Darshan Thoogudeepa: ‘ಆಂಧ್ರ ನಾಯ್ಡು ದರ್ಶನ್’ ಲಾಯರ್ ಜಗದೀಶ್....
ದರ್ಶನ್ ತೂಗುದೀಪ್ & ಲಾಯರ್ ಜಗದೀಶ್ ನಡುವೆ ನಡೆಯುತ್ತಿರುವ ಕಾಳಗ ಜೋರಾಗಿದೆ. ದರ್ಶನ್ ತೂಗುದೀಪ್ ಅಭಿಮಾನಿ ಅಂತಾ ಹೇಳಿಕೊಂಡ ವ್ಯಕ್ತಿ ಇದೀಗ ಲಾಯರ್ ಜಗದೀಶ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿತ್ತು. ಈ ಘಟನೆ ನಂತರ ಸಖತ್ ರೊಚ್ಚಿಗೆದ್ದಿರುವ ಲಾಯರ್ ಜಗದೀಶ್, ದರ್ಶನ್ ತೂಗುದೀಪ್ ಇತಿಹಾಸ ಕೆದಕುತ್ತಿದ್ದಾರೆ. ಈ ಸಮಯದಲ್ಲೇ, 'ಆಂಧ್ರ ನಾಯ್ಡು ದರ್ಶನ್' ಲಾಯರ್ ಜಗದೀಶ್....
ದರ್ಶನ್ ತೂಗುದೀಪ್ ವಿರುದ್ಧ ಇದೀಗ ರೊಚ್ಚಿಗೆದ್ದು ಮಾತನಾಡುತ್ತಿರುವ ಲಾಯರ್ ಜಗದೀಶ್ ಅವರು, ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಫ್ಯಾನ್ ಅಂತಾ ಹೇಳಿಕೊಂಡು ಕೆಲವರು ಬೆದರಿಕೆ ಹಾಕುತ್ತಿರುವ ಆರೋಪ ಕೂಡ ಕೇಳಿ ಬಂದಿದೆ. ಹೀಗಿದ್ದಾಗ ವಿಡಿಯೋ ಒಂದರಲ್ಲಿ ಲಾಯರ್ ಜಗದೀಶ್ ಅವರು ಇದೀಗ, 'ಆಂಧ್ರ ನಾಯ್ಡು ದರ್ಶನ್'...

'ಆಂಧ್ರ ನಾಯ್ಡು ದರ್ಶನ್' ಲಾಯರ್ ಜಗದೀಶ್...
ಲಾಯರ್ ಜಗದೀಶ್ ಅವರು ವಿಡಿಯೋ ಒಂದ್ರಲ್ಲಿ 'ದರ್ಶನ್ ಒಬ್ಬ ಲುಚ್ಚ ಮೈಂಡ್ ಇರೋನು ಅಂತಾ ನನಗೆ ಚನ್ನಾಗಿ ಗೊತ್ತಿದೆ. ಇವನು ಏನು ಕಮ್ಮಿ ಆಟ ಆಡಿದ್ದಾನಾ ದರ್ಶನ್? ಡಾ. ರಾಜ್ಕುಮಾರ್ ಅವರ ಫ್ಯಾಮಿಲಿಯನ್ನ ಎಷ್ಟೆಷ್ಟು ಬೇಕೋ ಅಷ್ಟೆಲ್ಲಾ ಹೀಯಾಳಿಸಿದ್ದಾನೆ ಇವನು...' ಅಂತಾ ಆರೋಪ ಮಾಡಿದ್ದಾರೆ ಲಾಯರ್ ಜಗದೀಶ್ ಅವರು.
'ನಾವೆಲ್ಲಾ ಆಂಧ್ರ ನಾಯ್ಡು, ನಾವೆಲ್ಲಾ ರೌಡಿಸಂ..'
'ಅಂದ್ರೆ ಇವನು ಎಂಟ್ರಿ ತಗೊಳೋದಕ್ಕೆ ಕನ್ನಡ ಇಂಡಿಸ್ಟ್ರಿಗೆ ಎಂಟ್ರಿ ತಗೊಳೋದಕ್ಕೆ ಅಣ್ಣಾವ್ರ ಫ್ಯಾಮಿಲಿಯನ್ನ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಇವನು. ಆವತ್ತು ಇವನ ಬಾಯಿ ಮೇಲೆ ಹೆಜ್ಜೆ ಇಡಬೇಕಿತ್ತು ತಾನೆ? ಏನೂ ಬೇಡ ಆ ಪುನೀತು ಇವನ ಬಗ್ಗೆ ದರ್ಶನ್ ಬಗ್ಗೆ ಏನೂ ಮಾತನಾಡಲ್ಲ. ಇವನು ಒಂಥರ ಹೆಂಗೆ ಅಂದ್ರೆ, ಹೇ ನಾವೆಲ್ಲಾ ಆಂಧ್ರ ನಾಯ್ಡು, ನಾವೆಲ್ಲಾ ರೌಡಿಸಂ ಹಂಗೆ. ಮುನಿ ಅವ್ನೆ ಮುನಿ ಅವ್ರ ಅಣ್ಣ ರೌಡಿ ಕೊರಂಗು ಅವ್ನೆ... ಇಲ್ಲಿ ಒಂದು ಗ್ಯಾಂಗ್ ಐತೆ..' ಹೀಗೆ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ವಿರುದ್ಧ ಫುಲ್ ಗರಂ ಆಗಿ ವಿಡಿಯೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದು ಇದೀಗ ವೈರಲ್ ಆಗುತ್ತಿದೆ.
ಅಭಿಮಾನಿ ವಿರುದ್ಧ ಕೊಲೆ ಬೆದರಿಕೆ ಆರೋಪ!
ಡಿ-ಬಾಸ್ ದರ್ಶನ್ ತೂಗುದೀಪ್ ಹೆಸರು ಹೇಳಿಕೊಂಡು ಕೆಲವರು ಕೊಲೆ ಬೆದರಿಕೆ ಹಾಕ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಇಂತಹ ಕೆಲವರ ಹಾವಳಿ ಜಾಸ್ತಿ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಅವರಿಗೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಹೇಳಿಕೊಂಡವನು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕಿತ್ತಾಟ ಇದೀಗ ಮತ್ತಷ್ಟು ಜೋರಾಗುತ್ತಿದೆ.












Click it and Unblock the Notifications