಏನೂ ಅಂದರೆ ಏನೂ ಗೊತ್ತಿರಲಿಲ್ಲ. ಶೂಟಿಂಗ್, ಮನೆ ಇಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಷ್ಟ ಆಯ್ತು. ಬೇಗ ಕಲಿತುಕೊಂಡೆ. ನಾನೊಬ್ಬಳೇ ಎಲ್ಲಾ ಕಡೆ ಓಡಾಡಿ ನನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಅದು ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ. ಬದುಕಿನಲ್ಲಿ ಮತ್ತೊಂದು ಮುಖ ತೆರೆದುಕೊಂಡಿತು ಎಂದು ಹೇಳಿದರು.
ನನ್ನ ಕೌಟುಂಬಿಕ ಜೀವನದಲ್ಲಿ ಕಷ್ಟ ಬಂದಾಗ ನನಗೆ ಧೈರ್ಯ ತುಂಬಲು ನಾನು ಮಾಡಿದ ಪಾತ್ರಗಳೇ ಸಹಕಾರಿ ಆಯಿತು ಅನಿಸುತ್ತದೆ. ನನಗೆ ಅವುಗಳೇ ಧೈರ್ಯ ತುಂಬಿದ್ದವು ಅನಿಸುತ್ತದೆ. ನಾನು ಏಕ್ಧಮ್ ಏನನ್ನೂ ಬಿಡೋಕೆ ಹೋಗಲಿಲ್ಲ. ಸರಿಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ. ಫ್ಯಾಮಿಲಿ ಕೂಡ ಮಧ್ಯ ಬಂದರೂ ಆದರೂ ಆಗಲಿಲ್ಲ. ಸಾಧ್ಯವಾಗುವುದೇ ಇಲ್ಲ ಎಂದಾಗ ಸುಮ್ಮನೆ ಅದನ್ನು ಹಿಡಿದು ಜಗ್ಗಾಡುವುದರಲ್ಲಿ ಅರ್ಥ ಇಲ್ಲ ಎಂದಾಗ ಹೊರ ಬರಬೇಕು ಎಂದುಕೊಂಡೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದರು.

ಒಂದು ಪೀಕ್ಗೆ ಹೋದ ಮೇಲೆ ಏನು ಮಾಡೋಕೆ ಆಗೊಲ್ಲ. ಆ ವ್ಯಕ್ತಿಗೆ ದ್ವೇಷ ಏನೋ ಗೊತ್ತಿಲ್ಲ. ಮಾನಸಿಕ ಸಮಸ್ಯೆ ಇತ್ತು. ಆ ವ್ಯಕ್ತಿಗೆ ಕೆಲ ಸಮಸ್ಯೆಗಳಿತ್ತು. ಅದನ್ನು ಒಪ್ಪಲು ಯಾರು ರೆಡಿ ಇರಲಿಲ್ಲ. ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅಂತ ಆ ಕಡೆಯಿಂದ ಯಾರಿಗೂ ಅನ್ನಿಸಲಿಲ್ಲ. ಆರಂಭದಲ್ಲಿ ನಾನು ಸಾಧ್ಯವಾದಷ್ಟು ಸಹಿಸಿಕೊಂಡೆ. ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು. ಆದರೆ ಒಂದು ಪಾಯಿಂಟ್ ದಾಟಿದ ಮೇಲೆ ನನ್ನ ಜೀವನಕ್ಕೂ ತೊಂದರೆ ಆಗುತ್ತದೆ ಅಂತಾ ಗೊತ್ತಾದಾಗ ನಾನು ಹೊರಗಡೆ ಬಂದೆ ಎಂದರು.
ಡಿವೋರ್ಸ್ ತೆಗೆದುಕೊಂಡು ಬರುವಾಗ ಭಯ ಇತ್ತು. ಚಿಕ್ಕ ವಯಸ್ಸು ನನ್ನದು. ಇಷ್ಟು ಬೇಗ ಡಿವೋರ್ಸ್ ಅಂದಾಗ ಭಯ, ಆತಂಕ ಇತ್ತು. ಪೀಕ್ ಅಲ್ಲಿ ಇದ್ದಾಗ ಇಂಡಸ್ಟ್ರಿ ಬಿಟ್ಟೆ, ನನ್ನ ವಿದ್ಯಾಭ್ಯಾಸ ಮುಗಿದಿರಲಿಲ್ಲ ಜೊತೆಗೆ ಡಿವೋರ್ಸ್. ಎಲ್ಲವೂ ಗೊಂದಲ ಇತ್ತು. ಭಯ ಇತ್ತು. ಆದರೆ ಏನು ಸಾಧ್ಯವಾಗಲ್ಲ ಎಂದಾಗ ಎಲ್ಲವನ್ನೂ ಎದುರಿಸಬೇಕು. ಸಮಾಜ ಮಾತನಾಡುತ್ತದೆ. ಯಾಕೆಂದರೆ ಅವರಿಗೆ ಒಳಗೆ ಏನಾಗಿದೆ ಎನ್ನುವುದು ಗೊತ್ತಿರುವುದಿಲ್ಲ. ಹೀಗಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕಿತ್ತು ಎಂದು ಹೇಳಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications