ಜೈಲಲ್ಲಿರುವ ದರ್ಶನ್ ಭೇಟಿಯಾದ ನಟ ಶಿವಣ್ಣ, ಯಶ್, ಕಿಚ್ಚ ಸುದೀಪ್....Video Viral
Sandalwood Stars Video Viral: ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಂದ ಬಳಿಕ ಜನರ ಯೋಚನಾ ಲಹಿರಿ ಬದಲಾಗುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಂತೂ ಫೋಟೋ, ಸ್ಥಳ, ಊರು, ವ್ಯಕ್ತಿಗಳನ್ನು ಗುರುತೆ ಸಿಗದಂತೆ ಮಾಡಲಾಗುತ್ತಿದೆ. ಕಂಡಿದ್ದೆಲ್ಲವು ನಿಜವೆನೋ ಎಂಬಂತೆ ಎಡಿಟ್ ಮಾಡಲು ಈ ತಂತ್ರಜ್ಞಾನದಲ್ಲಿ ಅವಕಾಶ ಇದೆ. ಇದರಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆಯಬೇಕಿದೆ. ಮನರಂಜನಾ ಉದ್ದೇಶದಿಂದ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ (Darshan Thoogudeepa) ಅವರನ್ನು ಸ್ಯಾಂಡಲ್ವುಡ್ ಸ್ಟಾರ್ಸ್ ಭೇಟಿ ಮಾಡಿದರೆ ಹೇಗಿರುತ್ತದೆ ಎಂಬ ಝಲಕ್ ಎಐ ವಿಮೂಲಕ ರಚಿಸಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅನ್ನು ನೋಡಲು ಸ್ಯಾಂಡಲ್ವುಡ್ ಪ್ರಮುಖ ಸ್ಟಾರ್ ನಟರು ಹೋದರೆ ಹೇಗಿರುತ್ತದೆ. ಹೀಗೊಂದು ಕಲ್ಪನೆಯಡಿ ಎಐ ತಂತ್ರಜ್ಞಾನ, ನಟ ಪೋಟೋ ಬಳಸಿ ಕಾಲ್ಪನಿಕ ದೃಶ್ಯಗಳನ್ನು ಎಡಿಟ್ ಮಾಡಿ ಕಟ್ಟಿಕೊಡಲಾಗಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಫುಲ್ ಖಷಿಯಾಗಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ true_kannada_media ಹ್ಯಾಂಡಲ್ನಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ನಟ ದರ್ಶನ್ ಅವರು ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಾಣಿಸಿದ್ದಾರೆ. ಜೈಲಿಗೆ ದರ್ಶನ್ ಅವರ ಭೇಟಿಗೆ ಇವರೆಲ್ಲರು ತೆರಳಿರುವಂತೆ ಫೋಟೋಗಳನ್ನು ರಚಿಸಿ ವಿಡಿಯೋ ಮಾಡಲಾಗಿದೆ.
ನಿಜವಾಗಿಯೋ ಈ ಶಿವಣ್ಣ, ಯಶ್ ಮತ್ತು ಸುದೀಪ್ ಅವರು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೆನೋಂ ಎಂಬಂತೆ ನೈಜ ರೀತಿಯಲ್ಲಿ ವಿಡಿಯೋ ಮೂಡಿ ಬಂದಿದ್ದು, ಎಲ್ಲರನ್ನು ಸೆಳೆಯುತ್ತಿದೆ. "ಜೈಲಿಗೆ ಭೇಟಿ ನೀಡುತ್ತಿದ್ದಂತೆ ವಿವಿಧ ಹಣ್ಣಗಳ ಚೀಲವನ್ನು ಒಳಗಿನಿಂದ ಜಾಲರಿ ಮೂಲಕ ನಟ ದರ್ಶನ್ ಇಸಿಕೊಳ್ಳುತ್ತಾರೆ. ಕೆಲ ಹೊತ್ತು ನಾಲ್ವರು ನಿಂತು ಮಾತನಾಡುತ್ತಾರೆ. ಜೈಲಿನ ಒಳಗೆ ಕೇರ್ ಬೋರ್ಡ್ ಆಡುವುದು, ಜೈಲಿನ ಒಳಗೆ ಮುದ್ದೆ ಊಟ ಎಲ್ಲರೂ ಕೂಡಿ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸಾಲದೆಂಬಂತೆ ಜೈಲಿನ ಒಳಗೆ ಕೆಲವು ಕಾಲ ದರ್ಶನ್ ಜೊತೆಗೆ ಕಳೆದು ಕೊನೆಗೆ ಮರಳುವಾದ ದರ್ಶನ್ ಅವರತ್ತ ಕೈ ಬೀಸುವ ಸಹಜ ದೃಶ್ಯಗಳನ್ನು' ಎಐ ಮೂಲಕ ಕಟ್ಟಿಕೊಡಲಾಗಿದೆ.
ಜೈಲಿನಲ್ಲಿ ಒಬ್ಬ ಖೈದಿಯನ್ನು ಭೇಟಿ ಮಾಡಲು ಸ್ನೇಹಿತರ ಹೋದರೆ ಏನೆಲ್ಲ ಅನುಭವ ಆಗುತ್ತದೆ. ಅವರು ಒಟ್ಟಿಗೆ ಹೇಗೆಲ್ಲ ಕಾಣಬಹುದು ಎಂಬ ಪರಿಕಲ್ಪನೆಯನ್ನು ಇಲ್ಲಿ ಎಐನಿಂದ ಸೃಷ್ಟಿಸಲಾಗಿದೆ. ಸಾಕಷ್ಟು ಮೆಚ್ಚುಗೆ ಕಾಮೆಂಟ್ಗಳು ಈ ವಿಡಿಯೋಗೆ ಬಂದಿವೆ. ಒಂದೇ ದಿನದಲ್ಲಿ 2.74 ಲಕ್ಷ ಲೈಕ್ಸ್ಗಳು, ನೂರಾರು ಕಾಮೆಂಟ್ಗಳು ಬಂದಿವೆ.
ಸೆಲೆಬ್ರೆಟಿಗಳ ನೈಜ ಸಂಗತಿಗಳಿಗೆ ಎಐ ಟಚ್, ವಿಡಿಯೋ ವೈರಲ್
ಈ ವಿಡಿಯೋ ಮಾತ್ರವಲ್ಲದೇ ಸ್ಯಾಂಡಲ್ವುಡ್ನ ಅಪ್ಪು, ಶಿವಣ್ಣ, ದರ್ಶನ್, ಯಶ್, ಸುದೀಪ್, ಧ್ರುವ ಸರ್ಜಾ, ರಿಶಬ್ ಶೆಟ್ಟಿ ಹೀಗೆ ಹಲವರ ಗುಂಪು ಮಕ್ಕಳಂತೆ ನಲಿದಾಡುತ್ತಾ, ಆಟವಾಡುವುದು, ಒಂದೇ ಬೈಕ್ನಲ್ಲಿ ತೆರಳುವುದು, ಕಾಫಿ ಅಂಗಡಿ ಮುಂದೆ ಬೈಕ್ ನಿಲ್ಲಿಸಿ ಗುಂಪಾಗಿ ಹರಟೆ ಹೊಡೆಯುವುದು, ಮಳೆಯಲ್ಲಿ ನೆನೆಯುವುದನ್ನು ಇದೇ ಎಐ ಮೂಲಕ ಕಟ್ಟಿಕೊಡಲಾಗಿದೆ. ಇನ್ನೂ ಅಪ್ಪು ಅವರಿಗೆ ಹೃದಯಾಘಾತವಾದ ಸಂದರ್ಭ, ಚಿತ್ರರಂಗದ ಸ್ನೇಹಿತರು ಆತಂಕದಲ್ಲಿ ಆಸ್ಪತ್ರೆಯತ್ತ ದೌಡಾಯಿಸುವುದು ಸೇರಿದಂತೆ ಸಿನಿಮಾ ರಂಗದವರ ಕುರಿತ ಒಂದಷ್ಟು ನೈಜ ಘಟನೆಗಳಿಗೆ ಸಂಬಂಧಿಸಿದ ಘಟನೆಗಳಿಗೆ ಎಐ ಟಚ್ ಕೊಡಲಾಗಿದೆ. ಕಾಲ್ಪನಿಕ ದೃಶ್ಯಗಳ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಈ ವೈರಲ್ ಆಗುತ್ತಿರುವ ಎಐ ವಿಡಿಯೋಗಳನ್ನು ನೋಡಿ ಶ್ಲಾಘಿಸಿದ್ದಾರೆ.
-
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ












Click it and Unblock the Notifications