Megha Shetty: ಬಹುಭಾಷಾ ನಟನ ಜತೆ ನಟಿ ಮೇಘಾ ಶೆಟ್ಟಿ ಫೋಟೋ ವೈರಲ್, ಏನಿದು ಸುದ್ದಿ?
ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತೆ ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿರುವ ನಟಿ ಮಣಿಯರು ಹೆಚ್ಚಾಗಿದ್ದಾರೆ. ಈ ನಡುವೆ ಕಿರುತೆರೆಯಲ್ಲಿ ಮಿಂಚಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಮೇಘಾ ಶೆಟ್ಟಿಯವರು ಸಹ ಇದೇ ಹಾದಿ ಹಿಡಿದರಾ? ಎಂದು ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಮೂಡಿಸಿದೆ. ಇದಕ್ಕೆ ನಟಿ ಹಾಗೂ ಬಹುಭಾಷಾ ನಟನ ಜೊತೆಗಿನ ತೆಗೆದುಕೊಂಡ ಸೆಲ್ಫಿ ಕಾರಣವಾಗಿದೆ.
ಹೌದು, ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಕೆಲವು ಸಿನಿಮಾಗಳನ್ನು ಮಾಡಿದ್ದ ನಟಿ ಮೇಘಾ ಶೆಟ್ಟಿಯವರು ಒಂದು ದೊಡ್ಡ ಸಕ್ಸಸ್ಗಾಗಿ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ನಟನೆ, ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳು ಸಂಪಾದಿಸಿದ್ದಾರೆ.

ವೈರಲ್ ಆಗುತ್ತಿದೆ ಮೇಘಾ ಶೆಟ್ಟಿ ಪೋಸ್ಟ್
ಬುಧವಾರ ನಟಿ ಮೇಘಾ ಶೆಟ್ಟಿಯವರು ಇನ್ಸ್ಟಾಗ್ರಾಮ್ ನಲ್ಲಿ ಬಹುಭಾಷಾ ನಟ ಆರ್. ಮಾಧವನ್ ಅವರೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಇಬ್ಬರು ನಟ-ನಟಿಯರ ಸೆಲ್ಫಿ ಫೋಟೋ ಸಖತ್ ವೈರಲ್ ಆಗುತ್ತಿದ್ದಂತೆ, ನೀವು ಪರಭಾಷೆ ಚಿತ್ರಗಳತ್ತ ಆಸಕ್ತಿ ಹೊಂದಿದ್ದೀರಾ? ಎಂದೆಲ್ಲ ಅಭಿಮಾನಿಗಳು ನಟಿಗೆ ಪ್ರಶ್ನೆ ಮಾಡಿದ್ದಾರೆ.
ಪರಭಾಷಾ ಸಿನಿಮಾಗೆ ಆಯ್ಕೆ ಆದ್ರಾ ಮೇಘಾ ಶೆಟ್ಟಿ?
ಈ ಬಗ್ಗೆ ಪೋಸ್ಟ್ನಲ್ಲಿ ಬರೆದುಕೊಂಡಿರುವ ನಟಿ ಮೇಘಾ ಶೆಟ್ಟಿಯವರು, ''ಅದ್ಭುತ ನಟನೊಂದಿಗೆ ಮತನಾಡುತ್ತಾ ಸಮಯ ಕಳೆದಿದ್ದೇನೆ. ಇದು ಒಳ್ಳೆಯ ಕಲಿಕೆಯ ಅನುಭವ'' ಎಂದು ಮಾತ್ರವೇ ತಿಳಿಸಿದ್ದಾರೆ. ನಟ ಆರ್ ಮಾಧವ್ ಅವರು ತಮಗೆ ಸಿಕ್ಕಿದ್ದೆಲ್ಲಿ?, ವಿಷಯವೇನು, ಯಾವುದಾದರೂ ಪರಭಾಷಾ ಸಿನಿಮಾಗೆ ಆಯ್ಕೆಯಾದರಾ? ಎಂಬ ಯಾವ ಮಾಹಿತಿ ಬಗ್ಗೆ ನಟಿ ಹೇಳಿಕೊಂಡಿಲ್ಲ.
ಕುತೂಹಲಗಳ ಮಧ್ಯೆ ಅಭಿಮಾನಿಗಳಿಂದ ನಟಿಗೆ ವಿಶ್
ಹೀಗಾಗಿ ಮೇಘಾ ಶೆಟ್ಟಿ ಅಭಿಮಾನಿಗಳು ತಲೆಯಲ್ಲಿ ಸದ್ಯ ಹುಳ ಬಿಟ್ಟಂತಾಗಿದೆ. ಅಲ್ಲದೇ ನಟಿಯ ಪೋಸ್ಟ್ಗೆ ಶುಭಾಷಯ ತಿಳಿಸಿರುವ ಅಭಿಮಾನಿಗಳು ನೀವು ಬೇರೆ ಚಿತ್ರರಂಗದಲ್ಲಿ ಮಿಂಚಬೇಕು. ಆರ್. ಮಾಧವನ್ ಜೊತೆಗೆ ಸಿನಿಮಾ ಮಾಡುತ್ತಿರಬಹುದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ತಮಿಳು, ತೆಲುಗು ಚಿತ್ರರಂಗದ ಬದಲಾಗಿ ನೇರವಾಗಿ ಬಾಲಿವುಡ್ ಹೋಗಬೇಕು ಎಂದು ತಮ್ಮ ನೆಚ್ಚಿನ ನಟಿಗೆ ವಿಶ್ ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿ ಬ್ಯೂಸಿ
ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ತ್ರಿಬಲ್ ರೈಡಿಂಗ್', ಡಾಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಹಾಗೂ 'ಕೈವ 'ಮೊದಲಾದ ಸಿನಿಮಾಗಳನ್ನು ಮೇಘಾ ಶೆಟ್ಟಿ ಮಾಡಿದ್ದಾರೆ. ಸದ್ಯ ಅವರು ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ' ಯಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆ ಆಗಿದ್ದಾರೆ.
ಇದೆಲ್ಲದರ ಮಧ್ಯೆ ಅವರು ನಟ ಆರ್.ಮಾಧವನ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್ಗೆ ಕೇವಲ 17 ಗಂಟೆಗಳಲ್ಲಿ 39 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. 65 ಮಂದಿ ಕಾಮೆಂಟ್ ಮಾಡಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications