Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಶುರುವಾಯ್ತು ಟೆನ್ಷನ್...
ಡಿ-ಬಾಸ್ ಅಂತಾ ಅಭಿಮಾನಿಗಳ ಬಾಯಿಂದ ಪ್ರೀತಿಯ ಬಿರುದನ್ನು ಪಡೆದಿರುವ ದರ್ಶನ್ ತೂಗುದೀಪ್ ಅವರು, ರೇಣುಕಾಸ್ವಾಮಿ ಕೊಲೆ ಕೇಸ್ ಕಾರಣಕ್ಕೆ ಬಸವಳಿದು ಹೋಗಿದ್ದಾರೆ. ಹೀಗಾಗಿ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ನಂತರದಲ್ಲಿ ಒಂದಷ್ಟು ನೆಮ್ಮದಿಯಾಗಿ ಇರುವ ಲೆಕ್ಕಾಚಾರ ಹಾಕಿದ್ದರು. ಆದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಶುರುವಾಯ್ತು ಟೆನ್ಷನ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜಾಮೀನು ಪಡೆದ ವಿಚಾರವನ್ನು ಚಾಲೆಂಜ್ ಆಗಿ ತೆಗೆದುಕೊಂಡ ಬೆಂಗಳೂರು ಪೊಲೀಸರು, ದರ್ಶನ್ ತೂಗುದೀಪ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಬೆಂಗಳೂರು ಪೊಲೀಸರ ಮನವಿ ತಿರಸ್ಕರಿಸಿ ದರ್ಶನ್ ತೂಗುದೀಪ್ ಅವರಿಗೆ ಬಿಗ್ ರಿಲೀಫ್ ನೀಡಿತ್ತು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಶುರುವಾಯ್ತು ಟೆನ್ಷನ್...

ಡಿ-ಬಾಸ್ ದರ್ಶನ್ ಅವರಿಗೆ ಟೆನ್ಷನ್...
ಕನ್ನಡ ಸಿನಿಮಾ ಇಂಡಸ್ಟ್ರಿ ಸೂಪರ್ ಸ್ಟಾರ್ & ಕನ್ನಡ ಸಿನಿಮಾ ಇಂಡಸ್ಟ್ರಿಯ ಬಾಕ್ಸ್ ಆಫಿಸ್ ಸುಲ್ತಾನ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಟೆನ್ಷನ್ ಶುರುವಾಗಿದೆ. ಈ ಬಾರಿ ಟೆನ್ಷನ್ ಶುರುವಾಗಿದ್ದು ರೇಣುಕಾಸ್ವಾಮಿ ಕೊಲೆಯ ಕೇಸ್ನಲ್ಲಿ ಅಲ್ಲ, ಬದಲಾಗಿ ಈ ಬಾರಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ಅವರ ಕಾರಣ ಟೆನ್ಷನ್ ಶುರುವಾಗಿದೆಯಂತೆ...
ಪವಿತ್ರಾ ಗೌಡ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತನ ದೂರವಾಗಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ಪವಿತ್ರಾ ಗೌಡ ಅವರು ಹಾಕಿರುವ ಹೊಸ ಸೋಷಿಯಲ್ ಮೀಡಿಯಾ ಸ್ಟೋರಿ ಹಲ್ಚಲ್ ಎಬ್ಬಿಸಿದೆ. ಪವಿತ್ರಾ ಗೌಡ ಅವರು, ಸ್ನೇಹ-ಸ್ನೇಹಿತರ ಕುರಿತ ವಿಡಿಯೋನ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದರೆ. ಇದೇ ವಿಡಿಯೋದಲ್ಲಿ ಒಳ್ಳೆಯ ಸ್ನೇಹಿತರ ಸಹವಾಸ ಎಷ್ಟು ಮುಖ್ಯ ಅನ್ನೋದು ನನಗೆ ಇದೀಗ ಅರಿವಾಗಿದೆ, ಎಂಬ ರೀತಿಯಲ್ಲಿ ಸಂದೇಶ ನೀಡಿದ್ದಾರೆ ಪವಿತ್ರಾ ಗೌಡ ಅವರು.
ಟೆನ್ಷನ್... ಟೆನ್ಷನ್... ಟೆನ್ಷನ್...?
ಹೀಗೆ, ಪವಿತ್ರಾ ಗೌಡ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೊಡ್ಡ ಹಲ್ಚಲ್ ಎದ್ದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇದೇ ವಿಚಾರ ದೊಡ್ಡದಾಗುತ್ತಾ? ಈ ವಿಚಾರದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ ಪವಿತ್ರಾ ಗೌಡ ಅವರಿಗೆ ಮತ್ತೊಮ್ಮೆ ಕಿರಿಕ್ ಆಗುತ್ತಾ? ಅಂತ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಹಾಗೇ ಇದರ ಜೊತೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಶುರುವಾಯ್ತು ಟೆನ್ಷನ್ ಅಂತಾನೂ ಕೆಲವರು ಕಮೆಂಟ್ & ಪೋಸ್ಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಆದಷ್ಟು ಬೇಗನೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೊಸ ಸಿನಿಮಾ ರಿಲೀಸ್ ಆಗಲಿ ಅಂತಾ ಮತ್ತೆ ಕೆಲವರು ರಿಕ್ವೆಸ್ಟ್ ಮಾಡುತ್ತಿದ್ದಾರೆ.












Click it and Unblock the Notifications