Filmfare Awards 2024 : ಕಾಟೇರ, 19.20.21 ಸೇರಿದಂತೆ ಫಿಲ್ಮ್ಫೇರ್ ಅವಾರ್ಡ್ಸ್ ನಾಮಿನೇಷನ್ ಸಂಪೂರ್ಣ ಪಟ್ಟಿ
ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ 2024 (Filmfare Awards South 2024) ರ ನಾಮನಿರ್ದೇಶನಗಳನ್ನು ಮಂಗಳವಾರ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಎಲ್ಲಾ ನಾಲ್ಕು ದಕ್ಷಿಣ ಭಾರತದ ಚಲನಚಿತ್ರ ಉದ್ಯಮಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿರಂಗದ ನಾಮನಿರ್ದೇಶಿತರನ್ನು ಘೋಷಿಸಲಾಗಿದೆ.
ದರ್ಶನ್, ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ ನಾಗಭೂಷಣ, ರಕ್ಷಿತ್ ಶೆಟ್ಟಿ, ಚಿರಂಜೀವಿ, ಐಶ್ವರ್ಯ ರೈ ಬಚ್ಚನ್, ನಾನಿ, ಮೃಣಾಲ್ ಠಾಕೂರ್ ಮತ್ತು ಇತರ ನಟರು ನಾಮಿನೇಟ್ ಆಗಿದ್ದಾರೆ. ಜೊತೆಗೆ ಕಾಟೇರಾ, 19.20.21, ಡೇರ್ಡೆವಿಲ್ ಮುಸ್ತಫಾ, ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿ, ಸಲಾರ್ ಭಾಗ 1: ಕದನ ವಿರಾಮ, ಪೊನ್ನಿಯಿನ್ ಸೆಲ್ವನ್-ಭಾಗ 2, ಕಾತಲ್-ದಿ ಕೋರ್ ನಂತಹ ಜನಪ್ರಿಯ ಚಿತ್ರಗಳು ಸಹ ನಾಮಿನೇಟ್ ಆಗಿವೆ.

ನಾಮಿನೇಟ್ ಆಗಿರುವ ಸಿನಿಮಾ, ನಿರ್ದೇಶಕ ಸಂಪೂರ್ಣ ಪಟ್ಟಿ ಇಲ್ಲಿದೆ
* ಅತ್ಯುತ್ತಮ ಚಲನಚಿತ್ರ
19.20.21
ಡೇರ್ಡೆವಿಲ್ ಮುಸ್ತಫಾ
ಕಾಟೇರಾ
ಕೌಸಲ್ಯ ಸುಪ್ರಜಾ ರಾಮ
ಸಪ್ತ ಸಾಗರದಾಚೆ ಎಲ್ಲೋ
ಸ್ವಾತಿ ಮುತ್ತಿನ ಮಳೆ ಹನಿಯೆ
* ಅತ್ಯುತ್ತಮ ನಿರ್ದೇಶಕ
ಹೇಮಂತ್ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ)
ಮಂಸೋರೆ (19.20.21)
ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)
ರಾಜ್ ಬಿ. ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿ)
ಶಶಾಂಕ್ ಸೋಗಲ್ (ಡೇರ್ಡೆವಿಲ್ ಮುಸ್ತಫಾ)
ತರುಣ್ ಸುಧೀರ್ (ಕಾಟೇರ)
*ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ
ದರ್ಶನ್ (ಕಾಟೇರ)
ನಾಗಭೂಷಣ (ಟಗರು ಪಲ್ಯ)
ರಾಜ್ ಬಿ. ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿ)
ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫಾ)
ಶಿವರಾಜ್ಕುಮಾರ್ (ಘೋಸ್ಟ್)
* ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ
ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
ಅಮೃತ ಪ್ರೇಮ್ (ಟಗರು ಪಲ್ಯ)
ಮಿಲನಾ ನಾಗರಾಜ್ (ಕೌಸಲ್ಯ ಸುಪ್ರಜಾ ರಾಮ)
ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ)
ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಮತ್ತು ಕಂ.)
ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)
* ಅತ್ಯುತ್ತಮ ಪೋಷಕ ನಟ
ನಾಗಭೂಷಣ (ಕೌಸಲ್ಯ ಸುಪ್ರಜಾ ರಾಮ)
ಪೂರ್ಣಚಂದ್ರ (ಡೇರ್ಡೆವಿಲ್ ಮುಸ್ತಫಾ)
ರಾಜೇಶ್ ನಟರಂಗ (19.20.21)
ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ)
ರಂಗಾಯಣ ರಘು (ಟಗರು ಪಲ್ಯ)
* ಅತ್ಯುತ್ತಮ ಪೋಷಕ ನಟಿ
ಗುಂಜಾಲಮ್ಮ (ಪಿಂಕಿ ಎಲ್ಲಿ)
ಎಂ.ಡಿ.ಪಲ್ಲವಿ (19.20.21)
ಶ್ರುತಿ (ಕಾಟೇರಾ)
ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)
ತಾರಾ (ಟಗರು ಪಲ್ಯ)
* ಅತ್ಯುತ್ತಮ ಸಂಗೀತ
ಕಾಟೇರ (ವಿ. ಹರಿಕೃಷ್ಣ)
ಕೌಸಲ್ಯ ಸುಪ್ರಜಾ ರಾಮ (ಅರ್ಜುನ್ ಜನ್ಯ)
ಸಪ್ತ ಸಾಗರದಾಚೆ ಎಲ್ಲೋ (ಚರಣ್ ರಾಜ್)
ಸ್ವಾತಿ ಮುತ್ತಿನ ಮಳೆ ಹನಿಯೇ (ಮಿಧುನ್ ಮುಕುಂದನ್)
ಟಗರು ಪಲ್ಯ (ವಾಸುಕಿ ವೈಭವ್)

* ಅತ್ಯುತ್ತಮ ಸಾಹಿತ್ಯ
ಆರ್. ಲಕ್ಷ್ಮಣ್ ರಾವ್ (ಯಾವ ಚುಂಬಕ- ಚೌಕಾ ಬಾರಾ)
ಡಾಲಿ ಧನಂಜಯ (ಸಂಬಂಜ ಅನ್ನೋದು ದೊಡ್ಡ ಕಣ- ಟಗರು ಪಲ್ಯ)
ಧನಂಜಯ್ ರಂಜನ್ (ನದಿಯೇ ಓ ನದಿಯೇ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ)
ಜಯಂತ್ ಕಾಯ್ಕಿಣಿ (ಪ್ರೀತಿಸುವೆ- ಕೌಸಲ್ಯ ಸುಪ್ರಜಾ ರಾಮ)
ಪೃಥ್ವಿ (ಮೆಲ್ಲಗೆ- ಸ್ವಾತಿ ಮುತ್ತಿನ ಮಳೆ ಹನಿ)
*ಅತ್ಯುತ್ತಮ ಹಿನ್ನೆಲೆ ಗಾಯಕ
ಕಪಿಲ್ ಕಪಿಲನ್ (ನದಿಯೇ ಓ ನದಿಯೇ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ)
ರವೀಂದ್ರ ಸೊರಗಾವಿ (ನೋಡಲಾಗದೆ ದೇವ- ವಿರಾಟಪುರ ವೀರಾಗಿ)
ಸೋನು ನಿಗಮ್ (ಬಾಂಬ್ ಬಾಂಬ್-ಕ್ರಾಂತಿ)
ವಾಸುಕಿ ವೈಭವ್ (ನೊಂದಕೋಬ್ಯಾಡವೆ- ಟಗರು ಪಾಳ್ಯ)
ವಿಜಯ್ ಪ್ರಕಾಶ್ (ಪುಣ್ಯಾತ್ಮ- ಕಾಟೇರ)
* ಅತ್ಯುತ್ತಮ ಹಿನ್ನೆಲೆ ಗಾಯಕಿ
ಮಾಧುರಿ ಶೇಷಾದ್ರಿ (ಮೆಲ್ಲಗೆ- ಸ್ವಾತಿ ಮುತ್ತಿನ ಮಳೆ ಹನಿ)
ಮಂಗ್ಲಿ (ಪಾಸಂದಾಗವ್ನೆ- ಕಾಟೇರ)
ಪೃಥ್ವಿ ಭಟ್ (ಪ್ರೀತಿಸುವೆ- ಕೌಸಲ್ಯ ಸುಪ್ರಜಾ ರಾಮ)
ಸಂಗೀತಾ ಕಟ್ಟಿ (ಕಾಯೋ ಶಿವ ಕಾಪಾಡೋ ಶಿವ- ಪೆಂಟಗನ್)
ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ- ಸಪ್ತ ಸಾಗರದಾಚೆ ಎಲ್ಲೋ - ಎ)












Click it and Unblock the Notifications