ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಬಿಗ್ ವಾರ್!
ಕನ್ನಡ ಸಿನಿಮಾ ರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದ್ದು, ಪದೇ ಪದೇ ಸಾವಿನ ಸುದ್ದಿ ಕೇಳಿ ಕೇಳಿ ಅಭಿಮಾನಿಗಳ ಎದೆಯಲ್ಲಿ ನಡುಕ ಉಂಟಾಗಿದೆ. ಇದರ ಜೊತೆಗೆ ವಂಚನೆ ಆರೋಪ & ಪೊಲೀಸ್ ಕೇಸ್ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ನಲುಗಿ ಹೋಗುವಂತೆ ಮಾಡಿದೆ. 7,00,00,000 ಕನ್ನಡಿಗರು ತಮ್ಮ ಅಸ್ತಿತ್ವವನ್ನು ಮುಡಿಪಾಗಿ ಇಟ್ಟು ಕಟ್ಟಿದ್ದ ಕನ್ನಡ ಸಿನಿಮಾ ರಂಗ ನಲುಗಿ ಹೋಗಿ ಸಂಚಲನ ಸೃಷ್ಟಿಯೇ ಆಗಿದೆ.
ಕನ್ನಡ ಸಿನಿಮಾ ರಂಗದಲ್ಲಿ ಕಳೆದ 25 ವರ್ಷಗಳಿಂದ ಸಾಲು ಸಾಲು ಸಿನಿಮಾಗಳನ್ನ ನೀಡುತ್ತಾ ಬಂದಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್, ಇದೀಗ ಮತ್ತೊಂದು ಭರ್ಜರಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡಲು ಬರ್ತಿದ್ದಾರೆ ಅಂತಾ ಅಭಿಮಾನಿಗಳು ನಿರೀಕ್ಷೆಯ ಬೆಟ್ಟವನ್ನೇ ಎದೆಯಲ್ಲಿ ಇದೀಗ ಇಟ್ಟುಕೊಂಡು ಕಾಯುತ್ತಿದ್ದರು. ಮತ್ತೊಂದು ಕಡೆ ನಟ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಕೂಡ ಈಗ ರಿಲೀಸ್ ಆಗಲು ಸಜ್ಜಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ...
ಧ್ರುವ ಸರ್ಜಾ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ನಡುವೆ ದೊಡ್ಡ ಯುದ್ಧ ನಡೆದು ಹೋಗಿದೆ. ಆಕ್ಷನ್ ಪ್ರಿನ್ಸ್ ಅಂತಾ ಬಿರುದು ಪಡೆದಿರುವ ಧ್ರುವ ಸರ್ಜಾ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇತ್ತೀಚೆಗೆ ಈ ಬೆಂಕಿಯ ಕಿಡಿ ತಣ್ಣಗಾಗಿದೆ ಅಂತಾ ಹೇಳುವಾಗ ಮತ್ತೊಂದು ಸಂಚಲನ ಸೃಷ್ಟಿ ಆಗಿದೆ.












Click it and Unblock the Notifications