Shivaraj Kumar: ಶಿವಣ್ಣ 131ನೇ ಸಿನಿಮಾದ 'ಟೈಟಲ್' ಅನಾವರಣ ಯಾವಾಗ? ಇಲ್ಲಿದೆ ಅಪ್ಡೇಟ್
ಬೆಂಗಳೂರು, ಆಗಸ್ಟ್ 21: ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಎರಡು ವರ್ಷದಿಂದ ಕೇಳಿಬರುತ್ತಿದ್ದ ಶಿವಣ್ಣ ಅವರ 131ನೇ ಸಿನಿಮಾದ ಮಹೂರ್ತ ಕಳೆದ ವಾರ ನಡೆಯಿತು. ಇದರ ಶಿರ್ಷಿಕೆ ಏನೆಂಬುದು ಇನ್ನೂವರೆಗೂ ಗೊತ್ತಾಗಿಲ್ಲ.
ಸದ್ಯ ಶಿವಣ್ಣ ಅವರಿಗೆ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಭರವಸೆಯ ನಟ ನವೀನ್ ಶಂಕರ್ ಅವರು ಸಹ ಖಳನಟನಾಗಿ ಶಿವಣ್ಣ ಮುಂದೆ ಬಣ್ಣ ಹಚ್ಚಲಿದ್ದಾರೆ.

ವಿಶೇಷ ಪೋಸ್ಟರ್ನಿಂದಲೇ ಗಮನಸೆಳೆದ ನಟ ಶಿವರಾಜ್ ಕುಮಾರ್ ಅವರ 131ನೇ ಸಿನಿಮಾದ ಟೈಟಲ್ ಏನಿರಬಹುದೆಂದು? ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಫ್ಯಾನ್ಸ್ ಕುತೂಹಲಕ್ಕೆ ಮುಂದಿನ ತಿಂಗಳ ಗಣೇಶ ಚರ್ತುರ್ಥಿ ವೇಳೆ ತೆರೆ ಬೀಳಲಿದೆ. ಅಂದರೆ ಚೌತಿ ಹಬ್ಬಕ್ಕೆ 'ಶಿವಣ್ಣ 131' ಸಿನಿಮಾ ಶಿರ್ಷಿಕೆ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ.
ನಟ ಶಿವಣ್ಣ ಕೈಯಲ್ಲಿ ಹಲವು ಸಿನಿಮಾಗಳು
ಈ ಚಿತ್ರದ ಮಹೂರ್ತ ವೇಳೆ ಹಲವು ವಿಷಯಗಳ ಬಗ್ಗೆ ಶಿವರಾಜ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬರೀ ಗ್ಯಾಂಗ್ ಸ್ಟರ್ ಪಾತ್ರ ಅಂತೇನಿಲ್ಲ. ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತಿರಿಸಿದ್ದಾರೆ.
ಹೊಸ ಕಲಾವಿದರಿಗೂ, ನಿರ್ದೇಶಕರಿಗೂ ಅವಕಾಶ ಕೊಡಬೇಕು ಎಂದು 131ನೇ ಸಿನಿಮಾದ ನಿರ್ದೇಶಕರ ಸಾಮರ್ಥ್ಯ, ಕಥೆ ಹೇಳುವ ಶೈಲಿ, ತಮಗೆ ಏಕೆ ಕಥೆ ಇಷ್ಟವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸದ್ಯ 'ಬೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಜನರ ಮುಂದೆ ಬರುತ್ತೇವೆ ಎಂದರು.

ನಂತರ ಡಿಸೆಂಬರ್ಗೆ 'ಭೈರವನ ಕೊನೆ ಪಾಠ' ಸಿನಿಮಾ ಡಿಸೆಂಬರ್ಗೆ ಶುರುವಾಗಲಿದೆ. ನಾನು ಸಂಪೂರ್ಣವಾಗಿ ಆ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ನಾಳೆಯಿಂದಲೇ ಈ 131ನೇ ಸಿನಿಮಾ ಚಿತ್ರೀಕರಣ ಆರಂಭವಾಲಿದೆ. ಯಾವ ಸಿನಿಮಾಗಳಿಗೂ ತೊಂದರೆ ಆಗದಂತೆ ಡೇಟ್ ನೀಡಲಾಗುವುದು ಎಂದು ಅವರು ತಮ್ಮ ಮುಂದಿನ ಪ್ರಾಜೆಕ್ಟಗಳ ಕುರಿತು ವಿವರಿಸಿದರು.
ನಟ ನವೀನ್ ಶಂಕರ್ ಸಂತಸ
ಇನ್ನೂ ಮಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ನವೀನ್ ಶಂಕರ್ ಅವರು ಪ್ರತಿಕ್ರಿಯಿಸಿ, ಬಾಲ್ಯದಿಂದಲೂ ನಾನು ಶಿವಣ್ಣ ಅವರ ಸಿನಿಮಾ ನೋಡಿ ಬೆಳೆದವನು. ಚಿತ್ರರಂಗಕ್ಕೆ ಬಂದ ಮೇಲೆ ಅವರೊಂದಿಗೆ ನಟಿಸಬೇಕು ಎಂಬ ಕನಸಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ. ಅವರ ಮುಂದೆ ಖಳನಾಯಕನಾಗಿ ನಿಲ್ಲವುದೇ ಖುಷಿಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹಿಂದಿನ ಸಲಾರ್ ಸಿನಿಮಾದಲ್ಲಿನ ಪಂಡಿತ ಪಾತ್ರಕ್ಕೂ ಶಿವಣ್ಣ ಅವರ ಸಿನಿಮಾದಲ್ಲಿನ ಈ ಖಳನಾಯಕನ ಪಾತ್ರಕ್ಕೆ ಭಿನ್ನತೆ ಇದೆ ಎಂದು ಅವರು ತಮ್ಮ ಪಾತ್ರ ಕುರಿತು ತಿಳಿಸಿದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications