Darshan Thoogudeepa: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಅವರು ಅರೆಸ್ಟ್ ಆಗುವ ಕೆಲವೇ ಕ್ಷಣಗಳ ಮುನ್ನ..
ದರ್ಶನ್ ತೂಗುದೀಪ್ ಅವರು ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗಾಗಿ ದರ್ಶನ್ ತೂಗುದೀಪ್ ಅವರಿಗೆ ಭಾರಿ ಸಂಕಷ್ಟ ಎದುರಾಗಿದ್ದು, ಜೈಲಿಂದ ಜಾಮೀನು ಪಡೆದು ಹೊರಗೆ ಬರಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಅವರು ಅರೆಸ್ಟ್ ಆಗುವ ಕೆಲವೇ ಕ್ಷಣಗಳ ಮುನ್ನ ತೆಗೆದ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಹಾಗಾದ್ರೆ ಆ ವೈರಲ್ ವಿಡಿಯೋ ನೀವು ಕೂಡ ನೋಡಿದ್ರಾ? ಬನ್ನಿ ನೋಡೋಣ.
ದರ್ಶನ್ ತೂಗುದೀಪ್ ಅವರು ಮಾಸ್ ಹೀರೋ ಆಗಿ, ಕ್ಲಾಸ್ ಹೀರೋ ಆಗಿ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಅಭಿಮಾನಿಗಳನ್ನು ಸೆಳೆದಿದ್ದರು. ಯಾವುದೇ ಪಾತ್ರ ಇದ್ದರೂ ಸರಿಯೇ, ನಟ ದರ್ಶನ್ ತೂಗುದೀಪ್ ಅವರು ನೀರು ಕುಡಿದಂತೆ ಮಾಡಿ ಮುಗಿಸುತ್ತಿದ್ದರು. ಅದರಲ್ಲೂ ಕ್ಯಾಮೆರಾ ಮುಂದೆ ನಿಂತರೆ ಸಾಕು, ದರ್ಶನ್ ತೂಗುದೀಪ್ ಅವರ ನಟನೆಗೆ ಇಡೀ ಸಿನಿಮಾ ಜಗತ್ತೇ ಬೆರಗಾಗಿ ಹೋಗುತ್ತಿತ್ತು. ಆದರೆ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ ನಂತರ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ. ಈ ಮೂಲಕ ದರ್ಶನ್ ಅವರ ಕೋಟಿ ಕೋಟಿ ಅಭಿಮಾನಿಗಳು ಕಣ್ಣೀರು ಹಾಕ್ತಿದ್ದಾರೆ. ಈ ಸಮಯದಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಅವರು ಅರೆಸ್ಟ್ ಆಗುವ, ಕೆಲವೇ ಕ್ಷಣಗಳ ಮುನ್ನ ತೆಗೆದ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ಮುಂದೆ ಇದೆ ನೋಡಿ.

ದರ್ಶನ್ರ ವಿಡಿಯೋ ಫುಲ್ ವೈರಲ್!
ಪರಪ್ಪನ ಅಗ್ರಹಾರ ಜೈಲಿನ ಊಟ ಸರಿಯಾಗಿ ಹೊಂದಿಕೊಳ್ಳದೆ ನಟ ದರ್ಶನ್ ತೂಗುದೀಪ್ ಪರದಾಡುತ್ತಿದ್ದಾರೆ. ಅಲ್ಲದೆ ಈಗಾಗಲೇ ದರ್ಶನ್ ಅವರ ತೂಕದಲ್ಲಿ ಕೂಡ ಸುಮಾರು 10 ರಿಂದ 15 ಕೆಜಿ ಕಡಿಮೆ ಆಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ನಟ ದರ್ಶನ್ ಅವರು ಪ್ರತಿದಿನ ಬೆಳಗ್ಗೆ ಗಂಟೆಗಟ್ಟಲೆ ವರ್ಕೌಟ್ ಅಂದರೆ ಜಿಮ್ ಹೋಗುತ್ತಿದ್ದರು. ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದ್ದು, ಜಿಮ್ & ಸರಿಯಾದ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ.
ದರ್ಶನ್ ಅವರು ಅರೆಸ್ಟ್ ಆಗಿದ್ದು ಹೇಗೆ?
ನೋಡಿದ್ರಲ್ಲಾ ವಿಡಿಯೋ, ನಟ ದರ್ಶನ್ ತೂಗುದೀಪ್ ಅವರು ರೇಣುಕಾ ಸ್ವಾಮಿಯ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗುವ ಮೊದಲು ತೆಗೆದ ವಿಡಿಯೋ ಇದು. ಎಸಿಪಿ ಚಂದನ್ ನೇತೃತ್ವದ ತಂಡ ಮೈಸೂರಿಗೆ ತೆರಳಿ, ನಟ ದರ್ಶನ್ ತೂಗುದೀಪ್ ಅವರನ್ನು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಮಾಡುವ ಕೆಲವೇ ಕ್ಷಣಗಳ ಹಿಂದೆ ತೆಗೆದ ವಿಡಿಯೋ ಇದು. ಅಂದಹಾಗೆ ಅರೆಸ್ಟ್ ಆಗುವ ದಿನ, ನಟ ದರ್ಶನ್ ತೂಗುದೀಪ್ ಅವರು ಮೈಸೂರಿನ ಖಾಸಗಿ ಹೋಟೆಲ್ ಒಂದರ ಬಳಿ ಜಿಮ್ ಮಾಡುತ್ತಿದ್ದರು. ಹೀಗೆ ಜಿಮ್ ಮುಗಿಸಿ ಹೊರಗೆ ಬರುವ ಸಮಯದಲ್ಲೇ ಕರ್ನಾಟಕ ಪೊಲೀಸರು ದರ್ಶನ್ ತೂಗುದೀಪ್ ಅವರನ್ನ ಅರೆಸ್ಟ್ ಮಾಡಿದ್ದರು ಎನ್ನಲಾಗಿತ್ತು.












Click it and Unblock the Notifications