Ramya VS Darshan: ದರ್ಶನ್ ಫ್ಯಾನ್ಸ್ ವಿರುದ್ಧ ಸಿಡಿದು ನಿಂತ ರಮ್ಯಾ; ಕೆಟ್ಟ ಕಮೆಂಟ್ ಮಾಡಿದೋರಿಗೆ ತಕ್ಕ ಪಾಠ ಫಿಕ್ಸ್!
ಬೆಂಗಳೂರು, ಜುಲೈ 28: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಈ ಕೇಸ್ನ ವಿಚಾರಣೆ. ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಇದರ ಬೆನ್ನಲ್ಲೇ ನಟಿ ರಮ್ಯಾ ಅದನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದರು.
ನಟಿ ರಮ್ಯಾ ಅವರ ಪೋಸ್ಟ್ ನಿಂದಾಗಿ ದರ್ಶನ್ ಅವರ ಫ್ಯಾನ್ಸ್ ನಿಂದ ನಟಿ ರಮ್ಯಾ ಅವರಿಗೆ ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಮೆಸೇಜುಗಳು ಬರುತ್ತವೆ ಎಂದು ನಟಿ ರಮ್ಯಾ ಆರೋಪಿಸಿದ್ದರು. ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ತೀವ್ರವಾಗಿ ಕಿಡಿ ಕಾರಿದ್ದಾರೆ. ಇದೀಗ ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ಇಂದು ಸೈಬರ್ ಕ್ರೈಂ ಗೆ ನಟಿ ರಮ್ಯಾ ದೂರು ನೀಡಲಿದ್ದಾರೆ. ಅಲ್ಲದೇ ನಟಿ ರಮ್ಯಾ ಅವರು ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಖಾಸಗಿ ವಾಹಿನಿಯಲ್ಲಿ ಮಾತನಾಡಿದ ನಟಿ ರಮ್ಯಾ ಅವರು, ನಾನು ಒಂದು ಸಿಂಪಲ್ ಪೋಸ್ಟ್ ಹಾಕಿದ್ದೆ. ಸುಪ್ರೀಂ ಕೋರ್ಟ್ ಒಂದು ಸ್ಟೇಟ್ ಮೆಂಟ್ ಕೊಟ್ಟರು ಜುಲೈ 24ಕ್ಕೆ. ಇದಕ್ಕೆ ಸಂಬಂಧಿಸಿ ಸಾಮಾನ್ಯ ಜನರಿಗೆ ಎಲ್ಲೋ ಒಂದು ಕಡೆ ಹೋಪ್ ಇದೆ. ನ್ಯಾಯ ಸಿಗುತ್ತೆ ಅಂತ ಅಷ್ಟೇ ಪೋಸ್ಟ್ ಹಾಕಿದ್ದೆ. ಅದಾದ ಮೇಲೆ ಈ ಮೆಸೇಜ್ ಎಲ್ಲಾ ಬರೋಕೆ ಶುರುವಾಯ್ತು ಎಂದು ನಟಿ ರಮ್ಯಾ ಅವರು ತಿಳಿಸಿದ್ದಾರೆ.
ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಿಡಿದು ನಿಂತಿರುವ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡಿದವಿಗೆ ಪಾಠ ಕಲಿಸೋಕೆ ರಮ್ಯಾ ಸಜ್ಜಾಗಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ದ ಮಹಿಳಾ ಅಯೋಗಕ್ಕೆ ದೂರು ನೀಡಲಿರುವ ಬಗ್ಗೆ ನಟಿ ರಮ್ಯಾ ಅವರು ಮಾತನಾಡಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ವಕೀಲರ ಜೊತೆ ಮಾತನಾಡಿದ್ದೀನಿ. ಕೆಟ್ಟ ಕಮೆಂಟ್ ಮಾಡಿರುವವರ ಎಲ್ಲಾ ಮಾಹಿತಿ ಕಲೆಕ್ಟ ಮಾಡಿ ದೂರು ನೀಡ್ತೀನಿ. ಈ ರೀತಿಯ ಹುಡುಗರಿಂದಲೇ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗ್ತಿರೋದು. ದರ್ಶನ್ ಅಭಿಮಾನಿಗಳು ಎಲ್ಲಾರಿಗೂ ಕೆಟ್ಟದಾಗಿ ನಿಂದಿಸ್ತಾರೆ ಎಂದು ತಿಳಿಸಿದ್ದಾರೆ.
ಎಲ್ಲದರಲ್ಲೂ ಅವರು ಡಿಬಾಸ್ ಎಂದು ಹಾಕಿಕೊಂಡಿದ್ದರು. ಅವರು ಎಲ್ಲ ರೇಣುಕಸ್ವಾಮಿ ಬಗ್ಗೆ ಹೇಳ್ತೀರಾ? ಈ ಕೇಸ್ ಬಗ್ಗೆ ಅಲ್ಲ ಸೌಜನ್ಯ ಕೇಸ್ ಬಗ್ಗೆ ಮಾತಾಡಿ ಅಂತ ಹೇಳುತ್ತಿದ್ದರು. ನಾನು ಸೌಜನ್ಯ ಕೇಸ್ ಬಗ್ಗೆಯೂ ಮಾತಾಡಿದ್ದೀನಿ. ಅವರು ಡೈವರ್ಸಿಟಿ ಟ್ಯಾಕ್ಟಿಂಗ್ ಮಾಡ್ತಿದ್ದಾರೆ. ಇದರ ಬಗ್ಗೆ ಮಾತಾಡಬಾರದು ಅದರ ಬಗ್ಗೆ ಮಾತಾಡಿ ಅಂತ ಮಾಡ್ತಿದ್ದಾರೆ. ತುಂಬಾ ಕೆಟ್ಟ ಪದಗಳು ಮಾಡಿ, ಆಶ್ಲೀಲ ಪದಗಳೆಲ್ಲ ಯೂಸ್ ಮಾಡಿ ನನಗೆ ಮೆಸೇಜ್ ಕಳಿಸಿದ್ದರು. ನನಗೆ ಅನಿಸ್ತು ರೇಣುಕಸ್ವಾಮಿ ಮೆಸೆಜ್ಗೂ ಮತ್ತೆ ಡಿ ಬಾಸ್ ಫ್ಯಾನ್ಸ್ ಮೆಸೇಜ್ಗೂ ಏನು ವ್ಯತ್ಯಾಸ ಇಲ್ಲ ಅನಿಸ್ತು. ಹಾಗಾಗಿ ಜಸ್ಟ್ ಸ್ಕ್ರೀನ್ಶಾಟ್ ತೆಗೆದು ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಾಕಿದೆ. ನಾವು ಯಾವ ಥರ ಸಮಾಜದಲ್ಲಿ ಇದ್ದೀವಿ, ಯಾವ ತರ ಮೆಸೇಜ್ ಮಾಡ್ತಾರೆ ಅಂತ ನಾನು ಹಾಕಿದೆ ಎಂದು ರಮ್ಯಾ ಹೇಳಿದ್ದಾರೆ.
ತಪ್ಪು ತಪ್ಪು ಅಂತ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಈ ಕೇಸ್ ಬಗ್ಗೆ ಯಾರೇ ಮಾತಾಡಿದ್ರು, ಏನೇ ಹೇಳಿದರೂ ಅವರು ಅಟ್ಯಾಕ್ ಮಾಡುತ್ತಾರೆ, ಹೆದರಿಸುತ್ತಾರೆ. ಅದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. ಇದು ತುಂಬಾ ಕೆಟ್ಟ ಸಂಗತಿ. ಇಂಥಹ ಮೈಂಡ್ ಸೆಟ್, ಇಂಥಹ ಹುಡುಗರಿಂದಲೇ ಹೆಣ್ಮಕ್ಕಳ ಮೇಲೆ ಆರೋಪ ಬರುತ್ತಿರುವುದು. 1 ನಿಮಿಷ ಯೋಚನೆ ಮಾಡಿ ನೀವು ಧರ್ಮಸ್ಥಳ ಅಲಿಗೇಷನ್ಸ್ ಬಗ್ಗೆ ಹೇಳುತ್ತಿದ್ದಾರೆ. ಆ ಹೆಣ್ಣುಮಕ್ಕಳು ಎಷ್ಟು ಜನ ಮಿಸ್ ಆಗಿದ್ದಾರೆ. ಯಾವ ಹುಡುಗುರು ಇಲ್ಲ ಎಂದಿದ್ದಾರೆ. ನ್ಯಾಯ ಕೇಳುವ ಸಂದರ್ಭದಲ್ಲಿ ಇತರ ಟೀಕೆ ಮಾಡುವುದು ಸರಿಯಲ್ಲ. ನಾವು ಸುಮ್ನಿರೋಕೆ ಆಗಲ್ಲ. ಯಾವ ತರ ಸಮಾಜದಲ್ಲಿದ್ದೇವೆ? ನಾವು ಸಮಾಜಕ್ಕೆ ಏನು ಮೆಸೇಜ್ ಕೊಡುತ್ತಿದ್ದೀವೆ? ಎಂದು ಪ್ರಶ್ನಿಸಿದ್ದಾರೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications