Dali Dhananjay: ನಾನು ಬಿರಿಯಾನಿ ತಿಂದಿದ್ದಲ್ಲ, ರಾಜಕಾರಣಿಗಳು ಎಷ್ಟೆಷ್ಟು ಹಣ ತಿಂತಿದ್ದಾರೆ ಅಂತ ಪ್ರಶ್ನಿಸಲಿ: ಡಾಲಿ ಧನಂಜಯ್
ನಟ ಡಾಲಿ ಧನಂಜಯ್ ಇತ್ತೀಚೆಗೆ ಬಿರಿಯಾನಿ ತಿಂದ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಇದನ್ನು ಸಮುದಾಯದ ದೃಷ್ಟಿಯಿಂದ ಟೀಕಿಸಿ, ಲಿಂಗಾಯತರು ಮಾಂಸ ತಿನ್ನುತ್ತಾರಾ? ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದರು. ಈ ಬಗ್ಗೆ ನಟ ಡಾಲಿ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಬಿರಿಯಾನಿ ಸೇವನೆ ಬಗ್ಗೆ ಟೀಕಿಸಿದವರಿಗೆ ನೇರವಾಗಿ ಪ್ರಶ್ನೆ ಮಾಡಿರುವ ನಟ, 'ನಾನು ಬಿರಿಯಾನಿ ತಿಂದಿದ್ದಕ್ಕಿಂತ ರಾಜಕಾರಣಿಗಳು ಎಷ್ಟೆಷ್ಟು ತಿಂತಿದ್ದಾರೆ ಅನ್ನೋದನ್ನ ಜನ ಪ್ರಶ್ನೆ ಮಾಡಲಿ' ಎಂದಿದ್ದಾರೆ.
ಬಿರಿಯಾನಿ ವಿವಾದದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಡಾಲಿ, 'ಪಕ್ಷಾತೀತವಾಗಿ ಸಾವಿರಾರು ಕೋಟಿ ಲೂಟಿ ಮಾಡಿದವರೆಲ್ಲ ಇಂದು ಆರಾಮಾಗಿ ಇದ್ದಾರೆ. ಆದರೆ ಜನ ಅದನ್ನೆಲ್ಲ ಪ್ರಶ್ನೆ ಮಾಡೋದನ್ನೇ ನಿಲ್ಲಿಸಿದ್ದಾರೆ. ಈಗ ನಾನು ಬಿರಿಯಾನಿ ತಿಂದಿದ್ದಕ್ಕಿಂತ ನಾಯಕರು ಎಷ್ಟೆಷ್ಟು ಲೂಟಿ ಮಾಡಿ ತಿಂತಿದ್ದಾರೆ ಅನ್ನೋದನ್ನ ಜನ ಪ್ರಶ್ನೆ ಮಾಡಬೇಕಲ್ಲವೇ? ನಾವು ಯಾರಿಗೆ ವೋಟ್ ಹಾಕಿದ್ದೀವಿ? ಏನ್ ಆಗ್ತಿದೆ, ಏನ್ ಆಗ್ತಿಲ್ಲ? ಅಂತ ಪಕ್ಷಾತೀತವಾಗಿ ಜನ ಪ್ರಶ್ನೆ ಮಾಡಬೇಕು. ಅದನ್ನು ಬಿಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ನಾವೇ ಸಪೋರ್ಟ್ ಮಾಡಿಕೊಂಡಿದ್ರೆ ಏನಾಗುತ್ತೆ?' ಎಂದು ಗಂಭೀರವಾದ ಪ್ರಶ್ನೆ ಮುಂದಿಟ್ಟಿದ್ದಾರೆ.

'ಜಾತಿ ಇರಲ್ಲ ಅಂದುಕೊಳ್ತಿದ್ದೆ'
'ನಾವೆಲ್ಲ ಚಿಕ್ಕಂದಿನಲ್ಲಿ ಮುಂದೆ ಈ ರೀತಿ ಜಾತಿ ವ್ಯವಸ್ಥೆ ಅನ್ನೋದೆಲ್ಲ ಸಮಾಜದಲ್ಲಿ ಇರೋದಿಲ್ಲ ಅಂದುಕೊಳ್ಳುತ್ತಿದ್ವಿ. ಆದರೆ ಈಗ ನಡೆಯುತ್ತಿರೋದೆಲ್ಲ ನೋಡಿದಾಗ, ಅದು ನಿಜಕ್ಕೂ ಹೋಗಿದೆಯಾ? ಅನಿಸುತ್ತೆ. ಸೋಷಿಯಲ್ ಮೀಡಿಯಾದಲ್ಲಿ, ನಗರಗಳಲ್ಲಿ ಕುಳಿತು ಇದೆಲ್ಲ ಈಗ ಇಲ್ಲ ಅಂತ ಮಾತನಾಡುವುದು ಸುಲಭ. ಒಂದು ಊಟದ ವಿಚಾರಕ್ಕೇ ಇಷ್ಟೆಲ್ಲ ಆಗುತ್ತೆ ಅಂದ್ರೆ, ವಾಸ್ತವದಲ್ಲಿ ಅದೆಲ್ಲವೂ ಹೋಗಿಲ್ಲ ಅಲ್ವಾ?' ಎಂದಿದ್ದಾರೆ.
'ಫೇಕ್ ಅಕೌಂಟ್ಗಳ ಸ್ಯಾಡಿಸಂ'
'ನನ್ನ ಕುಟುಂಬದವರಿಗೆ ಈ ವಿಚಾರಗಳಿಂದ ಮೊದ ಮೊದಲಿಗೆ ಬೇಜಾರಾಗಿತ್ತು. ಈಗ ಅವರಿಗೂ ನಾನು ಇದನ್ನೆಲ್ಲ ಅರ್ಥ ಮಾಡಿಸಿದ್ದೀನಿ. ಸಾರ್ವಜನಿಕ ಜೀವನದಲ್ಲಿದ್ದಾಗ ಎಲ್ಲರಿಗೂ ಇದೆಲ್ಲ ಸಹಜ. ಇನ್ನು ಸೋಷಿಯಲ್ ಮೀಡಿಯಾ ನೋಡಿದ್ರೆ ಫೇಕ್ ಅಕೌಂಟ್ಗಳಿಂದ ಯಾರನ್ನೂ ಟ್ರೋಲ್ ಮಾಡುವುದು ಬಿಡುತ್ತಿಲ್ಲ. ಫೇಕ್ ಅಕೌಂಟ್ ಬಳಸಿ ಈ ರೀತಿ ಮಾಡುವುದು ನಿಜಕ್ಕೂ ಒಂದು ಸ್ಯಾಡಿಸಂ. ಅಲ್ಲಿ ಯಾರು ಏನು ಬೇಕಾದ್ರೂ ಹಾಕಬಹುದು. ಯಾವ ಲೆಜೆಂಡ್ಗಳನ್ನೂ ಅವರು ಬಿಡುತ್ತಿಲ್ಲ' ಎಂದು ಡಾಲಿ ಖಂಡಿಸಿದ್ದಾರೆ.
'ಮೊದಲೆಲ್ಲ ಬರೆದು, ಯೋಚಿಸಿ, ತಿದ್ದಿ ಪೋಸ್ಟ್ ಮಾಡ್ತಿದ್ರು. ಈಗ ಹಾಗಿಲ್ಲ, ತಕ್ಷಣವೇ ಪೋಸ್ಟ್ ಮಾಡ್ತಾರೆ. ಅದು ಸರಿಯೋ ತಪ್ಪೋ ಯೋಚಿಸದೆ ಪೋಸ್ಟ್ ಮಾಡಿಬಿಡ್ತಾರೆ. ಫೇಕ್ ಅಕೌಂಟ್ಗಳನ್ನ ತೆಗೆದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತೆ. ಈ ವಿಚಾರದ ಬಗ್ಗೆ ಅಧಿಕಾರದಲ್ಲಿರುವ ಹಾಗೂ ನಮ್ಮನ್ನು ಆಳುತ್ತಿರುವವರನ್ನೇ ಪ್ರಶ್ನಿಸಬೇಕು. ನಾವು ಅವರನ್ನ ಪ್ರಶ್ನೆ ಮಾಡುವುದೇ ಇಲ್ಲ. ನಾವೆಲ್ಲರೂ ಅವರ ಕಡೆ, ಇವರ ಕಡೆ ಅಂತ ಇಬ್ಭಾಗ ಆಗಿದ್ದೇವೆ. ಅವರಿಗೇ ಸಪೋರ್ಟ್ ಮಾಡುತ್ತಿರುವುದು ನಿಜಕ್ಕೂ ದುರಂತ' ಎಂದಿದ್ದಾರೆ. ಅಲ್ಲದೆ ಈ ಹಿಂದೆಯೂ ನಾನು ಅನೇಕ ಬಾರಿ ಬಿರಿಯಾನಿ ತಿಂದಿದ್ದೇನೆ ಎಂದೂ ಡಾಲಿ ಧನಂಜಯ್ ಸ್ಪಷ್ಟಪಡಿಸಿದ್ದಾರೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ












Click it and Unblock the Notifications