ರೊನಾಲ್ಡೋ ಬಗ್ಗೆ ಮಾತನಾಡಿ ಫುಲ್ ಟ್ರೋಲ್ ಆಗಿದ್ದ ಕೊಲೆ ಆರೋಪಿ ದರ್ಶನ್.!
Darshan Thoogudeepa case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಂಧನವಾಗಿದ್ದು, ಇದು ಬರೀ ರಾಜ್ಯ ಅಲ್ಲದೆ, ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ನಟ ದರ್ಶನ್ ಮೊದಲೆಲ್ಲ ಇಂಟರ್ವ್ಯೂವ್ಗಳಲ್ಲಿ ಕೊಡುತ್ತಿದ್ದ ದುರಂಹಕಾರದ ಹೇಳಿಕೆಗಳು ಇದೀಗ ಒಂದೊಂದೇ ಮುನ್ನೆಲೆಗೆ ಬರುತ್ತಿವೆ. ಇದರಲ್ಲೊಂದಾದ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರರೊಬ್ಬರ ಕೈ ಗಡಿಯಾರದ ಹೇಳಿಕೆಯನ್ನು ಎಳೆತಂದಿದ್ದು, ಇದೀಗ ಇದು ಭಾರೀ ವೈರಲ್ ಆಗುತ್ತಿದೆ.
ಕ್ರಿಸ್ಟಿಯಾನೋ ರೊನಾಲ್ಡೊ ಒಬ್ಬ ಫ್ರಸಿದ್ದ ಪೋರ್ಚುಗೀಸ್ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರು ಕ್ರೀಡಾಂಗಣಕ್ಕೆ ಕಾಲಿಟ್ಟರೆ ಸಾಕು ಎದುರಾಳಿಗಳಿಗೆ ನಡುಕ ಶುರು ಗ್ಯಾರಂಟಿ. ಅಷ್ಟರ ಮಟ್ಟಿಗೆ ತಲೆ ಉಪಯೋಗಿಸಿ ಪುಟ್ಬಾಲನ್ನು ಕಾಲಿನಲ್ಲಿ ಬುಗರಿಯಂತೆ ಆಟ ಆಡಿಸುತ್ತಿದ್ದರು. ಕ್ರೀಡಾಂಗಣದಲ್ಲಿ ಇವರ ಬಳಿಗೆ ಬಾಲ್ ಹೋತೆಂದರೆ ಮುಗಿತು ಅದು ಗೋಲ್ ಫಿಕ್ಸ್ ಎನ್ನುವ ಲೆಕ್ಕಾಚಾರದಲ್ಲಿ ಎದುರಾಳಿ ತಂಡದವರ ತಲೆಗೆ ಬಂದುಬಿಡುತ್ತದೆ. ಅಲ್ಲದೆ, ಅವರು ಹೊಡೆಯುವ ಗೋಲ್ ತಡೆಯಬೇಕೆಂದರೆ ಕಷ್ಟಸಾಧ್ಯ.

ಇವರು ಆರಂಭದಲ್ಲಿ ತುಂಬಾ ಬಡಕುಟುಂಬದಿಂದ ಬೆಳೆದು ಬಂದವರಾಗಿದ್ದು, ಪುಟ್ಬಾಲ್ ಕ್ರೀಡೆಯಲ್ಲಿ ಇಡೀ ಜಗತ್ತೇ ತನ್ನ ಕಡೆ ತಿರುಗಿ ನೋಡುವಂತೆ ಮಾಡುತ್ತಾರೆ. ಅಲ್ಲದೆ, ಇತಿಹಾಸದ ಪುಟಗಳಲ್ಲಿಯೂ ಇವರ ಸಾಧನೆಗಳ ಸರಮಾಲೆಯೇ ಮೂಡಿವೆ. ಕ್ರೀಡೆ ಅಷ್ಟೇ ಅಲ್ಲದೆ, ಇವರು ಬಹುತೇಕ ಅನಾಥ ಹಾಗೂ ಬಡಮಕ್ಕಳಿಗೂ ಆಸರೆಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಬೇಕೆಂದವರಿಗೆ ಉತ್ತಮ ಆದರ್ಶವಾಗಿದ್ದಾರೆ.
ಆಗ ಕಡುಬಡತನ, ಈಗ ಕೋಟಿ.. ಕೋಟಿ ಶ್ರೀಮಂತನಾಗಿದ್ದರೂ ಕೂಡ ರೊನಾಲ್ಡೊ ಅವರಿಗೆ ಸ್ವಲ್ಪನೂ ದುರಹಂಕಾರವೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಸ್ವಲ್ಪಮಟ್ಟಿಗೆ ಬೆಳೆದರೆ ಸಾಕು ದುರಹಂಕಾರದ ಮಾತುಗಳು, ಬೇರೆಯವನ್ನು ನಿಂದಿಸುವ ಕೆಲಸವನ್ನು ಮಾಡುತ್ತಾರೆ. ಅದರಲ್ಲೂ, ಕೆಲವು ರಾಜಕಾರಣಿಗಳ ಮಕ್ಕಳು ಮತ್ತು ಸೆಲೆಬ್ರೆಟಿಗಳು. ಈ ಸಾಲಿಗೆ ನಟ ದರ್ಶನ್ ಕೂಡ ಸೇರಿದ್ದಾರೆ.
ಸಾಮಾನ್ಯವಾಗಿ ಇಂಟರ್ವ್ಯೂವ್ಗಳಲ್ಲಿ ತಾವು ನಡೆದುಬಂದ ಹಾದಿ ಹಾಗೂ ಮುಂದಿನ ಸಾಧನೆಗಳ ಬಗ್ಗೆ ಹೇಳಿಕೊಳ್ಳವುದನ್ನು ನೋಡಿದ್ದೇವೆ. ಆದರೆ ಕೆಲವೊಬ್ಬರು ಬೇರೆಯವರನ್ನು ಹೋಲಿಕೆ ಮಾಡಿಕೊಂಡು ಮಾತನಾಡುವ ಕೆಲಸವನ್ನು ಮಾಡುತ್ತಾರೆ.
ಕೆಲವು ವರ್ಷಗಳ ಹಿಂದೆಯಷ್ಟೇ, ನಟ ದರ್ಶನ್ ಅವರು ಇಂಟರ್ವ್ಯೂವ್ವೊಂದರಲ್ಲಿ ಮಾತನಾಡುತ್ತಾ ರೊನಾಲ್ಡೊ ಅವರ ಕೈಗಡಿಯಾರದ ವಿಚಾರವನ್ನು ತೆಗೆಯುತ್ತಾರೆ. ಈ ವಿಚಾರಗಳೆಲ್ಲ ಇದೀಗ ಮುನ್ನಲೆಗೆ ಬರಲು ಕಾರಣವೇ ರೇಣುಕಾಸ್ವಾಮಿ ಹತ್ಯೆ.
ರೊನಾಲ್ಡೋ ಅವರು ಅವರದ್ದೇ ಆದ ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಟ ದರ್ಶನ್ ಅವರಿಗೆ ಹೋಲಿಕೆ ಮಾಡಿಕೊಳ್ಳುವ ಯೋಗ್ಯತೆಯಿಲ್ಲ ಎಂದು ಹೇಳುತ್ತಿದ್ದಾರೆ. ಹಾಗೇ ನೋಡಿದರೆ ರೊನಾಲ್ಡೋ ದರ್ಶನ್ಗಿಂತ ನೂರು ಪಟ್ಟು ಶ್ರೀಮಂತ ವ್ಯಕ್ತಿ. ಆದರೂ ಅವರು ಯಾರ ಬಳಿಯಾದರೂ ಮಾತನಾಡುವಾಗ ಸೌಮ್ಯತೆಯಿಂದ ಮಾತನಾಡುತ್ತಾರೆ. ಆದ್ದರಿಂದ ಅವರಿಗೆ ನೀವು ಹೋಲಿಕೆ ಮಾಡಿಕೊಳ್ಳಬೇಡಿ ಅಂತಲೂ ದರ್ಶನ್ಗೆ ನೆಟ್ಟಿಗರು ಹಾಗೂ ರೊನಾಲ್ಡೊ ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಏನು ಹೇಳಿದ್ದರು ಎಂದು ಇಲ್ಲಿ ತಿಳಿಯಿರಿ.
"ಕ್ರಿಸ್ಟಿಯಾನೋ ರೊನಾಲ್ಡೊದೊಂದು ಇಂಟರ್ವ್ಯೂವ್ ನೋಡ್ತಿದ್ದೆ, ಈ ವೇಳೆ ಮುಂದುಗಡೆ ಕುಳಿತವನು ಒಬ್ಬನು ಕೇಳ್ತಾನೆ, ನೀವು ಬಡಕುಟುಂಬದಿಂದ ಬಂದಿದ್ದಿರಂತೆ, ಆದರೆ ಇವತ್ತು ಐಷಾರಾಮಿ ಗಾಡಿಲಿ ಓಡಾಡ್ತಿದ್ದೀರ. ಈತರ ವಾಚ್ ಕಟ್ತೀರ, ಇದು ಎಷ್ಟು ಬೆಲೆ ಬಾಳುತ್ತದೆ ಎಂದು. ಆಗ ಸ್ಲಿಪ್ಪರ್ ಶಾಟ್ ಹೊಡೆದ ರೀತಿ ರೊನಾಲ್ಡೊ ಉತ್ತರ ನೀಡುತ್ತಾರೆ," ಎಂದು ದರ್ಶನ್ ಹೇಳುತ್ತಾನೆ.
"ಈ ಬ್ರಿಲಿಯನ್ಸ್ನಿಂದ ನಾವು ಕಲಿತುಕೊಳ್ಳುತ್ತೇವೆ. ನೀನು ಕಟ್ಟಿರೋ ವಾಚಲ್ಲಿ ಅದೇ ಟೈಮ್, ನಾನು ಕಟ್ಟಿರೋ ವಾಚಲ್ಲೂ ಅದೇ ಟೈಂ. ಆದರೆ, ನಾನು ಕಟ್ಟಿರೋ ವಾಚ್ ನನ್ ಟೈಂ ಹೇಗಿದೆ ಎಂದು ತೋರಿಸುತ್ತದೆ. ನೀನು ಕಟ್ಟಿರೋ ವಾಚ್ ನಿನ್ ಟೈಂ ಹೇಗಿದೆ ಎಂದು ತೋರಿಸುತ್ತದೆ. ಎರಡೂ ಒಂದೇ ಟೈಂ ಹೇ.. ಆದರೆ ನನ್ ಟೈಂ ಹೇಳುತ್ತದೆ ನಾನ್ ಹೇಗಿದ್ದೀನಿ ಅಂತಾ," ರೊನಾಲ್ಡೊ ಹೇಳಿದ್ದಾರೆ ಎಂದು ಹೇಳುತ್ತಾ ಎದುರಿಗೆ ಕುಳಿತವರಿಗೆ ಅವಮಾನ ಮಾಡುತ್ತಾರೆ.
-
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ











Click it and Unblock the Notifications