'ಟೇಕ್ ಇಟ್ ಈಸಿ ಊರ್ವಶಿ' ಹಿಟ್ ಸಾಂಗ್ ಹುಟ್ಟಿದ್ದು ಹೇಗೆ? ಅಚ್ಚರಿ ಸಂಗತಿ ಬಿಚ್ಚಿಟ್ಟ ನಟಿ ಊರ್ವಶಿ
1994ರಲ್ಲಿ ತೆರೆಕಂಡಿದ್ದ ಕಾದಲನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ಹಾಡಿದ್ದ "ಊರ್ವಶಿ, ಊರ್ವಶಿ, ಟೇಕ್ ಇಟ್ ಈಸಿ ಊರ್ವಶಿ" ಹಾಡು ಇಂದಿಗೂ ಎವರ್ಗ್ರೀನ್ ಹಿಟ್. ಈ ಸಿನಿಮಾವನ್ನು ಎಸ್.ಶಂಕರ್ ಡೈರೆಕ್ಟ್ ಮಾಡಿದ್ದರು. ಆದರೆ ಈ ಹಾಡಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಚ್ಚರಿ ವಿಚಾರವನ್ನು ದಕ್ಷಿಣ ಭಾರತದ ಹೆಸರಾಂತ ಹಿರಿಯ ನಟಿ ಊರ್ವಶಿ 20 ವರ್ಷಗಳ ಬಳಿಕ ರಿವೀಲ್ ಮಾಡಿದ್ದಾರೆ. ಅಸಲಿಗೆ ಈ ಹಾಡು ಹುಟ್ಟಿಕೊಂಡಿದ್ದು ಹೇಗೆ? ಎಂಬ ಕುತೂಹಲಕಾರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
ಗೀತ ರಚನೆಕಾರರಾದ ವಾಲಿ ಅವರು 1994ರಲ್ಲಿ ತೆರೆಕಂಡ "ಮಗಳಿರ್ ಮತ್ತುಮ್" ಚಿತ್ರಕ್ಕಾಗಿ "ಕರವೈ ಮಾಡು ಮೂರು" (ಮೂರು ಹಾಲು ಹಸುಗಳು) ಎಂಬ ಹಾಡನ್ನು ಬರೆದಿದ್ದರು. ರೇವತಿ, ರೋಹಿಣಿ ಮತ್ತು ನನಗೆ ಈ ಸಾಲುಗಳನ್ನು ಹಾಡಲು ಕೇಳಿದ್ದರು. ನಾನು ಅವರಿಗೆ ʼಅಯ್ಯೋ, ನಾನು ಆ ಪದವನ್ನು ಹೇಳುವುದಿಲ್ಲʼ ಎಂದಿದ್ದೆ. ಮಹಿಳೆಯರು ತಮ್ಮನ್ನು ತಾವು ಹಾಲು ಹಸುಗಳು ಎಂದು ಕರೆಯುತ್ತಾರೆಯೇ? ಎಂದು ವಿರೋಧಿಸಿದ್ದೆ. ಆದ ನಿರ್ದೇಶಕರು ಸಮಸ್ಯೆ ಏನು? ಎಂದು ಕೇಳಿದರು. ಅವರು ತೆಲುಗು ಅವರಾಗಿದ್ದ ಕಾರಣ ಮಹಿಳೆಯರು ತಮ್ಮನ್ನು ಕರವೈ ಮಾಡು ಎಂದು ಕರೆಯುವುದು ತುಂಬಾ ಕೆಟ್ಟ ಅರ್ಥ ಕೊಡುತ್ತೆ ಎಂದು ತಿಳಿಸಿದ್ದೆ ಎಂದು ಊರ್ವಶಿ ಆ ಘಟನೆ ನೆನೆದಿದ್ದಾರೆ.

ʼಕಮಲ್ ಹಾಸನ್ ಸರ್ ಈ ಸಿನಿಮಾದ ನಿರ್ಮಾಪಕರಾಗಿದ್ದರು. ಶೀಘ್ರದಲ್ಲೇ ಅವರಿಗೆ ಕರೆ ಮಾಡಿ ಊರ್ವಶಿ ಆ ಸಾಲನ್ನು ಹಾಡಲು ಸಿದ್ಧರಿಲ್ಲ ಎಂದು ಹೇಳಿದರು. ಅದಕ್ಕೆ ಅವರು ʼಊರ್ವಶಿ ಅದನ್ನು ಹಾಡುತ್ತಾರೆ, ವಾಲಿ ಸರ್ ಜೊತೆ ಸಂಪರ್ಕಿಸಿʼ ಎಂದು ಉತ್ತರಿಸಿದ್ದರು. ಹಾಗಾಗಿ ನಾನು ವಾಲಿ ಸರ್ ಜೊತೆ ಮಾತನಾಡಿ ಅಂತಹ ಕೆಟ್ಟ ಪದಗಳನ್ನು ಏಕೆ ಬಳಸಲಾಗುತ್ತಿದೆ ಎಂದು ಕೇಳಿದ್ದೆ. ನಂತರ ಅವರು ಕಥೆಯಲ್ಲಿನ ಪರಿಸ್ಥಿತಿಯನ್ನ ನನಗೆ ವಿವರಿಸಿದರು. ಅದರ ಅರ್ಥ ನಾನು ಊಹಿಸಿದಂತೆ ಇಲ್ಲವೆಂದು ವಿವರಿಸಿದರು. ಆಗ ಅವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನಾನು ಬರೆದ ಸಾಲನ್ನು ಹಾಡಲು ನಿರಾಕಿರಿಸಿದ್ದು ನೀವೇ ಎಂದಿದ್ದರಂತೆ.
ನಂತರ ನಾನು ಅವರನ್ನು ಒಂದು ಸಮಾರಂಭದಲ್ಲಿ ಭೇಟಿಯಾದೆ. ಅವರು ನನ್ನನ್ನು ಅವರ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಬಗ್ಗೆ ಒಂದು ಹಾಡು ಬರೆಯಲು ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ರು. ʼನಿಮ್ಮ ಬಗ್ಗೆ ಒಂದು ಹಾಡು ಬರುತ್ತಿದೆ. ಟೇಕ್ ಇಟ್ ಈಸಿ ಊರ್ವಸಿ, ಇದು ಒಳ್ಳೆಯ ಹಾಡು ಅದನ್ನ ಕೇಳಿ ಎಂದಿದ್ದರು. ಈ ಹಾಡನ್ನು ವೈರಮುತ್ತು ಬರೆದಿದ್ದರು, ಈ ಹಾಡಿನಿಂದಲೇ ಸಿನಿಮಾ ಹಿಟ್ ಕಂಡಿತ್ತು ಎಂದಿದ್ದಾರೆ.

ನಾನು ಆ ಹಾಡನ್ನು ಕೇಳಿದಾಗ ಮತ್ತು ಪ್ರಭುದೇವ ಅವರ ನೃತ್ಯವನ್ನು ನೋಡಿದಾಗ, ಅದು ಆ ಜನರೇಷನ್ ಡ್ಯಾನ್ಸ್ಗಿಂತ ವಿಭಿನ್ನವಾಗಿತ್ತು. ಆಗ ನನ್ನನ್ನು ಅಣಕಿಸಿ ಆ ಹಾಡನ್ನು ಬರೆದಿದ್ದಾರೆಯೇ ಎಂದು ಕೇಳಿದ್ದೆ. ಅದಕ್ಕೆ ಅವರು ಇಲ್ಲ, ಒಳ್ಳೆಯ ರೀತಿಯಲ್ಲೇ ಬರೆದಿದ್ದೇನೆ ಎಂದಿದ್ದರು. ಹಲವು ನಟರು ಈಗಾಗಲೇ ತಮ್ಮ ಹೆಸರಿನಲ್ಲಿ ಹಾಡುಗಳನ್ನು ಸ್ವೀಕರಿಸಿದ್ದಾರೆ. ನಿಮಗೂ ಒಂದು ಬೇಡವೇ? ನೀವು ಮೇಲಿನಿಂದ ಬಂದವರಲ್ಲವೇ? ನೀವು ದೇವರ ಲೋಕದಿಂದ ಬಂದವರಲ್ಲವೇ? ಎಂದು ಕಾಲೆಳೆದಿದ್ದರು ಎಂದು ನಟಿ ಊರ್ವಶಿ ಅವರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications