ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ "ಕಾಕದೋಷ" ನಾಟಕ ರಂಗದ ಮೇಲೆ-ಯಾವಾಗ?
ಬೆಂಗಳೂರು, ಏಪ್ರಿಲ್, 22: ಸಾಂಪ್ರದಾಯಿಕ ಕುಟುಂಬಕ್ಕೆ ಸಮಾಜದಲ್ಲಿ ಕೊಡುವ ಮರ್ಯಾದೇನೆ ಬೇರೆ ಇರತ್ತೆ. ಆದರೆ ಒಂದು ವೇಳೆ ಇಂತಹ ಕುಟುಂಬದಲ್ಲಿ ಏನಾದರೂ ತಪ್ಪುಗಳಾದರೆ ಸಮಾಜದಲ್ಲಿ ಇವರನ್ನು ಕಾಣುವ ರೀತಿ ಹೇಗಿರುತ್ತದೆ? ಅದರಲ್ಲೂ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆ ಇದ್ದರೆ, ಅವರನ್ನು ಸಮಾಜ ನೋಡುವ ರೀತಿ ಹೇಗಿರುತ್ತದೆ? ಇದರ ನಡುವೆಯೂ ಆ ಮಹಿಳೆ ಹೇಗೆಲ್ಲಾ ಜೀವನ ಸಾಗಿಸುತ್ತಾಳೆ ಎನ್ನುವ ಕಥೆ ಹೇಳುವ ನಾಟಕವೊಂದು ಏಪ್ರಿಲ್ 26ಕ್ಕೆ ತೆರೆ ಮೇಲೆ ಬರಲಿದೆ.
ಕಥೆಯ ಪ್ರಕಾರ ಬೆಂಗಳೂರಿನಲ್ಲೊಂದು ಸಾಂಪ್ರದಾಯಿಕ ಕುಟುಂಬವೊಂದಿದ್ದು, ಈ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡು ಕುಟುಂಬವನ್ನು ಸಂಭಾಳಿಸುತ್ತಿರುವ ಶಾರದಳಿಗೆ ಇರುವ ಒಂದೇ ಒಂದು ಭರವಸೆ ಎಂದರೆ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮಗ ಅಕ್ಷಯ್.

ಹಳೆ ತಲೆಮಾರಿನ ಕೊಂಡಿಯಾಗಿ ಸಂಪ್ರದಾಯದ ಆಲದ ಮರವಾಗಿರುವ ಅತ್ತೆ ಸೀತಮ್ಮ ಮತ್ತು ಹೊಸ ಭವಿಷ್ಯದ ಸಂಕೇತವಾಗಿರುವ ಮಗ, ಇವರಿಬ್ಬರ ಮಧ್ಯೆ ನಿಂತಿರುವಳೇ ಶಾರದ ಆಗಿದ್ದು, ಇವರಿಗೆ ಭೂತಕಾಲದ ಸತ್ಯವೊಂದು ನಿಜಭೂತವಾಗಿ ಎದುರು ಬಂದು ನಿಲ್ಲುತ್ತದೆ ಅದೂ ತನ್ನ ಮಗ ಅಕ್ಷಯ್ನ ಮೂಲಕ.
ಹೀನಕೃತ್ಯವೊಂದರಲ್ಲಿ ಆರೋಪಿಯಾಗಿ ಮಗ ಮನೆ ಸೇರಿದಾಗ, ಶಾರದಳ ಮುಂದಿರುವ ಆಯ್ಕೆಗಳೇನು? ತಾನು ನಂಬಿದ ಮೌಲ್ಯಗಳು ಆಕೆಗೆ ಸರಿದಾರಿ ತೋರಿಸಿದವೇ ಅಥವಾ ಆಕೆಯ ಮನೆ ಕಾಗೆ ಹೊಕ್ಕ ದೋಷದ ಮನೆಯಾಯಿತೇ? ಎನ್ನುವ ಬಗ್ಗೆ ಅದ್ಭುತ ಮಾಹಿತಿಯನ್ನು ಇಲ್ಲಿ ತರಲಾಗಿದೆ.
ಪ್ರಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸೆನ್ನ "ಘೋಸ್ಟ್ಸ್" ನಾಟಕದ ಎಳೆಯೊಂದನ್ನು ಹಿಡಿದು, ಅದ್ಭುತ ಕತೆಯನ್ನು ರಚನೆ ಮಾಡಲಾಗಿದೆ. ಭಾರತದಲ್ಲಿ 2012ರಲ್ಲಿ ನಡೆದ ನಿಜಘಟನೆಯೊಂದನ್ನು ಆಧರಿಸಿ ಅನುಪಮಾ ಚಂದ್ರಶೇಖರ್ ಅವರ "When the crows visit" ಎಂಬ ನಾಟಕವನ್ನು ವೆಂಕಟೇಶ್ ಪ್ರಸಾದ್ ಅವರು ಕನ್ನಡಕ್ಕೆ "ಕಾಕದೋಷ" ಎಂಬ ಹೆಸರಿನಲ್ಲಿ ಅನುವಾದಿಸಿ ನಿರ್ದೇಶಿಸಿದ್ದಾರೆ.
ಲಂಡನ್ನಲ್ಲಿ 2019ರಲ್ಲಿ ಇಂಗ್ಲೀಷ್ನಲ್ಲಿ ಮೊದಲಿಗೆ ಪ್ರದರ್ಶನಗೊಂಡ ಈ ನಾಟಕ, ಈಗ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕನ್ನಡ ಭಾಷೆಯಲ್ಲಿ "ಕಾಕದೋಷ" ಎಂಬ ಹೆಸರಿನಲ್ಲಿ ಏಪ್ರಿಲ್ 26ರಂದು ತೆರೆ ಕಾಣುತ್ತಿದೆ.
ಗತಕಾಲದ ನೆರಳಿನಿಂದ ಹೆಣಗಾಡುತ್ತಿರುವ ಕುಟುಂಬದ ಹಿನ್ನೆಲೆಯಲ್ಲಿ "ಕಾಕದೋಷ" ಶಾರದಾಳ ಜೀವನವನ್ನು ಈ ನಾಟಕದಲ್ಲಿ ಎತ್ತಹಿಡಿಯಲಾಗಿದೆ. ಆಕೆಯ ಮಗ ಅಕ್ಷಯ್ ಘೋರ ಅಪರಾಧದ ಆರೋಪಿಯಾಗಿ ಮನೆಗೆ ಹಿಂದಿರುಗಿದಾಗ ತನ್ನ ಮೌಲ್ಯಗಳನ್ನು ಮತ್ತು ತನ್ನ ಕುಟುಂಬದ ಇತಿಹಾಸದ ಬಗ್ಗೆ ಕಾಡುವ ವಿಚಾರಗಳನ್ನು ಇಲ್ಲಿ ತೆರೆದಿಡಲಾಗಿದೆ.
ಈ "ಕಾಕದೋಷ" ನಾಟಕವು ಆಳವಾದ ಮತ್ತು ಸತ್ಯಾಸತ್ಯತೆಯೊಂದಿಗೆ ಭಾವನೆಗಳ ಶ್ರೀಮಂತ ಚಿತ್ರಣವನ್ನು ಜೀವಂತಗೊಳಿಸುತ್ತದೆ. ಆದ್ದರಿಂದ ಈ ನಾಟಕವನ್ನು ವೀಕ್ಷಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications