ದರ್ಶನ್ ಮಾಡಿದ್ದು ತಪ್ಪಾದರೆ.. ರೇಣುಕಾಸ್ವಾಮಿ ಮಾಡಿದ್ದು ಸರಿನಾ ಎಂದು ದರ್ಶನ್ ಬೆಂಬಲಕ್ಕೆ ನಿಂತ 'ತುತ್ತಾ ಮುತ್ತಾ' ನಟಿ ಕಸ್ತೂರಿ
ಬೆಂಗಳೂರು, ಜೂನ್. 17: ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವುದು ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಕೆಲವರು ಈ ವಿಷಯದಕ್ಕೆ ಪ್ರತಿಕ್ರಿಯೆ ನೀಡಲು ಕೂಡ ಮುಂದೆ ಬರುತ್ತಿಲ್ಲ. ನಟಿ ರಮ್ಯಾ, ಸುದೀಪ್, ಉಪೇಂದ್ರ ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಸ್ತೂರಿ ಶಂಕರ್ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ದರ್ಶನ್ ಬಂಧನ, ಪವಿತ್ರಾ ಗೌಡ ಜೊತೆಗಿನ ಸಂಬಂಧ, ರೇಣುಕಾಸ್ವಾಮಿಯ ಮೆಸೇಜ್ಗಳ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ರೇಣುಕಾಸ್ವಾಮಿ ಒಳ್ಳೆಯವನಲ್ಲ..
ಕನ್ನಡದ ಜಾಣ, ತುತ್ತಾ ಮುತ್ತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಕಸ್ತೂರಿ ಶಂಕರ್, ರೇಣುಕಾಸ್ವಾಮಿ ಒಳ್ಳೆಯವನಲ್ಲ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ಸರಿಯಲ್ಲ. ಆ ಹಕ್ಕು ಅವರಿಗೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಮಾಡಿದ್ದು, ತಪ್ಪು ಎಂದಾದರೆ ಈತ ಮಾಡಿದ್ದು ಏನು ಎಂದು ಕೇಳಿದ್ದಾರೆ.
"ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ದರ್ಶನ್ ಪವಿತ್ರಾ ಗೌಡ ಸಂಬಂಧದಲ್ಲಿದ್ದಾರೆ ಎಂದು ತೀರ್ಪು ನೀಡಿದ್ದಾರೆ. ಅದು ಅವರ ವೈಯಕ್ತಿಕ ಜೀವನ. ಸಾಮಾಜಿಕ ಜಾಲತಾಣಗಳಿಂದಾಗಿ ಪ್ರತಿಯೊಬ್ಬರ ವೈಯಕ್ತಿಕ ಜೀವನವೂ ನಮ್ಮ ಆಸ್ತಿ ಎನ್ನುವಂತಾಗಿದೆ. ನಮ್ಮ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲ್ಲ. ಇನ್ನೋಬ್ಬರ ಜೀವನ ನೋಡಲು ಹೋಗುತ್ತಾರೆ" ಎಂದಿದ್ದಾರೆ.
"ಹಿಂಸೆಯನ್ನು ಎಂದಿಗೂ ಪ್ರೋತ್ಸಾಹಿಸಬಾರದು. ಆದರೆ ಸತ್ತ ವ್ಯಕ್ತಿಯೂ ಒಳ್ಳೆಯವನಲ್ಲ. ಪವಿತ್ರಾಗೆ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾನೆ. ಅವನಿಗೂ ಇದೆಲ್ಲಾ ಏಕೆ ಬೇಕು? ಅವನು ಅಂತಹ ಸಂದೇಶಗಳನ್ನು ಏಕೆ ಕಳುಹಿಸುತ್ತಾನೆ..?" ಎಂದು ಕಿಡಿಕಾರಿದ್ದಾರೆ. ಪವಿತ್ರಾ ಗೌಡ ಜೊತೆ ದರ್ಶನ್ ಸಂಬಂಧ ಇಟ್ಟುಕೊಂಡಿದ್ದು ತಪ್ಪು ಎಂದು ರೇಣುಕಾ ಸ್ವಾಮಿ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ.
Bere bhashe avrig iro astu maturity Nam kannada davrige illa 🥲
— 𝙈𝙖𝙉𝙪_(𝘿𝙖𝙘𝙘𝙝𝙪𓃰)𝑫𝒆𝒗𝒊𝒍𝑻𝒉𝒆𝑯𝒆𝒓𝒐 (@Manu_Dacchu45) June 16, 2024
Obba kaamukanige support madkondu idaare #DBoss #BossOfSandalwood #Darshan @dasadarshan pic.twitter.com/HCrvORNTPo
ಸೆಲಬ್ರಿಟಿಗಳ ಪರ್ಸನಲ್ ಲೈಫ್ನಲ್ಲಿ ಮೂಗು ತೂರಿಸುವ ಹಕ್ಕಿಲ್ಲ
"ದರ್ಶನ್ ಪರ್ಸನಲ್ ಲೈಫ್ ನಲ್ಲಿ ಏನಾದರೂ ಸಮಸ್ಯೆಯಾದರೆ ಮೊದಲ ಪತ್ನಿಯೇ ನೋಡಿಕೊಳ್ಳುತ್ತಾರೆ. ಪೋಲೀಸ್, ಕೋರ್ಟ್ ಹೀಗೆ ಎಷ್ಟೊಂದು ಆಪ್ಷನ್ ಇದೆ. ಅದೆಲ್ಲ ಅವರ ವೈಯಕ್ತಿಕ ವಿಚಾರ. ಆದರೆ ಸೆಲೆಬ್ರಿಟಿಗೆ ಕೆಟ್ಟ ಸಂದೇಶ ಮತ್ತು ಕಿರುಕುಳ ನೀಡುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದವರು ಯಾರು..? ದರ್ಶನ್ ವಿಚಾರದಲ್ಲಿ ಇದು ತುಂಬಾ ದೂರ ಹೋಯಿತು" ಎಂದು ನಟಿ ಕಸ್ತೂರಿ ಹೇಳಿದ್ದಾರೆ.
"ಇದರಿಂದ ದರ್ಶನ್ ತುಂಬಾ ಶಾರ್ಟ್ ಟೆಂಪರ್. ಅವರು ಮತ್ತು ಅವರ ಅಭಿಮಾನಿಗಳು ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ, ಆತ ಮೃತಪಟ್ಟಿದ್ದಾನೆ. ಹಾಗಾಗಿ ಪರಿಸ್ಥಿತಿ ಕೈ ಮೀರಿತು. ಪ್ರತಿಯೊಂದಕ್ಕೂ ಒಂದು ಮಿತಿ ಇರಬೇಕು" ಎಂದು ಕಸ್ತೂರಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು, ತಂತ್ರಜ್ಞಾನದ ಅಪಾಯಗಳ ಬಗ್ಗೆ ಮಾತನಾಡಿದ ನಟಿ ಕಸ್ತೂರಿ, ಎಐ ಬಳಸಿ ರಶ್ಮಿಕಾ ಮಂದಣ್ಣ ಅವರ ಫೋಟೋಗಳನ್ನು ಅಸಭ್ಯವಾಗಿ ಮಾಡಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ರಾಜಕಾರಣಿ ಅಥವಾ ಉದ್ಯಮಿಗೆ ಹೀಗೆ ಮಾಡಿದರೆ, ಮಾಡಿದವರಿಗೆ ಏನಾಯಿತು ಎಂದು ಕೂಡ ತಿಳಿಯುವುದಿಲ್ಲ. ಆದರೆ, ಸಿನಿಮಾ ತಾರೆಯರಿಗೆ ಈ ರೀತಿ ತೊಂದರೆ ಕೊಟ್ಟರೆ ಬಾಯಿ ಮುಚ್ಚಿಕೊಳ್ಳಬೇಕು. ಇದು ನ್ಯಾಯವೇ? ನೀವು ಹೋಗಿ ಜನರನ್ನು ಹೊಡೆಯಿರಿ ಎಂದು ನಾನು ಹೇಳುತ್ತಿಲ್ಲ. ಆದರೆ ನಾವು ಎಷ್ಟು ಸಹಿಸಿಕೊಳ್ಳಬಲ್ಲೆವು?" ಎಂದಿದ್ದಾರೆ.
"ಪ್ರತಿಯೊಬ್ಬರೂ ಒಂದು ಹಂತದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಯಾರದೋ ಮನೆಗೆ ಹೋದರೆ ಏನಾದ್ರೂ ತೊಂದರೆ ಆಗುತ್ತೆ. ವೈಯಕ್ತಿಕ ಜೀವನದಲ್ಲಿ ಒಬ್ಬ ವ್ಯಕ್ತಿಯು ಸಂಬಂಧ ಹೊಂದಿರುವುದು ತಪ್ಪಲ್ಲ. ಆದರೆ, ಅದು ಸರಿ ಅಥವಾ ತಪ್ಪು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ" ಎಂದು ನಟ ದರ್ಶನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.












Click it and Unblock the Notifications