ನಾನು ಯಶ್ ತರ ಬೆಳಿಯಲ್ಲ: ಸೀತಾರಾಮ ನಟ ಗಗನ್ ಹೀಗಂದಿದ್ದೇಕೆ?
ಸೀತಾರಾಮ ಸೀರಿಯಲ್ ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟರ ಬಗ್ಗೆ ಮಾತನಾಡಿರುವ ಅವರು ಯಾರಿಗೂ ಕಾಂಪೆಟೇಶನ್ ಕೊಡಲು ಹೋಗಬೇಡಿ ಎಂದಿದ್ದಾರೆ. ಸೆಟ್ನಲ್ಲಿ ಕೂಡ ಬೇರೆಯವರು ಹೇಳೋದನ್ನ ಕೇಳಿ. ನಾನು ಯಾವುದೇ ಆಕ್ಟಿಂಗ್ ಕ್ಲಾಸ್ಗೆ ಹೋಗಿಲ್ಲ, ನನಗೆ ಯಾವುದೇ ಆಕ್ಟಿಂಗ್ ಅನುಭವ ಇರಲಿಲ್ಲ ಎಂದು ಗಗನ್ ಹೇಳಿದ್ದಾರೆ.
ನಾನು ಜಿಮ್ಗೆ ಹೋಗುತ್ತಿದ್ದೆ. ಅದೇ ಜಿಮ್ಗೆ ದರ್ಶನ್ ಸರ್ ಕೂಡ ವರ್ಕೌಟ್ ಮಾಡಲು ಬರ್ತಿದ್ರು. ಒಂದು ಟೈಮಲ್ಲಿ ನಾವೆಲ್ಲ ಸಖತ್ ಕ್ಲೋಸ್ ಇದ್ವಿ, ಅವರ ಬಿಟಿಎಂ ಮನೆಗೆಲ್ಲ ಹೋಗಿ ಬಂದಿದ್ದೆ. ಅವರು ಒಂದು ಪಕ್ಷಿ ಸಾಕಿದ್ರು, ಅದನ್ನು ನನ್ನ ಮೇಲೆ ಛೂ ಬಿಡೋರು, ಆಗ ನಾನಿನ್ನೂ ಚಿಕ್ಕವನು, ಸಿಕ್ಕಾಪಟ್ಟೆ ತರ್ಲೆ ಆಗಿದ್ದೆ ಎಂದು ದರ್ಶನ್ ಅವರೊಂದಿಗಿನ ನಂಟನ್ನು ಬಿಚ್ಚಿಟ್ಟಿದ್ದಾರೆ.

ನಾನು ಸ್ಕೂಲ್ನಲ್ಲಿರಬೇಕಾದರೆ ನಟ ದರ್ಶನ್ ಸರ್ ಗೊತ್ತಿದ್ರು, ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಕೂಡ ನನಗೆ ಪರಿಚಯ. ನಮ್ಮ ತೋಟದಲ್ಲಿ ಬೆಳೆಯುವ ಹಣ್ಣುಗಳೆಲ್ಲ ಅವರ ಮನೆಗೆ ಹೋಗುತ್ತೆ. ಅವರು ಕೂಡ ಕೊಡಗಿನ ಪೊನ್ನಂಪೇಟೆಯವರು. ಹಾಗಾಗಿ ಆಂಟಿ ಜೊತೆ ನಾವೆಲ್ಲ ಕೂರ್ಗಿ ಭಾಷೆಯಲ್ಲೇ ಮಾತನಾಡುತ್ತೇವೆ. ಅವರು ನನಗೆ ತುಂಬಾ ಕ್ಲೋಸ್ ಎಂದಿದ್ದಾರೆ ಗಗನ್ ಚಿನ್ನಪ್ಪ.
ದರ್ಶನ್ ತಾಯಿ ನನಗೆ ದೊಡ್ಡ ಅಭಿಮಾನಿ
ಇನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರೊಂದಿಗೆ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡ್ತೀನಿ. ಅವರು ನನಗೆ ತುಂಬಾ ದೊಡ್ಡ ಫ್ಯಾನ್, ಅವರು ನನ್ನನ್ನ ಮಗ ಎಂದುಕೊಂಡೇ ಮಾತನಾಡಿಸುತ್ತಿದ್ರು, ನಾನು ಚಿಕ್ಕವಯಸ್ಸಿನಲ್ಲೇ ಇಂಡಸ್ಟ್ರಿಯ ಮಕ್ಕಳೊಂದಿಗೆ ಬೆಳೆದೆ. ದಿಗಂತ್, ಜೈಜಗದೀಶ್ ಮಕ್ಕಳು ಅವರೆಲ್ಲ ನನ್ನ ಫ್ರೆಂಡ್ಸ್. ಆದ್ರೆ ನಾನು ಅವರ ಯಾರ ಸಹಾಯದಿಂದಲೂ ಇಂಡಸ್ಟ್ರಿಗೆ ಬರಲಿಲ್ಲ, ನನ್ನ ಶ್ರಮದಿಂದಲೇ ಇಂದು ಈ ಮಟ್ಟಕ್ಕೆ ಬಂದಿದ್ದೀನಿ ಎಂದು ಗಗನ್ ಹೇಳಿದ್ದಾರೆ.
ನನಗೆ ಯಶ್ ತರಾನೇ ಆಗಬೇಕು ಅಂತಲ್ಲ, ಅವರಂತೆ ವಿಶನ್ ಇದೆ. ಎಲ್ಲಿಗೆ ಗುರಿ ತಲುಪಬೇಕು ಅನ್ನೋದಿದೆ. ಆದರೆ ಯ ತರಾನೇ ಬೆಳೀಬೇಕು ಅಂತಿಲ್ಲ, ನಾನು ಯಾರಿಗೂ ಕಾಪಿ ಆಗಲು ಇಷ್ಟವಿಲ್ಲ. ಯಾಕಂದ್ರೆ ಅವರೆಲ್ಲ ಒರಿಜನಲ್. ಯಶ್, ದರ್ಶನ್, ಸುದೀಪ್ ಅವರನ್ನು ಯಾರೂ ರೀಪ್ಲೇಸ್ ಮಾಡಲು ಸಾಧ್ಯವೇ ಇಲ್ಲ. ನಾನು ಹೊಸಬರಿಗೂ ಅದನ್ನೇ ಹೇಳ್ತೀನಿ, ಯಾರಿಗೂ ಕಾಂಪಿಟೇಷನ್ ಕೊಡಲು ಹೋಗಬೇಡಿ.
ಸೆಟ್ನಲ್ಲಿ ಕೂಡ ಬೇರೆಯವರು ಹೇಳೋದನ್ನ ಕೇಳಿ. ನಾನು ಯಾವುದೇ ಆಕ್ಟಿಂಗ್ ಕ್ಲಾಸ್ಗೆ ಹೋಗಿಲ್ಲ, ನನಗೆ ಯಾವುದೇ ಆಕ್ಟಿಂಗ್ ಅನುಭವ ಇರಲಿಲ್ಲ ಎಂದು ಗಗನ್ ಹೇಳಿದ್ದಾರೆ. ಸೀರಿಯಲ್ಗಳಲ್ಲಿ ಬ್ಯುಸಿಯಾಗಿರುವ ನಟ ಗಗನ್ ಚಿನ್ನಪ್ಪ ಅವರು ಈಗಾಗಲೇ ಕರ್ನಾಟಕದ ಮನೆಮಾತಾಗಿದ್ದಾರೆ. ಇತ್ತೀಚೆಗಷ್ಟೇ ಸೀತಾರಾಮ ಸೀರಿಯಲ್ ಮುಗಿಸಿರುವ ಅವರು ಮುಂದಿನ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಲಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications