ರಕ್ಷಿತ್ ಶೆಟ್ಟಿ ಫ್ಯಾನ್ಸ್ ಈಗಲೂ ನನಗೆ ಅತ್ತಿಗೆ ಅಂತಾರೆ- ನಟಿ ಶರಣ್ಯ ಶೆಟ್ಟಿ
ಬೆಂಗಳೂರು, ಆಗಸ್ಟ್ 20: ಕೆಲ ದಿನಗಳ ಹಿಂದೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿ ಶರಣ್ಯ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಸ್ವತಃ ನಟಿ ಶರಣ್ಯ ಶೆಟ್ಟಿ ಮಾತನಾಡಿದ್ದು, ರಕ್ಷಿತ್ ಶೆಟ್ಟಿ ಜೊತೆ ನನ್ನ ಹೆಸರು ಕೇಳಿ ನನ್ನ ಅಪ್ಪ-ಅಮ್ಮ ನಗುತ್ತಿದ್ದರು. ನಮ್ಮಿಬ್ಬರಿಗೂ ಕಾಂಟ್ಯಾಕ್ಟ್ಯೇ ಇಲ್ಲ. ಅದು ಅವರಿಗೂ ಗೊತ್ತು. ಯಾವುದೋ ಒಂದು ಸೈಮಾ ಇವೆಂಟ್ಗೆ ಹೋದೆವು. ಜೊತೆಯಲ್ಲಿ ಫೋಟೋ ತೆಗೆದುಕೊಂಡೆವು, ಅವುಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ಮರು ದಿನ ನೋಡಿದಾಗ ಮದುವೆ ಅಂತಾ ಸುದ್ದಿ ಹರಡಿತ್ತು ಎಂದು ಹೇಳಿದರು.
ಜೀ ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಶರಣ್ಯ ಶೆಟ್ಟಿ, ಮದುವೆ ಎನ್ನುವ ಗಾಸಿಪ್ಗಳನ್ನು ನೋಡಿದಾಗ ಇದ್ಯಾವುದಿದು ಅಂತಾ ಅಂದುಕೊಂಡೆ. ಜೊತೆಯಲ್ಲಿ ಹೋ ಗಾಸಿಪ್ ಅಂದರೆ ಇದು, ಇಂತಹ ಸುದ್ದಿಗಳು ಅಂತಾ ಅಂದುಕೊಂಡೆ. ಮೊದಲ ಬಾರಿ ನನ್ನ ಬಗ್ಗೆ ಇಂತಹ ಗಾಸಿಪ್ ಹುಟ್ಟುಕೊಂಡಿದ್ದು. ನಿಜವಾಗಿ ರಕ್ಷಿತ್ ಶೆಟ್ಟಿ ಪಾಪ, ಅವರು ಯಾವ ಹುಡುಗಿ ಜೊತೆ ಫೋಟೋ ಹಾಕಿದರೂ ಅವರ ಜೊತೆ ಮದುವೆ ಮಾಡಿಸಿ ಬಿಡುತ್ತಾರೆ ಎಂದರು.

ನನಗೆ ಈಗಲೂ ಅತ್ತಿಗೆ ಅತ್ತಿಗೆ ಅಂತಾ ಕಮೆಂಟ್ ಮಾಡುತ್ತಾರೆ. ಪಾಪ ಅವರಿಗೆ ವಿಚಾರ ಗೊತ್ತಿಲ್ಲವೇನೋ ಅನಿಸುತ್ತದೆ. ಈ ಸುದ್ದಿ ಎಲ್ಲಾ ಕಡೆ ಹರಿದಾಡಿದಾಗ ನಮ್ಮ ಮನೆಯಲ್ಲಿ ಸೀರಿಯಸ್ ಆಗಿ ತಗೊಂಡಿಲ್ಲ. ಏನು ಈ ರೀತಿಯಲ್ಲಿ ಬರುತ್ತಿದೆ ಅಂತಾ ಜೋರಾಗಿ ನಗಾಡಿದ್ರು ಅಷ್ಟೆ. ಜನಾನೇ ಸೀರಿಯಸ್ ಆಗಿ ತಗೊಂಡಿದ್ದರು ಅಷ್ಟೇ. ನಾನು ಸೀರಿಯಸ್ ಆಗಿ ಟೆನ್ಷನ್ ಆಗಿ ಎಲ್ಲಾ ತಗೊಂಡಿಲ್ಲ. ಬರೀ ತಮಾಷೆಯಾಗಿ ತೆಗೆದುಕೊಂಡೆ ಎಂದು ಹೇಳಿದರು.
ನನ್ನ ಪ್ರಕಾರ ಕೆಟ್ಟ ಕಮೆಂಟ್ ಮಾಡುವವರಿಗೆ ಜೀವನದಲ್ಲಿ ಒತ್ತಡ ಜಾಸ್ತಿ ಆಗಿದೆ. ಏನೋ ಒಂದು ಒತ್ತಡವಾದಾಗ ಬಂದು ನಮಗೆ ಕಮೆಂಟ್ ಮಾಡುತ್ತಾರೆ. ಅವರೇ ಮತ್ತೆ ಮೆಸೇಜ್ಗೆ ಬಂದು ನಾನು ನಿಮ್ಮ ಫ್ಯಾನ್ ಅನ್ನುತ್ತಾರೆ. ಸೀರೆ ಉಟ್ಟರೆ ವಾವ್ ಸೂಪರ್ ಅನ್ನುತ್ತಾರೆ. ಅದೇ ಸ್ವಲ್ಪ ವೆಸ್ಟರ್ನ್ ಡ್ರೆಸ್ ಹಾಕಿಕೊಂಡರೆ ಮತ್ತೆ ಕಮೆಂಟ್ ಮಾಡುತ್ತಾರೆ ಎಂದರು.

ಅವರ ಒತ್ತಡ ಕಡಿಮೆಯಾಗಲು ನನ್ನ ಕಮೆಂಟ್ ಬಾಕ್ಸ್ ಉಪಯೋಗ ಆಗುತ್ತಿದೆ ಅಂದರೆ ಮಾಡಿಕೊಳ್ಳಲಿ. ಅದರಿಂದ ಅವರೆಲ್ಲಾ ಖುಷಿಯಾಗಿದ್ರೆ ಇರಲಿ ಬಿಡಿ. ನನಗೇನೂ ಅದರಿಂದ ಪರಿಣಾಮ ಆಗಲ್ಲ. ಮೊದಮೊದಲು ಕಮೆಂಟ್ ಬಗ್ಗೆ ಎಲ್ಲಾ ತಲೆಕೆಡಿಸಿಕೊಳ್ಳುತ್ತಿದೆ. ಈಗ ಒಬ್ಬರೇ ಮೂರು ಕಡೆ ಬೇರೆ ಬೇರೆ ರೀತಿ ಕಮೆಂಟ್ ಮಾಡಿರುತ್ತಾರೆ. ಹೀಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಶರಣ್ಯ ಶೆಟ್ಟಿ ಹೇಳಿದ್ದಾರೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications