ಅಂತವರಲ್ಲಿ ದರ್ಶನ್ ಕೂಡ ಒಬ್ಬರು, ಆ ಪಾಠ ಕಲಿತೆ: 'ಡೆವಿಲ್' ನಟಿ ರಚನಾ ರೈ ಹೇಳಿದ್ದೇನು?
ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಈ ಸಿನಿಮಾದ ಒಂದೇ ಒಂದು ಸಲ ಹಾಡು ಕೂಡ ಟ್ರೆಂಡಿಂಗ್ನಲ್ಲಿದೆ. ಇದರಲ್ಲಿ ರಚನಾ ರೈ ಹಾಗೂ ದರ್ಶನ್ ಅವರ ಕಾಂಬಿನೇಷನ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ದರ್ಶನ್ ಅವರು ಈ ಸಿನಿಮಾ ಶೂಟಿಂಗ್ ಮುಗಿಸಿ, ಇನ್ನೇನು ರಿಲೀಸ್ ಆಗುವ ಹೊತ್ತಲ್ಲೇ ಮತ್ತೆ ಜೈಲು ಸೇರಿದ್ದಾರೆ. ದರ್ಶನ್ ಅವರಿಂದ ನಿಜಕ್ಕೂ ಆ ಒಂದು ಪಾಠ ಕಲಿತೆ ಎಂದು ನಟಿ ರಚನಾ ರೈ ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಚನಾ ರೈ, 'ದರ್ಶನ್ ಸರ್ ನಿಮ್ಮಂತಹ ಸೂಪರ್ಸ್ಟಾರ್ ಜೊತೆ ಕೆಲಸ ಮಾಡುವುದು ನಿಜಕ್ಕೂ ಆಶೀರ್ವಾದ ಎನ್ನಬಹುದು. ಡೆವಿಲ್ ಸೆಟ್ನಲ್ಲಿ ಪ್ರತಿ ದಿನವೂ ನಿಮ್ಮ ಗಮನ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆಯನ್ನು ನೋಡುವುದು ಒಂದು ಪಾಠವಾಗಿದೆ. ಅದು ದೃಶ್ಯವನ್ನು ಜೀವಂತಗೊಳಿಸುವ ಮಾರ್ಗ ಎಂದು ರಚನಾ ರೈ ಹೇಳಿದ್ದಾರೆ. ಕ್ಯಾಮೆರಾವನ್ನು ಮೀರಿ ನಿಮ್ಮ ದಯೆಯೇ ಒಂದು ದೊಡ್ಡ ಗುರುತು ಬಿಡುತ್ತದೆ. ನಾನು ಇದುವರೆಗೆ ಕಂಡ ಅತ್ಯಂತ ದಯಾಳುಗಳಲ್ಲಿ ನಿಜವಾಗಿಯೂ ನೀವು ಕೂಡ ಒಬ್ಬರು. ಅದ್ಭುತ ಸಹನಟ ಮತ್ತು ಇನ್ನೂ ಅದ್ಭುತ ಮನುಷ್ಯರಾಗಿರುವುದಕ್ಕೆ ಧನ್ಯವಾದಗಳು, ನೀವು ಅತ್ಯುತ್ತಮರು' ಎಂದಿದ್ದಾರೆ.

'ಬೀಚ್ ಶೂಟಿಂಗ್ ತಮಾಷೆಯಾಗಿರಲಿಲ್ಲ'
'ಒಂದೇ ಒಂದು ಸಲ ಸಿನಿಮಾದ ಹಾಡಿನ ಶೂಟಿಂಗ್ ದಿನಗಳನ್ನು ಮೆಲುಕು ಹಾಕಿರುವ ರಚನಾ, ಬೀಚ್ ಶೂಟಿಂಗ್ ತಮಾಷೆಯಾಗಿರಲಿಲ್ಲ, ಸುಡುವ ಸೂರ್ಯ, ಬಿಸಿಲಿನ ಬೇಗೆ ಮತ್ತು ಕಠಿಣ ಹವಾಮಾನ, ಬೀಚ್ನಲ್ಲಿ ಆ ಸುದೀರ್ಘ ಚಿತ್ರೀಕರಣಗಳು ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು. ಆದರೆ ಸೂರ್ಯ, ಮರಳು, ಕಾಡು ಹವಾಮಾನವನ್ನು ಉಳಿಸಿಕೊಂಡು ಅದ್ಭುತವಾಗಿ ಕಾಣಬಹುದೆಂದು ಯಾರಿಗೆ ತಿಳಿದಿದೆ. ಈ ಹಾಡು ನಿಜವಾಗಿಯೂ ನನ್ನ ಹೃದಯವನ್ನು ಹಿಡಿದಿಟ್ಟುಕೊಂಡಿದೆ' ಎಂದು ಹೇಳಿದ್ದಾರೆ.
'ಅದ್ಭುತ ತಂಡಕ್ಕೆ, ನಿಮ್ಮ ಕಠಿಣ ಪರಿಶ್ರಮ ಸಮರ್ಪಣೆ ಮತ್ತು ಕ್ಯಾಮೆರಾದ ಹಿಂದಿನ ಉತ್ಸಾಹ ಈ ಹಾಡನ್ನು ಮಾಂತ್ರಿಕಗೊಳಿಸಿದೆ. ನಮ್ಮ ಹಾಡಿಗೆ ಪ್ರೀತಿಯನ್ನು ಕಳುಹಿಸುತ್ತಿರುವ ಎಲ್ಲರಿಗೂ ನೀವು ನಮಗೆ ಕಳುಹಿಸುತ್ತಿರುವ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಹಾಡಿಗೆ ಪ್ರೀತಿಯನ್ನು ಅನುಭವಿಸುತ್ತಿದ್ದೇನೆ. ತುಂಬಾ ಧನ್ಯವಾದಗಳು ನಾನು ನಿಮ್ಮೆಲ್ಲರನ್ನೂ ನನ್ನ ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ' ಎಂದು ರಚನಾ ರೈ ಧನ್ಯವಾದ ಅರ್ಪಿಸಿದ್ದಾರೆ.

'ಪ್ರೀತಿಯ ಅಲೆ ಮುಂದುವರಿಯುತ್ತದೆ. ಈಗ ನಿಮ್ಮ ಸೃಜನಶೀಲತೆಯಿಂದ ಇಂಟರ್ನೆಟ್ ಅನ್ನು ಮುರಿಯುವ ಸರದಿ. ಇದನ್ನು ರೀಲ್ ಮಾಡಿ. ಸೃಜನಶೀಲತೆ 'ರೆಕಾರ್ಡ್' ಬಟನ್ ಅನ್ನು ಭೇಟಿಯಾದಾಗ ಏನಾಗುತ್ತದೆ ಎಂಬುದನ್ನು ನಮಗೆ ತೋರಿಸಿ' ಎಂದು ರಚನಾ ರೈ ಕೇಳಿಕೊಂಡಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications