ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ "ಕಾಕದೋಷ" ನಾಟಕ ರಂಗದ ಮೇಲೆ-ಯಾವಾಗ?
ಬೆಂಗಳೂರು, ಏಪ್ರಿಲ್, 22: ಸಾಂಪ್ರದಾಯಿಕ ಕುಟುಂಬಕ್ಕೆ ಸಮಾಜದಲ್ಲಿ ಕೊಡುವ ಮರ್ಯಾದೇನೆ ಬೇರೆ ಇರತ್ತೆ. ಆದರೆ ಒಂದು ವೇಳೆ ಇಂತಹ ಕುಟುಂಬದಲ್ಲಿ ಏನಾದರೂ ತಪ್ಪುಗಳಾದರೆ ಸಮಾಜದಲ್ಲಿ ಇವರನ್ನು ಕಾಣುವ ರೀತಿ ಹೇಗಿರುತ್ತದೆ? ಅದರಲ್ಲೂ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆ ಇದ್ದರೆ, ಅವರನ್ನು ಸಮಾಜ ನೋಡುವ ರೀತಿ ಹೇಗಿರುತ್ತದೆ? ಇದರ ನಡುವೆಯೂ ಆ ಮಹಿಳೆ ಹೇಗೆಲ್ಲಾ ಜೀವನ ಸಾಗಿಸುತ್ತಾಳೆ ಎನ್ನುವ ಕಥೆ ಹೇಳುವ ನಾಟಕವೊಂದು ಏಪ್ರಿಲ್ 26ಕ್ಕೆ ತೆರೆ ಮೇಲೆ ಬರಲಿದೆ.
ಕಥೆಯ ಪ್ರಕಾರ ಬೆಂಗಳೂರಿನಲ್ಲೊಂದು ಸಾಂಪ್ರದಾಯಿಕ ಕುಟುಂಬವೊಂದಿದ್ದು, ಈ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡು ಕುಟುಂಬವನ್ನು ಸಂಭಾಳಿಸುತ್ತಿರುವ ಶಾರದಳಿಗೆ ಇರುವ ಒಂದೇ ಒಂದು ಭರವಸೆ ಎಂದರೆ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮಗ ಅಕ್ಷಯ್.

ಹಳೆ ತಲೆಮಾರಿನ ಕೊಂಡಿಯಾಗಿ ಸಂಪ್ರದಾಯದ ಆಲದ ಮರವಾಗಿರುವ ಅತ್ತೆ ಸೀತಮ್ಮ ಮತ್ತು ಹೊಸ ಭವಿಷ್ಯದ ಸಂಕೇತವಾಗಿರುವ ಮಗ, ಇವರಿಬ್ಬರ ಮಧ್ಯೆ ನಿಂತಿರುವಳೇ ಶಾರದ ಆಗಿದ್ದು, ಇವರಿಗೆ ಭೂತಕಾಲದ ಸತ್ಯವೊಂದು ನಿಜಭೂತವಾಗಿ ಎದುರು ಬಂದು ನಿಲ್ಲುತ್ತದೆ ಅದೂ ತನ್ನ ಮಗ ಅಕ್ಷಯ್ನ ಮೂಲಕ.
ಹೀನಕೃತ್ಯವೊಂದರಲ್ಲಿ ಆರೋಪಿಯಾಗಿ ಮಗ ಮನೆ ಸೇರಿದಾಗ, ಶಾರದಳ ಮುಂದಿರುವ ಆಯ್ಕೆಗಳೇನು? ತಾನು ನಂಬಿದ ಮೌಲ್ಯಗಳು ಆಕೆಗೆ ಸರಿದಾರಿ ತೋರಿಸಿದವೇ ಅಥವಾ ಆಕೆಯ ಮನೆ ಕಾಗೆ ಹೊಕ್ಕ ದೋಷದ ಮನೆಯಾಯಿತೇ? ಎನ್ನುವ ಬಗ್ಗೆ ಅದ್ಭುತ ಮಾಹಿತಿಯನ್ನು ಇಲ್ಲಿ ತರಲಾಗಿದೆ.
ಪ್ರಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸೆನ್ನ "ಘೋಸ್ಟ್ಸ್" ನಾಟಕದ ಎಳೆಯೊಂದನ್ನು ಹಿಡಿದು, ಅದ್ಭುತ ಕತೆಯನ್ನು ರಚನೆ ಮಾಡಲಾಗಿದೆ. ಭಾರತದಲ್ಲಿ 2012ರಲ್ಲಿ ನಡೆದ ನಿಜಘಟನೆಯೊಂದನ್ನು ಆಧರಿಸಿ ಅನುಪಮಾ ಚಂದ್ರಶೇಖರ್ ಅವರ "When the crows visit" ಎಂಬ ನಾಟಕವನ್ನು ವೆಂಕಟೇಶ್ ಪ್ರಸಾದ್ ಅವರು ಕನ್ನಡಕ್ಕೆ "ಕಾಕದೋಷ" ಎಂಬ ಹೆಸರಿನಲ್ಲಿ ಅನುವಾದಿಸಿ ನಿರ್ದೇಶಿಸಿದ್ದಾರೆ.
ಲಂಡನ್ನಲ್ಲಿ 2019ರಲ್ಲಿ ಇಂಗ್ಲೀಷ್ನಲ್ಲಿ ಮೊದಲಿಗೆ ಪ್ರದರ್ಶನಗೊಂಡ ಈ ನಾಟಕ, ಈಗ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕನ್ನಡ ಭಾಷೆಯಲ್ಲಿ "ಕಾಕದೋಷ" ಎಂಬ ಹೆಸರಿನಲ್ಲಿ ಏಪ್ರಿಲ್ 26ರಂದು ತೆರೆ ಕಾಣುತ್ತಿದೆ.
ಗತಕಾಲದ ನೆರಳಿನಿಂದ ಹೆಣಗಾಡುತ್ತಿರುವ ಕುಟುಂಬದ ಹಿನ್ನೆಲೆಯಲ್ಲಿ "ಕಾಕದೋಷ" ಶಾರದಾಳ ಜೀವನವನ್ನು ಈ ನಾಟಕದಲ್ಲಿ ಎತ್ತಹಿಡಿಯಲಾಗಿದೆ. ಆಕೆಯ ಮಗ ಅಕ್ಷಯ್ ಘೋರ ಅಪರಾಧದ ಆರೋಪಿಯಾಗಿ ಮನೆಗೆ ಹಿಂದಿರುಗಿದಾಗ ತನ್ನ ಮೌಲ್ಯಗಳನ್ನು ಮತ್ತು ತನ್ನ ಕುಟುಂಬದ ಇತಿಹಾಸದ ಬಗ್ಗೆ ಕಾಡುವ ವಿಚಾರಗಳನ್ನು ಇಲ್ಲಿ ತೆರೆದಿಡಲಾಗಿದೆ.
ಈ "ಕಾಕದೋಷ" ನಾಟಕವು ಆಳವಾದ ಮತ್ತು ಸತ್ಯಾಸತ್ಯತೆಯೊಂದಿಗೆ ಭಾವನೆಗಳ ಶ್ರೀಮಂತ ಚಿತ್ರಣವನ್ನು ಜೀವಂತಗೊಳಿಸುತ್ತದೆ. ಆದ್ದರಿಂದ ಈ ನಾಟಕವನ್ನು ವೀಕ್ಷಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications