Ramachari: ಗಂಡ ಚಾರಿ ಸಂಬಳದಲ್ಲಿ ಹೆಂಡತಿ ಚಾರು ಖರೀದಿ ಮಾಡಿದ್ದು ಏನ್ ಗೊತ್ತಾ?
ಚಾರು ಚಾರಿಯ ಸಖತ್ ಎಂಟ್ರಿಯೊಂದಿಗೆ ಆರಂಭದಲ್ಲೇ ಜನಮನ ಗೆದ್ದ ಧಾರವಾಹಿ ರಾಮಾಚಾರಿ. ಇಂದಿಗೂ ಕೂಡ ಅದೇ ಕುತೂಹಲಕಾರಿ ಸಂಗತಿಗಳೊಂದಿಗೆ ಧಾರವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ ಬೆಳೆದ ಚಾರು ಸದ್ಯ ಸಾಮಾನ್ಯ ಕುಟುಂಬದ ನಾರಾಯಣಾಚಾರ್ಯ ಮನೆಗೆ ಸೊಸೆಯಾಗಿ ತೆರಳಿದ್ದಾಳೆ. ನಿಧಾನವಾಗಿ ಗಂಡನಿಗೆ ಹತ್ತಿರವಾಗುತ್ತಿರುವ ಚಾರು ಸದ್ಯ ಮತ್ತೊಂದು ವಿಷಯಕ್ಕೆ ರಾಮಾಚಾರಿಯ ಮನಗೆದ್ದಿದ್ದಾಳೆ.
ತನ್ನ ಗಂಡನ ಮನೆಯ ಮನಸ್ಸುಗಳನ್ನು ಗೆಲ್ಲುವ ಪ್ರಯತ್ನದಲ್ಲಿರುವ ಚಾರುಗೆ ನೂರೆಂಟು ಸವಾಲುಗಳು ಎದುರಾಗುತ್ತಲೇ ಇವೆ. ಈ ಎಲ್ಲಾ ಸಮಸ್ಯೆಗಳ ನಡುವೆ ಪತಿ ರಾಮಾಚಾರಿಯ ಮನಸ್ಸು ಗೆಲ್ಲಲು ಕೊಂಚ ಮಟ್ಟಿಗೆ ಯಶಸ್ಸು ಕಾಣುತ್ತಿದ್ದಾಳೆ. ಶ್ರೀಮಂತರ ಮನೆಯಿಂದ ಬಂದ ಚಾರುಗೆ ಈವರೆಗೂ ಏನನ್ನೂ ತಂದು ಕೊಡದ ರಾಮಾಚಾರಿ ತನಗೆ ಬಂದ ಸಂಬಳದಲ್ಲಿ ಏನನ್ನಾದರೂ ಕೊಡಿಸಲು ಬಯಸುತ್ತಾನೆ.

ಇದಕ್ಕಾಗಿ ಜ್ಯೂವೆಲರಿ ಶಾಪ್ಗೆ ಚಾರುಲತಾಳನ್ನು ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಚಾರು ತುಂಬಾ ಸರಳ ಹಾಗೂ ಸುಂದರವಾದ ವಸ್ತು ತೆಗೆದುಕೊಳ್ಳುವ ಮೂಲಕ ರಾಮಾಚಾರಿಗೆ ಮತ್ತಷ್ಟು ಹತ್ತಿರವಾಗಿದ್ದಾಳೆ. ಅಷ್ಟಕ್ಕೂ ಚಾರು ಖರೀದಿಸಿದ ಆ ವಸ್ತು ಯಾವುದು ಗೊತ್ತಾ? ಅದನ್ನು ಹೇಳ್ತೀವಿ ನೋಡಿ.
ಬೆಳ್ಳಿಕಾಲುಂಗುರ ಖರೀದಿಸಿ ಚಾರುಲತ
ರಾಮಾಚಾರಿ ತನ್ನ ನಾಲ್ಕುವರೆ ಲಕ್ಷ ಸಂಬಳದಲ್ಲಿ ಚಾರುಲತಾಗೆ ಏನನ್ನಾದರೂ ಕೊಡಿಸಲು ಬಯಸುತ್ತಾನೆ. ಗೆಳೆಯ ಮುರಾರಿ ಕೊಟ್ಟ ಸಲಹೆಯಿಂದ ಚಾರುಲತಳನ್ನು ಆಭರಣ ಅಂಗಡಿಗೆ ಕರೆದುಕೊಂಡು ಹೋದ ಚಾರಿಗೆ ಚಾರು ಬಿಗ್ ಶಾಕ್ ಕೊಟ್ಟಿದ್ದಾಳೆ. ನಿಮಗೆ ಬೇಕಾದ ಒಡವೆ ಖರೀದಿಸಿ ಮೇಡಂ ಎಂದು ರಾಮಚಾರಿ ತನ್ನದೇ ಆದ ಸ್ಟೈಲ್ನಲ್ಲಿ ಹೇಳಿ ಸುಮ್ಮನೆ ನಿಲ್ಲುತ್ತಾನೆ. ಆಗ ಚಾರು ಅಂಗಡಿಯಲ್ಲಾ ಸುತ್ತು ಹಾಕಿ ಬೆಳ್ಳಿ ಕಾಲುಂಗುರವನ್ನು ತರುತ್ತಾಳೆ. ಇದನ್ನು ಕಂಡು ರಾಮಾಚಾರಿಗೆ ಆಶ್ಚರ್ಯ ಆಗುತ್ತೆ. ಇದನ್ನು ನೀರಿಕ್ಷೆ ಮಾಡದ ರಾಮಾಚಾರಿ ಶಾಕ್ ಆಗಿ ಪತ್ನಿ ಚಾರು ಕೆಲಸಕ್ಕೆ ಫಿದಾ ಆಗಿಬಿಡುತ್ತಾನೆ.
ನಾಲ್ಕುವರೆ ಲಕ್ಷದಲ್ಲಿ ಬಂಗಾರ ತೆಗೆದುಕೊಳ್ಳಿ ಅಂದರೆ ಸಾವಿರ ರೂಪಾಯಿ ಬೆಳ್ಳಿ ತೆಗೆದುಕೊಂಡಿದ್ದೀರಲ್ಲಾ ಮೇಡಂ ಅಂತ ಹೇಳಿದ ರಾಮಾಚಾರಿಗೆ ಕಾಲುಂಗುರದ ಮಹತ್ವವನ್ನು ಚಾರು ವಿವರಿಸುತ್ತಾಳೆ. ಮಾತ್ರವಲ್ಲದೆ ತನ್ನ ಕಾಲಿಗೆ ಉಂಗುರ ಹಾಕಲು ರಾಮಾಚಾರಿಗೆ ಹೇಳುತ್ತಾಳೆ. ಚಾರು ಪ್ರೀತಿಯಿಂದ ಕೇಳಿದರೆ ಚಾರಿ ಕೇಳದೇ ಇರಲು ಸಾಧ್ಯನೇ ಇಲ್ಲ. ಚಾರು ಕಾಲಿಗೆ ತಕ್ಷಣ ಉಂಗುರವನ್ನು ಹಾಕಿಯೇ ಬಿಡುತ್ತಾನೆ. ಇದನ್ನು ಕಂಡ ಇನ್ನಿತರ ಗ್ರಾಹಕರು ಚಪ್ಪಾಳೆ ತಟ್ಟುತ್ತಾರೆ.

ರಾಮಾಚಾರಿ ಸಂಬಳ ಮುಟ್ಟದ ನಾರಾಯಾಣಾಚಾರ್ಯರು
ಬೇಡವಾದ ಹುಡುಗಿ ಚಾರುಲತಳನ್ನು ಮದುವೆಯಾದ ಎಂಬ ಕಾರಣಕ್ಕೆ ಮಗ ರಾಮಾಚಾರಿ ಮೇಲಿನ ಕೋಪ ತಂದೆ ನಾರಾಯಾಣಾಚಾರ್ಯರಿಗೆ ಇನ್ನೂ ಕಡಿಮೆಯಾಗಿಲ್ಲ. ಇದರಿಂದಾಗಿ ರಾಮಾಚಾರಿ ತಂದ ಸಂಬಳವನ್ನೂ ನಾರಾಯಾಣಾಚಾರ್ಯರು ತೆಗೆದುಕೊಳ್ಳುವುದಿಲ್ಲ. ಸ್ವಾಭಿಮಾನ, ಗೌರವಕ್ಕೆ ತಲೆ ಬಾಗುವ ಅವರಿಗೆ ರಾಮಾಚಾರಿ ಮೇಲಿನ ಕೋಪ ಕೊಂಚವೂ ಕಡಿಮೆಯಾಗಿಲ್ಲ.
ಇದರಿಂದ ಬೇಸತ್ತ ರಾಮಾಚಾರಿ ಕಣ್ಣೀರು ಹಾಕುತ್ತಾನೆ. ಈ ವೇಳೆ ಮಗನನ್ನು ಸಮಾಧಾನ ಮಾಡಿದ ತಾಯಿ ಜಾನಕಿ ಸಂಬಳದಲ್ಲಿ ಹೆಂಡತಿ ಚಾರುಲತಾಗೆ ಏನನ್ನಾದರೂ ಕೊಡಿಸಲು ತಿಳಿಸುತ್ತಾರೆ. ಇದರಿಂದ ರಾಮಾಚಾರಿ ತನ್ನಲ್ಲಾ ಸಂಬಳದಲ್ಲಿ ಚಾರುಲತಾಗೆ ಏನಾದರು ಕೊಡಿಸಲು ಯೋಚಿಸುತ್ತಾನಾದರೂ ಕಡಿಮೆ ಹಣದಲ್ಲಿ ಚಾರುಲತಾ ಬೆಳ್ಳಿಕಾಲುಂಗುರ ಮಾತ್ರ ತೆಗೆದುಕೊಂಡು ಗಂಡನಿಗೇ ಆಶ್ಚರ್ಯಪಡಿಸುತ್ತಾಳೆ.
ಒಂದೆಡೆ ಅಕ್ಕ ಮತ್ತೊಂದೆಡೆ ತಾಯಿ ಚಾರುಗೆ ಶತ್ರು
ಚಾರುಲತಾ ಸಂಸಾರ ಒಡೆಯಲು ಒಂದೆಡೆ ಗಂಡನ ಅಣ್ಣನ ಹೆಂಡತಿ ವೈಶಾಖ ಮತ್ತೊಂದೆಡೆ ತಾಯಿ ಮಾನ್ಯತ ಒಂದಿಲ್ಲಾ ಒಂದು ಪ್ರಯತ್ನದಲ್ಲಿರುತ್ತಾರೆ. ಇಬ್ಬರ ಪ್ರಯತ್ನಗಳು ವಿಫಲವಾದರೂ ಚಾರುಲತಾ ಗಂಡನ ಮನೆಯಲ್ಲಿ ಸೈ ಎನಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಚಾರುಲತಾಳನ್ನು ಸಾಮಾನ್ಯ ಕುಟುಂಬವಾದ ರಾಮಾಚಾರಿ ಮನೆಯಲ್ಲಿ ಬಿಡುವುದು ತಾಯಿ ಮಾನ್ಯತಾಗೆ ಇಷ್ಟವಿಲ್ಲ. ಅದಕ್ಕಾಗಿ ವೈಶಾಖಾಗೆ ಸುಫಾರಿ ಕೊಟ್ಟು ಚಾರುಲತಾಳನ್ನು ಓಡಿಸಲು ಹೊಂಚು ಹಾಕಿದ್ದಾರೆ ಮಾನ್ಯತ. ಇತ್ತ ವೈಶಾಖ ಚಾರುಲತಾಳನ್ನು ಓಡಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ತಿರುಗುಬಾಣದಂತೆ ಸಮಸ್ಯೆಗಳು ಅವರ ಸುತ್ತ ಸುತ್ತಿಕೊಳ್ಳುತ್ತಿವೆ. ಒಟ್ಟಿನಲ್ಲಿ ಸಂಸಾರ ಒಡೆಯುವ ಪ್ರಯತ್ನದಲ್ಲಿರುವ ವೈಶಾಖ ಹಾಗೂ ಮಾನ್ಯತಾ ಅವರನ್ನು ಮೆಟ್ಟಿ ನಿಂತು ಚಾರು ತನ್ನ ಸಂಸಾರವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications