Pushpa 2: ಕಾಲ್ತುಳಿತದಲ್ಲಿ ಸತ್ತ ಅಭಿಮಾನಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಿಸಿದ ನಟ

ನಿನ್ನೆ ತೆರೆಕಂಡ ನಟ ಅಲ್ಲು ಅರ್ಜುನ್‌ ನಟನೆಯ 'ಪುಷ್ಪ-2' (Pushpa 2) ಸಿನಿಮಾ ದುರಂತ ಘಟನೆಗೂ ಸಾಕ್ಷಿಯಾಗಿತ್ತು. ಹೈದರಾಬಾದ್‌ನಲ್ಲಿ ಸಿನಿಮಾ ನೋಡಲು ಬಂದಿದ್ದ ಮಹಿಳಾ ಅಭಿಮಾನಿಯೊಬ್ಬರು ಕಾಲ್ತುಳಿತದಲ್ಲಿ ಪ್ರಾಣ ಬಿಟ್ಟಿದ್ದರು. ಈ ಬಗ್ಗೆ ಬೇಸರಗೊಂಡಿರುವ ನಟ ಅಲ್ಲು ಅರ್ಜುನ್‌ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಈ ಬಗ್ಗೆ ಅಲ್ಲು ಅರ್ಜುನ್‌ ವಿಡಿಯೋ ಹಂಚಿಕೊಂಡಿದ್ದಾರೆ. ಹೈದಾರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರಂತ ಘಟನೆ ಹೃದಯ ವಿದ್ರಾವಕ. ಈ ಕಷ್ಟದ ಸಮಯದಲ್ಲಿ ದುಃಖದಲ್ಲಿರುವ ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರು ಈ ನೋವಿನಲ್ಲಿ ಒಬ್ಬಂಟಿಯಾಗಿಲ್ಲ, ಕುಟುಂಬವನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ. ಈ ಸವಾಲಿನ ಸಮಯದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ನಾನು ಬದ್ಧನಾಗಿರುತ್ತೇನೆ ಎಂದು ಅಲ್ಲು ಅರ್ಜುನ್‌ ಹೇಳಿದ್ದಾರೆ.

ಈ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ. ನಾವು ನಿಮಗಾಗಿ ಭಾವನಾತ್ಮಕವಾಗಿ ಇದ್ದೇವೆ ಎಂದು ಹೇಳಲು ಬಯಸುತ್ತೇವೆ. ನಾವು ನಿಮ್ಮೊಂದಿಗೆ ಇರಲು ಬಯಸುತ್ತೇವೆ. ಮೃತರ ಕುಟುಂಬಕ್ಕೆ ಪರಿಹಾರವಾಗಿ ನಾನು 25 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಲು ಬಯಸುತ್ತೇನೆ. ಕುಟುಂಬವು ನಿಭಾಯಿಸಲು ಇದು ತುಂಬಾ ಕಷ್ಟಕರವಾದ ಸಮಯ. ಈ ಸಮಯದಲ್ಲಿ ನಿಮ್ಮನ್ನು ಬೆಂಬಲಿಸಲು ನಾವು ಎಲ್ಲ ಕೆಲಸಗಳನ್ನು ಮಾಡಲು ಬಯಸುತ್ತೇವೆ ಎಂದಿದ್ದಾರೆ. ನೀವು ಥಿಯೇಟರ್‌ಗಳಿಗೆ ಹೋಗುವಾಗ ದಯವಿಟ್ಟು ಸ್ವಲ್ಪ ಜಾಗರೂಕರಾಗಿರಿ ಎಂಬುದು ನನ್ನ ವಿನಂತಿ..ಎಂದು ಬನ್ನಿ ಮನವಿ ಮಾಡಿಕೊಂಡಿದ್ದಾರೆ.

Pushpa 2 Allu Arjun Announces 25 Lakh Compensation For Fan s Family

ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ ಬಳಿ ನೂಕುನುಗ್ಗಲು ಏರ್ಪಟ್ಟಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಥಿಯೇಟರ್‌ ಬಳಿ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ಕೇಸ್‌ ದಾಖಲಿಸುವುದಾಗಿ ಹೈದರಾಬಾದ್ ಪೊಲೀಸರು ತಿಳಿಸಿದ್ದರು.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಆಯೋಜಿಸಿದ್ದ ಪ್ರೀಮಿಯರ್‌ ಶೋಗೆ ನಟ ಅಲ್ಲು ಅರ್ಜುನ್ ಕೂಡ ಭೇಟಿ ನೀಡಿದ್ದರು. ಈ ಹಿನ್ನೆಲೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಇನ್ನು ಥಿಯೇಟರ್‌ಗೆ ತನ್ನ ಒಂಬತ್ತು ವರ್ಷದ ಪುತ್ರನನ್ನೂ ಕರೆತಂದಿದ್ದರು. ಕಾಲ್ತುಳಿದಲ್ಲಿ ಮಗುವಿನ ಸ್ಥಿತಿ ಕೂಡ ತೀವ್ರ ಗಂಭೀರಗೊಂಡಿತ್ತು. ಕೊನೆಗೆ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಅಭಿಮಾನಿಗಳನ್ನು ನಿಯಂತ್ರಿಸಿದ್ದರು.

Pushpa 2 Allu Arjun Announces 25 Lakh Compensation For Fan s Family

ಇನ್ನು ಪ್ರೀಮಿಯರ್‌ ಶೋಗೆ ನಟ ಅಲ್ಲು ಅರ್ಜುನ್‌ ಬರುತ್ತಾರೆ ಎಂಬ ವಿಚಾರವಾಗಿ ಥಿಯೇಟರ್‌ ಮಾಲೀಕರು ಅಥವಾ ಸಿನಿಮಾ ತಂಡದವರು ಯಾವುದೇ ಮಾಹಿತಿ ನೀಡಿರಲಿಲ್ಲ. ಇನ್ನು ನಟ ಅಲ್ಲಿಗೆ ಬರುವ ವಿಚಾರ ಥಿಯೇಟರ್‌ನವರಿಗೆ ಮೊದಲೇ ಗೊತ್ತಿದ್ದರೂ ಅಲ್ಲಿ ಯಾವುದೇ ಭದ್ರತಾ ವ್ಯವಸ್ಥೆಗಳನ್ನು ಮಾಡಿರಲಿಲ್ಲ ಎಂದು ಪೊಲೀಸರು ಘಟನೆಗೆ ಕಾರಣ ಬಿಚ್ಚಿಟ್ಟಿದ್ದರು.

ಅಲ್ಲದೆ ಈ ದುರ್ಘಟನೆ ಕುರಿತು ನಟ ಅಲ್ಲು ಅರ್ಜುನ್‌ ಅವರಿಂದ ಉತ್ತರ ಕೇಳಲಾಗಿದ್ದು, ಮೃತ ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಾವು ಹಾಗೂ ಅಲ್ಲಿ ಕಾಲ್ತುಳಿತಕ್ಕೆ ಕಾರಣರಾದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+