'ಅಂತಹ ದೊಡ್ಡ ಮನುಷ್ಯ ಅವರು': ದರ್ಶನ್ ಬಗ್ಗೆ ನಟಿ ಮಾಲಾಶ್ರೀ ಹೇಳಿದ್ದೇನು..?
ಬೆಂಗಳೂರು, ಆಗಸ್ಟ್ 30: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಸದ್ಯ ದರ್ಶನ್ನನ್ನು ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ದರ್ಶನ್ ಜೈಲು ಸೇರಿರುವ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಬೇಸರ ವ್ಯಕ್ತಪಡಿಸಿದ್ದು, ಇದೀಗ ಹಿರಿಯ ನಟಿ ಮಾಲಾಶ್ರೀ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಮು ಅವರ ಕಲಾಸಿಪಾಳ್ಯ ಸಿನಿಮಾದಿಂದ ನನಗೆ ದರ್ಶನ್ ಗೊತ್ತು. ಅವರು ಜಂಟಲ್ಮೆನ್, ತುಂಬಾ ವಿನಯ, ವಿನಮ್ರವಾಗಿರುವವರು. ಕಲಾಸಿಪಾಳ್ಯದಲ್ಲಿ ಹೇಗೆ ನೋಡಿದ್ದೇನೋ ಅದೇ ರೀತಿ ಕಾಟೇರ ಸಮಯದಲ್ಲೂ ನಾನು ನೋಡಿದ್ದೇನೆ. ಅವರ ಕಾಳಜಿ, ಅವರು ನೀಡುವ ಗೌರವ ಎಲ್ಲಾ ಹಾಗೇ ಇದೆ' ಎಂದರು.

'ನಾನು ಅವರಿಗೆ ಯಾವಾಗಲೂ ಚಿರರುಣಿಯಾಗಿರುತ್ತೇನೆ. ಯಾಕೆಂದರೆ ನನ್ನ ಮಗಳಿಗೆ ಕಾಟೇರ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ. ಕಾಟೇರ ಸಿನಿಮಾದಲ್ಲಿ ಆರಾಧನ ಬಗ್ಗೆ ಎಷ್ಟು ಕಾಳಜಿ ತೋರಿಸಿದ್ದಾರೆ. ಅವಳಿಗೆ ಹೇಳಿಕೊಡುವುದಾಗಲಿ, ಪ್ರೀತಿಯಾಗಲಿ, ನಾನು ಶೂಟಿಂಗ್ ಜಾಗಕ್ಕೆ ಹೋದಾಗ ಅಮ್ಮ..ಅಮ್ಮ ಅಂತಾ ಜೊತೆಯಲ್ಲಿ ಇರುತ್ತಿದ್ದರು. ಅವರಿಗೆ ನಾನು ಸಿನಿಮಾ ಆರಂಭದಲ್ಲೇ ಧನ್ಯವಾದ ಹೇಳಿದ್ದೆ' ಎಂದು ಹೇಳಿದರು.
'ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್ ಅವರು, ನಿಮ್ಮ ಮಗಳ ಜೊತೆ ನಟಿಸೋದು ನನ್ನ ಅದೃಷ್ಟ ಅಂತ ದೊಡ್ಡ ಮಾತು ಹೇಳಿದ್ದರು. ಅಂತಹ ದೊಡ್ಡ ಮನುಷ್ಯ ಅವರು. ಅವರ ಜೊತೆ ಆರಾಧನಾ ನಟಿಸಿರುವುದು ತುಂಬಾ ಖುಷಿ ಅನಿಸುತ್ತದೆ. ನನಗೆ ಗೊತ್ತಿರುವ ಪ್ರಕಾರ ದರ್ಶನ್ ತುಂಬಾ ಒಳ್ಳೆ ಮನುಷ್ಯ. ಜಂಟಲ್ಮೆನ್. ದರ್ಶನ್ ನನ್ನ ಜೊತೆ ಇರುವಾಗ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರು ಬೇರೆಯವರಿಗೆ ಕೊಡುವ ಗೌರವ ಆಗಲಿ, ಕಾಳಜಿಯಾಗಲಿ ತುಂಬಾ ಇಷ್ಟವಾಗುತ್ತದೆ'. ಎಂದರು.

ದರ್ಶನ್ ಬಿಡುಗಡೆ ಬಗ್ಗೆ ಮಾತನಾಡಿದ ಅವರು, 'ನನಗೆ ಕಾನೂನಿನಲ್ಲಿ ನಂಬಿಕೆ ಇದೆ. ಜೊತೆಗೆ ದೇವರ ಮೇಲೆ ಕೂಡ ನಂಬಿಕೆ ಇದೆ. ನನ್ನ ಪ್ರಕಾರ ದೇವರು ಒಳ್ಳೆಯವರ ಕೈ ಬಿಡಲ್ಲ. ಅದನ್ನು ಮಾತ್ರ ನಾನು ಹೇಳುತ್ತೇನೆ. ನಾನು ಈ ಘಟನೆ ಬಗ್ಗೆ ಮಾತನಾಡುವುದಿಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ದರ್ಶನ್ ಬಗ್ಗೆ ಬೇರೆ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳಿಗೆ ಎಷ್ಟು ಗೌರವ ಇದೆಯೋ, ನನಗೂ ನನ್ನ ಮಗಳಿಗೂ ಅಷ್ಟೇ ದರ್ಶನ್ ಮೇಲೆ ಗೌರವ ಇದೆ' ಎಂದು ನಟಿ ಮಾಲಾಶ್ರೀ ಹೇಳಿದ್ದಾರೆ.
-
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು?












Click it and Unblock the Notifications