'ಜೋಗಿ' ಶೂಟಿಂಗ್ ವೇಳೆ ಶಿವಣ್ಣನಿಗೆ ಪೊಲೀಸ್ ಒದೆಯುವ ಸೀನ್: ಆ ದಿನ ನಡೆದಿದ್ದೇನು?
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟಿಸಿದ್ದ ಜೋಗಿ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶಿಸಿದ್ದ ಈ ಸಿನಿಮಾ ಶಿವಣ್ಣನಿಗೆ ದೊಡ್ಡ ಸ್ಟಾರ್ಡಮ್ ತಂದುಕೊಟ್ಟಿತ್ತು. ಇಂದಿಗೂ ಶಿವಣ್ಣನ ಟಾಪ್ ಸಿನಿಮಾಗಳಲ್ಲಿ ಜೋಗಿ ಕೂಡ ಸ್ಥಾನ ಪಡೆದುಕೊಂಡಿದೆ. ರೌಡಿಸಂ, ಅಮ್ಮನ ಪ್ರೀತಿಯ ಕುರಿತು ಹೆಣೆದಿದ್ದ ಈ ಸಿನಿಮಾ ಕಥೆಗೆ ಪ್ರೇಕ್ಷಕರು ಥಿಯೇಟರ್ ಕಣ್ಣೀರು ಸುರಿಸಿದ್ದರು. ಇನ್ನು ಈ ಸಿನಿಮಾ ಶೂಟಿಂಗ್ ವೇಳೆ ನಡೆದಿದ್ದ ಕೆಲ ಅಚ್ಚರಿ ವಿಚಾರಗಳನ್ನು ಪೋಷಕ ನಟರಾದ ಮೈಕೋ ನಾಗರಾಜ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಶೂಟಿಂಗ್ ವೇಳೆ ನಡೆದ ಘಟನೆಯೊಂದನ್ನು ಅವರು ಬಿಚ್ಚಿಟ್ಟಿದ್ದರು.
'ಜೋಗಿ' ಸಿನಿಮಾ ಶೂಟಿಂಗ್ ವೇಳೆ ಪೊಲೀಸ್ ಪಾತ್ರದಲ್ಲಿದ್ದವರು ಶಿವರಾಜ್ ಕುಮಾರ್ ಅವರನ್ನು ಹೊಡೆಯುವ ಸೀನ್ ಇತ್ತು. ಅದರಲ್ಲಿ ನನಗೆ ಚುಚ್ಚಿದ್ದ ಸೀನ್ ಇತ್ತು. ಶಿವಣ್ಣ ಬಂದು ನನ್ನ ಕಾಪಾಡಬೇಕಿತ್ತು. ಶಿವಣ್ಣನೇ ನನ್ನ ಚುಚ್ಚಿದ್ದು ಎಂಬ ಅಪಾರ್ಥದಲ್ಲಿ ಪೊಲೀಸರು ಅವರನ್ನು ಒದೆಯುವ ಸೀನ್ ಇತ್ತು. ಆದರೆ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದವರು ಅದಕ್ಕೆ ಒಪ್ಪಲೇ ಇಲ್ಲ. ಶಿವಣ್ಣ ಅವರಂತಹ ಕಲಾವಿದರಿಗೆ ನಾವು ಕಾಲಿನಿಂದ ತುಳಿಬೇಕು ಅಂದ್ರೆ ಆಗಲ್ಲ, ಥಿಯೇಟರ್ನಲ್ಲಿ ಜನ ಇದನ್ನ ನೋಡಿದ್ರೆ ಏನ್ ಮಾಡ್ತಾರೋ ಅಂತ ಭಯಪಟ್ಟಿದ್ರು' ಎಂದು ವಿವರಿಸಿದ್ದರು.

'ಆದರೆ ಶಿವರಾಜ್ಕುಮಾರ್ ಅವರೇ ನೀನು ಕರೆಕ್ಟಾಗಿ ತುಳಿದ್ರೆ, ಮಾತ್ರ ಈ ಸೀನ್ ಸರಿಯಾಗಿ ಬರುತ್ತೆ ಅಂತ ಹೇಳ್ತಾರೆ. ಕೇಳಿ ಕೇಳಿ ಅವರಿಂದ ಶಿವಣ್ಣ ಹೊಡೆಸಿಕೊಳ್ತಾರೆ. ಬೇರೆ ಕಲಾವಿದರೂ ಅಂತಹ ದೃಶ್ಯ ಒಪ್ಪುತ್ತಿರಲಿಲ್ಲ. ಆದರೆ ಶಿವಣ್ಣ ಏನೂ ಅಂದುಕೊಳ್ಳದೆ ಆ ರೀತಿ ನಡೆದುಕೊಂಡರು. ಬೇರೆ ನಟರಾಗಿದ್ದರೆ ಗ್ರಾಫಿಕ್ ಮಾಡಿಸಿ ಅಂತಿದ್ರುʼ ಎಂದು ಶಿವಣ್ಣನ ಶ್ರದ್ಧೆ ಕೊಂಡಾಡಿದ್ದರು.
'ಬಿಸಿಲಲ್ಲೇ ಗಂಟೆಗಟ್ಟಲೆ ನಿಂತಿದ್ರು'
'ಮುಂದಿನ ಸೀನ್ನಲ್ಲಿ ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ. ಬಿಸಿಲು ಜಾಸ್ತಿ ಇತ್ತು. ಆಗ ಅಸಿಸ್ಟೆಂಟ್ ಬಂದು ಶಿವಣ್ಣನಿಗೆ ಛತ್ರಿ ಹಿಡಿದಿದ್ರು. ನಾನು ಕೂಡ ಅಲ್ಲೇ ಇದ್ದೆ. ಆಗ ಶಿವಣ್ಣ ಎತ್ತೋ ಛತ್ರಿ ಅಂದ್ರು, ಕೊಟ್ಟರೆ ಇಬ್ಬರಿಗೂ ಛತ್ರಿ ಕೊಡು, ಇಲ್ಲ ಬೇಡ ಅಂದ್ರು. ಆಗ ಅವರ ಬಗ್ಗೆ ಇದ್ದ ಭಯ ಸ್ವಲ್ಪ ಕಡಿಮೆ ಆಯ್ತು. ಆ ಸೀನ್ಗಾಗಿ ಶಿವರಾಜ್ಕುಮಾರ್ ಅವರು ಒಂದೂವರೆ ಗಂಟೆ ಬಿಸಿಲಲ್ಲೇ ಇದ್ರು' ಎಂದು ಮೈಕೋ ಶಿವಣ್ಣನ ಸರಳತೆ ನೆನೆದಿದ್ದರು.
'ಆ ಸೀನ್ ತುಂಬಾ ಚೆನ್ನಾಗಿ ಬಂತು. ಶೂಟಿಂಗ್ ಆಗಬೇಕಾದ್ರೆ ನಮಗೆಲ್ಲ ಖುಷಿ ಆಗ್ತಿದೆ. ಶೂಟಿಂಗ್ ಕೂಡ ಬೇಗ ಮುಗೀತು. ಆವತ್ತು ಆರು ಗಂಟೆಗೆ ಇದ್ದ ಕಾಲ್ಶೀಟ್ನಲ್ಲಿ ಬ್ರೇಕ್ಗೆ ಮುಂಚೆನೇ ಎಲ್ಲ ಸೀನ್ ಮುಗೀತು. ಶಿವಣ್ಣ ಆಗ ಬಂದು ನನ್ನ ತಬ್ಬಿಕೊಂಡ್ರು. ಏನ್ ಸರ್ ಇಷ್ಟು ದಿನ ಎಲ್ಲಿದ್ರಿ ಅಂತ ಖುಷಿಯಿಂದ ಕೇಳಿದ್ರು' ಎಂದು ಮೈಕೊ ನಾಗರಾಜ್ ಜೋಗಿ ಸಿನಿಮಾದ ಶೂಟಿಂಗ್ ಅನುಭವವನ್ನು ಹೇಳಿಕೊಂಡಿದ್ದರು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications