Actress Bhavana: ಈಗ ದರ್ಶನ್ ಕೈ ಬಿಟ್ಟು ಹೋಗುವ ಹೇಡಿ ನಾನಲ್ಲ; ಯಾವತ್ತಿಗೂ ನಾನು ದರ್ಶನ್ ಪರ ಎಂದ ನಟಿ ಭಾವನಾ
ಬೆಂಗಳೂರು, ಜೂನ್. 27: ನಟ ದರ್ಶನ್ ಪ್ರಕರಣಕ್ಕೆ ಸ್ಯಾಂಡಲ್ವುಡ್ನಿಂದ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿಲ್ಲ. ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ನಟ ಸುದೀಪ್, ನಟಿ ರಮ್ಯಾ, ಜಗ್ಗೇಶ್ ಸೇರಿದಂತೆ ಕೆಲವೇ ಕೆಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟಿ ಭಾವನಾ ಅವರು ದರ್ಶನ್ ಬೆಂಬಲಕ್ಕೆ ಬಂದಿದ್ದಾರೆ.
ಕನ್ನಡದ ಸೂಪರ್ ಹಿಟ್ ಸಿನಿಮಾ ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ಅವರು ಸಂತೋಷದಲ್ಲಿ ಮಾತ್ರ ಭಾಗಿಯಾಗಿ, ದುಃಖದ ಸಂದರ್ಭದಲ್ಲಿ ಅವರ ಜೊತೆಗೆ ನಿಲ್ಲದೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಯಾವಾಗಲೂ ದರ್ಶನ್ ಅವರ ಜೊತೆಗೆ ನಿಲ್ಲುತ್ತೇನೆ ಎಂದು ಗಟ್ಟಿಯಾಗಿ ಹೇಳಿಕೆ ನೀಡಿದ್ದಾರೆ.

ಹೇಡಿಯಂತೆ ದೂರ ಸರಿಯಲ್ಲ: ಭಾವನ ರಾಮಣ್ಣ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಚಿತ್ರರಂಗ ಮೌನವಾಗಿರುವ ಸಮಯದಲ್ಲಿ ಪ್ರಕರಣದ ಬಗ್ಗೆ ನಟಿ ಭಾವನಾ ರಾಮಣ್ಣ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ತಾನು ಯಾವತ್ತಿಗೂ ದರ್ಶನ್ ಪರ. ಕಾನೂನಿನ ಮೇಲೆ ನಂಬಿಕೆ ಇಡೋಣ. ನಾವ್ಯಾರು ಅಲ್ಲಿ ಏನಾಗಿದೆ ಎಂದು ನೋಡಿಲ್ಲ. ತಾಳ್ಮೆ ಇರಲಿ ಎಂದಿದ್ದಾರೆ.
"ಯಾವ ಮನೆಯ ಹೆಣ್ಣು ಮಗಳೇ ಆಗಿರಲಿ ಎಲ್ಲರಿಗೂ ಮಾನ ಮರ್ಯಾದೆ, ಅವರಿಗೂ ಒಂದು ಮನಸ್ಸು ಇರುತ್ತದೆ. ಯಾವುದೋ ಒಂದು ಅಪ್ರಾಪ್ತ ಯುವತಿಗೆ, 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾರದ್ದೋ ಮನೆ ಹೆಣ್ಣುಮಕ್ಕಳಿಗೆ ನೀವ್ಯಾಕೆ ಮೆಸೇಜ್ ಮಾಡ್ತೀರಾ.. ? ಯಾವ ತರದ ಮೆಸೆಜ್ ಬಂದಿದೆ ..? ಕೆಲವು ಸೋಷಿಯಲ್ ಮಿಡಿಯಾ ಮೆಸೇಜ್ಗಳನ್ನು ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ" ಎಂದು ಭಾವನಾ ಕಿಡಿ ಕಾರಿದ್ದಾರೆ.

"ಇದು ಸರಿ, ತಪ್ಪು ಅಂತ ನಾನು ಹೇಳ್ತಿಲ್ಲ. ಇನ್ನೊಂದು ಸೈಡ್ ಸ್ಟೋರಿಯನ್ನೂ ನೀವು ತೋರಿಸಬೇಕು. ಹೇಗೆ ಆಗಬಹುದಿತ್ತು, ಏನು ಮಾಡಬಹುದಿತ್ತು ಅನ್ನೋದನ್ನು ನಾನು ಹೇಳಲ್ಲ. ಸೈಕಿಯಾರ್ಟಿಸ್ಟ್ ಕೂಡ ಮನುಷ್ಯನ ಇವತ್ತಿನ ಘೋರವಾದ ಕೃತ್ಯಗಳನ್ನು ಘಟನೆ ಆದ ಮೇಲೆ ಅನಾಲಿಸಿಸ್ ಮಾಡುತ್ತಾರೆ. ಹಾಗೆ ಆಗದೆ ಇರುವ ತರ ಹೇಗೆ ಇರಬೇಕಿತ್ತು, ಯಾಕೆ ಹಾಗೆ ಆಗಿದೆ ಎಂದು ಇವತ್ತಿನವರೆಗೂ ಎಲ್ಲೂ ಜಾಸ್ತಿ ನಿದರ್ಶನಗಳು ಸಿಕ್ಕಿಲ್ಲ. ಯಾಕಂದ್ರೆ ಅದು ಮನುಷ್ಯನ ಎಮೋಷನ್ಗಳು. ನಾವು ತಲೆಯಿಂದ ಮಾತ್ರ ಯೋಚನೆ ಮಾಡಲ್ಲ ಮನಸ್ಸಿನಿಂದ ಕೂಡ, ಹೀಗಾಗಿ ಅ ಸಂದರ್ಭಲ್ಲಿ ಯಾಕೆ ಏನು ಮಾಡಿದ್ದಾರೆ ಅನ್ನೋದು ನಾನು ಹೇಳೋಕೆ ಆಗಲ್ಲ. ಅದನ್ನ ಸಮರ್ಥನೆ ಕೂಡ ಮಾಡಲ್ಲ" ಎಂದು ತಿಳಿಸಿದ್ದಾರೆ.
"ದರ್ಶನ್ ಅವರ ಜೊತೆಯಲ್ಲಿ ನಾನು ಭಗವಾನ್, ಚಿಂಗಾರಿ ಸಿನಿಮಗಳನ್ನು ಮಾಡಿದ್ದೇನೆ. ತುಂಬಾ ದಿನಗಳ ಶೂಟಿಂಗ್ನಲ್ಲಿ ಅವರ ಜೊತೆ ಇದ್ದೇನೆ. ಅದಾದ ಮೇಲೂ ಕೂಡ ತುಂಬ ಫ್ರೆಂಡ್ಲಿ ಆಗಿ ನಾವು ಸಾಕಷ್ಟು ಬಾರಿ ಸೇರಿದ್ದೇವೆ. ನಾನು ಯಾವಾಗಲೂ ಕಲಾವಿದರ ಪರ. ನಮ್ಮ ಕುಟುಂಬದವರನ್ನು ಬಿಟ್ಟು ಕೊಡಲು ಆಗಲ್ಲ. ನಾನು ನನ್ನ ಕಲಾವಿದರ ಜೊತೆ ನಿಲ್ಲುತ್ತಿದ್ದೇನೆ ಅಷ್ಟೇ, ಕಾನೂನು ಇದನ್ನೆಲ್ಲಾ ನೋಡಿಕೊಳ್ಳುತ್ತದೆ. ದರ್ಶನ್ ಅವರ ಸಂತೋಷದಲ್ಲಿ ಮಾತ್ರ ಭಾಗಿಯಾಗಿ ಈಗ ದುಃಖದಲ್ಲಿ ಭಾಗಿಯಾಗದೆ ಇರುವುದು ಎಂದರೆ ನನ್ನಲ್ಲೇ ನ್ಯೂನತೆ ಇದೆ ಅಂತ ಅರ್ಥ ನಾನು ಅವರ ಪರವಾಗಿ ನಿಲ್ಲುತ್ತೇನೆ. ಐ ಸ್ಟ್ಯಾಂಡ್ ವಿತ್ ದರ್ಶನ್" ಎಂದಿದ್ದಾರೆ.
-
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು?












Click it and Unblock the Notifications