₹150 ಕೋಟಿ ಸಂಭಾವನೆ ಪಡೆಯೋ ನಟ ರಜನಿಕಾಂತ್ಗೆ ₹2 ಕೊಟ್ಟು ಹೀಯಾಳಿಸಿದ್ದು ಯಾರು?
ಕನ್ನಡಿಗ ರಜನಿಕಾಂತ್ ಅವರು ತಮಿಳು ಸಿನಿಮಾಗಳಲ್ಲಿ ಮಿಂಚುತ್ತಾ ಸೂಪರ್ ಸ್ಟಾರ್ ಆಗಿ ಬೆಳೆದವರು. ಅವರಿಗೆ 74 ವರ್ಷ ವಯಸ್ಸಾಗಿದ್ದರೂ ಈಗಿನ ಹೀರೋಗಳನ್ನ ಸೈಡಿಗಿಟ್ಟು ಹಿಟ್ ಸಿನಿಮಾಗಳನ್ನ ಕೊಡುತ್ತಿದ್ದಾರೆ. ಇನ್ನು ಸಂಭಾವನೆಯಲ್ಲೂ ರಜನಿಕಾಂತ್ ಅವರ ಲೆವೆಲ್ ಬೇರೆಯೇ ಇದೆ. ಈಗ ರಿಲೀಸ್ ಆಗಲಿರುವ "ಕೂಲಿ" ಸಿನಿಮಾಗೆ ಬರೋಬ್ಬರಿ ₹150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಒಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುವ ಅವರು ಕೋಟಿಗಳ ಒಡೆಯ. ಇಂತಹ ರಜನಿಕಾಂತ್ಗೆ ಸ್ನೇಹಿತನೊಬ್ಬ ಎರಡು ರೂಪಾಯಿ ಕೈಯಲ್ಲಿಟ್ಟು ಅವಮಾನಿಸಿದ್ದ ಘಟನೆಯನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಸದ್ಯ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ನಿರ್ದೇಶನದ ಬಹುತಾರಾಗಣದ ಕೂಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇದರಲ್ಲಿ ನಟ ರಜನಿಕಾಂತ್, ಉಪೇಂದ್ರ, ರಚಿತಾ ರಾಮ್, ನಾಗಾರ್ಜುನ್, ಅಮೀರ್ ಖಾನ್ ಸೇರಿ ಹಲವು ಸ್ಟಾರ್ ನಟರೂ ಇದ್ದಾರೆ. ಇನ್ನು ರಜನಿಕಾಂತ್ ಅವರು ಈ ವಯಸ್ಸಿನಲ್ಲೂ ತಮ್ಮ ಸಿನಿಮಾಗಳ ಮೂಲಕ ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುವ ನಟನಿಗೆ ತನ್ನ ಸ್ನೇಹಿತನೇ ಎರಡಯ ರೂಪಾಯಿ ಕೈಗಿಟ್ಟು ಹೀಯಾಳಿಸಿದ್ದನ್ನು ಕೂಲಿ ಸಿನಿಮಾ ಕಾರ್ಯಕ್ರಮದ ವೇಳೆ ರಜಿನಿ ಬಹಿರಂಗಪಡಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಕೂಲಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರು ಈ ಘಟನೆಯನ್ನು ನೆನೆದಿದ್ದಾರೆ. ಅಲ್ಲದೆ ಆರಂಭದಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜಿನಿಕಾಂತ್ ಅವರು ಕೂಲಿ ಕೆಲಸ ಮಾಡಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ತಮಗೆ ಆಗ ನೋವಿನ ಅನುಭವವನ್ನು ಹೇಳಿಕೊಂಡಿದ್ದಾರೆ. 'ಕೂಲಿ ಕೆಲಸ ಮಾಡುವಾಗ ಸ್ನೇಹಿತನಿಂದ ಅವಮಾನಕ್ಕೆ ಒಳಗಾದೆ' ಎಂದು ಹೇಳಿದ್ದಾರೆ.
ಜೀವನದಲ್ಲಿ ಮೊದಲ ಸಲ ಕಣ್ಣೀರು ಹಾಕಿದೆ
́'ನಾನು ಕೂಲಿಯಾಗಿದ್ದಾಗ ನನ್ನನ್ನು ಹಲವು ಬಾರಿ ಅಪಹಾಸ್ಯ, ಅವಮಾನ ಮಾಡಿದ್ದರು. ಒಂದು ದಿನ, ಒಬ್ಬ ವ್ಯಕ್ತಿ ತನ್ನ ಟೆಂಪೋದಲ್ಲಿ ವಸ್ತುಗಳನ್ನು ಹೊತ್ತುಕೊಂಡು ಹೋಗಲು ನನ್ನನ್ನು ಕೇಳಿದ. ಅದಕ್ಕಾಗಿ ನನಗೆ ಆತ 2 ರೂಪಾಯಿಗಳನ್ನು ಕೊಟ್ಟ. ಮೊದಲಿಗೆ ಆ ವ್ಯಕ್ತಿ ಯಾರೆಂದು ನನಗೆ ತಿಳಿಯಲಿಲ್ಲ. ಆದರೆ ಅವನ ಧ್ವನಿ ನನಗೆ ಪರಿಚಿತವಾಗಿತ್ತು. ಆ ಮೇಲೆ ಆತ ನನ್ನ ಕಾಲೇಜು ಸ್ನೇಹಿತ ಎಂದು ತಿಳಿಯಿತು. ಆಗ ಅವನು ನನ್ನನ್ನು ಅಪಹಾಸ್ಯ ಮಾಡಿದ. ಕಾಲೇಜಿನಲ್ಲಿರುವಾಗ ನೀನು ಎಷ್ಟು ದುರಹಂಕಾರಿಯಾಗಿದ್ದೆ? ಈಗ ಕೂಲಿ ಕೆಲಸ ಮಾಡುತ್ತಿದ್ದೀಯ ಎಂದು ನನ್ನ ಕೆಲಸವನ್ನು ಅಣಕಿಸಿದ. ಆಗ ತುಂಬಾ ನೋವಾಗಿ ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಕಣ್ಣೀರಿಟ್ಟಿದ್ದೆ' ಎಂದು ನಟ ರಜನಿಕಾಂತ್ ನೆನೆದಿದ್ದಾರೆ.

ಈಗ ರಜನಿಕಾಂತ್ ಅವರ ಸಿನಿಮಾ ಟೈಟಲ್ ಕೂಡ "ಕೂಲಿ" ಆಗಿರುವುದರಿಂದ ತಮ್ಮ ಜೀವನದಲ್ಲಿ ಕೂಲಿ ಕೆಲಸ ಮಾಡಿದ್ದ ದಿನಗಳನ್ನು ಅವರು ನೆನೆದಿದ್ದಾರೆ. ಕೂಲಿ ಚಿತ್ರದ ನಿಜವಾದ ನಾಯಕ ಬೇರೆ ಯಾರೂ ಅಲ್ಲ, ನಿರ್ದೇಶಕ ಲೋಕೇಶ್ ಕನಕರಾಜ್ ಎಂದು ಕರೆದಿದ್ದಾರೆ. ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಅದ್ಭುತ ತಾರಾಗಣವನ್ನು ಒಗ್ಗೂಡಿಸಿ ಸಿನಿಮಾರಂಗದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ ಎಂದು ರಜನಿ ಕೊಂಡಾಡಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications