Shivaraj Kumar: ಶಿವಣ್ಣ 131ನೇ ಸಿನಿಮಾದ 'ಟೈಟಲ್' ಅನಾವರಣ ಯಾವಾಗ? ಇಲ್ಲಿದೆ ಅಪ್ಡೇಟ್
ಬೆಂಗಳೂರು, ಆಗಸ್ಟ್ 21: ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಎರಡು ವರ್ಷದಿಂದ ಕೇಳಿಬರುತ್ತಿದ್ದ ಶಿವಣ್ಣ ಅವರ 131ನೇ ಸಿನಿಮಾದ ಮಹೂರ್ತ ಕಳೆದ ವಾರ ನಡೆಯಿತು. ಇದರ ಶಿರ್ಷಿಕೆ ಏನೆಂಬುದು ಇನ್ನೂವರೆಗೂ ಗೊತ್ತಾಗಿಲ್ಲ.
ಸದ್ಯ ಶಿವಣ್ಣ ಅವರಿಗೆ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಭರವಸೆಯ ನಟ ನವೀನ್ ಶಂಕರ್ ಅವರು ಸಹ ಖಳನಟನಾಗಿ ಶಿವಣ್ಣ ಮುಂದೆ ಬಣ್ಣ ಹಚ್ಚಲಿದ್ದಾರೆ.

ವಿಶೇಷ ಪೋಸ್ಟರ್ನಿಂದಲೇ ಗಮನಸೆಳೆದ ನಟ ಶಿವರಾಜ್ ಕುಮಾರ್ ಅವರ 131ನೇ ಸಿನಿಮಾದ ಟೈಟಲ್ ಏನಿರಬಹುದೆಂದು? ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಫ್ಯಾನ್ಸ್ ಕುತೂಹಲಕ್ಕೆ ಮುಂದಿನ ತಿಂಗಳ ಗಣೇಶ ಚರ್ತುರ್ಥಿ ವೇಳೆ ತೆರೆ ಬೀಳಲಿದೆ. ಅಂದರೆ ಚೌತಿ ಹಬ್ಬಕ್ಕೆ 'ಶಿವಣ್ಣ 131' ಸಿನಿಮಾ ಶಿರ್ಷಿಕೆ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ.
ನಟ ಶಿವಣ್ಣ ಕೈಯಲ್ಲಿ ಹಲವು ಸಿನಿಮಾಗಳು
ಈ ಚಿತ್ರದ ಮಹೂರ್ತ ವೇಳೆ ಹಲವು ವಿಷಯಗಳ ಬಗ್ಗೆ ಶಿವರಾಜ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬರೀ ಗ್ಯಾಂಗ್ ಸ್ಟರ್ ಪಾತ್ರ ಅಂತೇನಿಲ್ಲ. ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತಿರಿಸಿದ್ದಾರೆ.
ಹೊಸ ಕಲಾವಿದರಿಗೂ, ನಿರ್ದೇಶಕರಿಗೂ ಅವಕಾಶ ಕೊಡಬೇಕು ಎಂದು 131ನೇ ಸಿನಿಮಾದ ನಿರ್ದೇಶಕರ ಸಾಮರ್ಥ್ಯ, ಕಥೆ ಹೇಳುವ ಶೈಲಿ, ತಮಗೆ ಏಕೆ ಕಥೆ ಇಷ್ಟವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸದ್ಯ 'ಬೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಜನರ ಮುಂದೆ ಬರುತ್ತೇವೆ ಎಂದರು.

ನಂತರ ಡಿಸೆಂಬರ್ಗೆ 'ಭೈರವನ ಕೊನೆ ಪಾಠ' ಸಿನಿಮಾ ಡಿಸೆಂಬರ್ಗೆ ಶುರುವಾಗಲಿದೆ. ನಾನು ಸಂಪೂರ್ಣವಾಗಿ ಆ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ನಾಳೆಯಿಂದಲೇ ಈ 131ನೇ ಸಿನಿಮಾ ಚಿತ್ರೀಕರಣ ಆರಂಭವಾಲಿದೆ. ಯಾವ ಸಿನಿಮಾಗಳಿಗೂ ತೊಂದರೆ ಆಗದಂತೆ ಡೇಟ್ ನೀಡಲಾಗುವುದು ಎಂದು ಅವರು ತಮ್ಮ ಮುಂದಿನ ಪ್ರಾಜೆಕ್ಟಗಳ ಕುರಿತು ವಿವರಿಸಿದರು.
ನಟ ನವೀನ್ ಶಂಕರ್ ಸಂತಸ
ಇನ್ನೂ ಮಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ನವೀನ್ ಶಂಕರ್ ಅವರು ಪ್ರತಿಕ್ರಿಯಿಸಿ, ಬಾಲ್ಯದಿಂದಲೂ ನಾನು ಶಿವಣ್ಣ ಅವರ ಸಿನಿಮಾ ನೋಡಿ ಬೆಳೆದವನು. ಚಿತ್ರರಂಗಕ್ಕೆ ಬಂದ ಮೇಲೆ ಅವರೊಂದಿಗೆ ನಟಿಸಬೇಕು ಎಂಬ ಕನಸಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ. ಅವರ ಮುಂದೆ ಖಳನಾಯಕನಾಗಿ ನಿಲ್ಲವುದೇ ಖುಷಿಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹಿಂದಿನ ಸಲಾರ್ ಸಿನಿಮಾದಲ್ಲಿನ ಪಂಡಿತ ಪಾತ್ರಕ್ಕೂ ಶಿವಣ್ಣ ಅವರ ಸಿನಿಮಾದಲ್ಲಿನ ಈ ಖಳನಾಯಕನ ಪಾತ್ರಕ್ಕೆ ಭಿನ್ನತೆ ಇದೆ ಎಂದು ಅವರು ತಮ್ಮ ಪಾತ್ರ ಕುರಿತು ತಿಳಿಸಿದರು.
-
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ












Click it and Unblock the Notifications