Darshan Thoogudeepa: ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವ ತೆಗೆಯಲು...

ಡಿ-ಬಾಸ್ ದರ್ಶನ್ ತೂಗುದೀಪ್ 25 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಬಾಕ್ಸ್ ಆಫಿಸ್ ಸುಲ್ತಾನ ಆಗಿ ಮೆರೆದಿದ್ದರು ಅನ್ನೋದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಹೆಮ್ಮೆ ಆಗಿದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ನೂರಾರು ಶತ್ರುಗಳನ್ನ ಎದುರು ಹಾಕಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು.

ಡಿ-ಬಾಸ್ ದರ್ಶನ್ ತೂಗುದೀಪ್ ಸಿನಿಮಾಗಳು ಅಂದ್ರೆ ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಲೆವೆಲ್ ಅನ್ನೋದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಮಾತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 25 ಕೋಟಿ ರೂಪಾಯಿ ಒಂದು ಸಿನಿಮಾ ತೆಗೆದುಕೊಳ್ಳುತ್ತಾರೆ ನಟ ದರ್ಶನ್ ತೂಗುದೀಪ್ ಅವರು ಅನ್ನೋ ಮಾತುಗಳು ಕೂಡ ಓಡಾಡುತ್ತವೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆಳವಣಿಗೆ ಸಹಿಸದ ಕೆಲವರು, ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವ ತೆಗೆಯಲು...

Darshan Thoogudeepa And Special Pooja In Turahalli Forest Area

ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ಅವರ...

ಹೌದು, ಮಾಟ & ಮಂತ್ರ ಮಾಡಿಸುತ್ತಾ ಜೀವ ತೆಗೆಯುವುದು ಮತ್ತು ಸಾಯಿಸುವ ಕುರಿತಾಗಿ ನಾವು ಕೇಳಿರುತ್ತೀವಿ. ಅದರಲ್ಲೂ ಶತ್ರುಗಳ ನಾಶಕ್ಕೆ ಮಾಟ & ಮಂತ್ರದ ಮೊರೆ ಹೋಗ್ತಾರೆ ಬಹುತೇಕರು. ಅದೇ ರೀತಿಯಾಗಿ ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವ ತೆಗೆಯಲು...

ರೇಣುಕಾಸ್ವಾಮಿ ಕೊಲೆ ಕೇಸ್‌ಗೂ ಮೊದಲೇ ದರ್ಶನ್ ತೂಗುದೀಪ್ ಅವರಿಗೆ ವಿರೋಧಿಗಳೆಲ್ಲ ಸೇರಿ ಸ್ಕೆಚ್ ಹಾಕಿ, ಮಾಠ & ಮಂತ್ರ ಮಾಡಿಸಿರುವ ಸ್ಫೋಟಕ ಸಂಗತಿ ಬಯಲಾಗಿದೆ. ಇದೇ ವಿಚಾರದ ಬಗ್ಗೆ ವರದಿ ಕೂಡ ಹೊರ ಬಿದ್ದಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಆದರೆ, ಆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳ ಕುತಂತ್ರ ಹಿನ್ನೆಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಹೋಗುವಂತೆ ಆಗಿತ್ತು ಎಂಬ ಭಾರಿ ಗಂಭೀರ ಆರೋಪ ಕೇಳಿಬಂತು. ಹೀಗಿದ್ದಾಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.

2021ರ ಸಮಯದಲ್ಲಿ ಡಿ-ಬಾಸ್ ದರ್ಶನ್ ಅವರ...

ಅಂದಹಾಗೆ ಚಾಮರಾಜನಗರ ಮೂಲಕ ಬಂದಿದ್ದ ಮಾಂತ್ರಿಕರ ತಂಡ ಒಂದು 2021 ರಲ್ಲೇ ಈ ರೀತಿಯಾಗಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಮಾಟ & ಮಂತ್ರ ಮಾಡಿಸಿ ಹೋಗಿತ್ತು ಎಂಬ ಆರೋಪ ಕೇಳಿ ಬಂದಿದೆ. 2021ರ ಸಮಯದಲ್ಲಿ ದರ್ಶನ್ ತೂಗುದೀಪ್‌ರ ಸಿನಿಮಾಗಳು ದೊಡ್ಡ ಬ್ರಾಂಡ್ ಕ್ರಿಯೇಟ್ ಮಾಡಿದ್ದವು. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿ ಒಳಗೆ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಎಂಬ ಕೀರ್ತಿ ಕೂಡ ದರ್ಶನ್ ತೂಗುದೀಪ್ ಅವರಿಗೆ ಇತ್ತು.

ಆದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರು ಹೀಗೆ ಡಿ-ಬಾಸ್ ದರ್ಶನ್ ಅವರ ವಿರುದ್ಧ ಮಾಟ & ಮಂತ್ರ ಮಾಡಿಸಿ, ಹಂದಿ ರಕ್ತ ಬಳಸಿ ಕೆಟ್ಟದ್ದು ಮಾಡಲು ಬಯಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗೆ 2021 ರಲ್ಲಿ 5 ಲಕ್ಷ ರೂಪಾಯಿ ಪಡೆದು ಡಿ-ಬಾಸ್ ದರ್ಶನ್ ಅವರ ವಿರುದ್ಧ ಹಂದಿ ತಲೆ ಕಡಿದು ಆ ರಕ್ತದಿಂದಲೇ ಮಾಟ ಮಾಡಿಸಲು ಪ್ರಯತ್ನ ಮಾಡಿದ್ದ ಆರೋಪ ಸಂಚಲನ ಸೃಷ್ಟಿ ಮಾಡಿದೆ.

10 ವರ್ಷಗಳ ಹಿಂದೆ ಪರಿಚಯ!

ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಪವಿತ್ರಾ ಗೌಡ ಪರಿಚಯ ಆಗಿ ಬರೋಬ್ಬರಿ 10 ವರ್ಷ ಕಳೆದಿದೆ. 2014 ರಲ್ಲಿ ದರ್ಶನ್ ತೂಗುದೀಪ್ ಅವರ ಸ್ನೇಹ ಮಾಡುವುದಕ್ಕೂ ಮೊದಲು ಪವಿತ್ರಾ ಗೌಡ ಮಾಜಿ ಗಂಡ ಅಂದ್ರೆ ಸಂಜಯ್ ಸಿಂಗ್ ಜೊತೆಗೆ ಮದುವೆ ಆಗಿದ್ದರು. ಆದರೆ ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ದೂರವಾಗಿದ್ದರು. ಹೀಗೆಲ್ಲ ಪವಿತ್ರಾ ಗೌಡ ತಮ್ಮ ಮೊದಲ ಗಂಡನಿಂದ ದೂರವಾದ ನಂತರ 2014ರ ಸಮಯದಲ್ಲಿ 'ಬುಲ್ ಬುಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಪರಿಚಯ ಆಗಿದ್ದು ಇದೀಗ ಇತಿಹಾಸ.

ಪವಿತ್ರಾ ಗೌಡಗೆ ಪರದಾಡುವ ಸ್ಥಿತಿ?

ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದೀಗ ಮತ್ತೊಂದು ಸಮಸ್ಯೆ ಸುಳಿಗೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸುಪ್ರೀಕೋರ್ಟ್‌ಗೆ ಕರ್ನಾಟಕ ಪೊಲೀಸರು ಅರ್ಜಿ ಹಾಕಿದ್ದು, ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಮಾಡಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಭಾರಿ ಗಮನ ಸೆಳೆದಿದೆ ರೇಣುಕಾಸ್ವಾಮಿ ಕೊಲೆ ಕೇಸ್. ಪವಿತ್ರಾ ಗೌಡ ಕನ್ನಡ ಸಿನಿಮಾ ರಂಗದಲ್ಲಿ ಸಾಲುಸಾಲು ಸೋಲು ಕಂಡಿದ್ದರು. ಹೀಗಿದ್ದಾಗಲೇ 2014ರ ಬುಲ್ ಬುಲ್ ಸಿನಿಮಾದಲ್ಲಿ ತನಗೆ ಹೀರೋಯಿನ್ ಆಗಿ ನಟಿಸಲು ಚಾನ್ಸ್ ಕೊಡಿ ಅಂತ ಪವಿತ್ರಾ ಗೌಡ, ಡಿ-ಬಾಸ್ ದರ್ಶನ್ ತೂಗುದೀಪ್‌ರ ಎದುರು ಮನವಿ ಮಾಡಿದ್ದರಂತೆ. ಹೀಗೆ ಶುರುವಾಗಿತ್ತು ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸ್ನೇಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+