ಡಬಲ್ ಮೀನಿಂಗ್ ಇದ್ರೆ ಮಾತ್ರ TRPನಾ?: ರಿಯಾಲಿಟಿ ಶೋ ಸ್ಪರ್ಧಿ ಹೇಳಿದ್ದೇನು?
ಕಾಮಿಡಿ ಕಿಲಾಡಿಗಳು ಶೋ ಮೂಲಕ ಕನ್ನಡ ಜನತೆಗೆ ಪರಿಚಿತರಾದ ಅಪ್ಪಣ್ಣ, ಇಂದು ಸ್ಯಾಂಡಲ್ವುಡ್ನ ಬೇಡಿಕೆಯ ಹಾಸ್ಯ ನಟರಾಗಿ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಹಾಸ್ಯ ನಟನಾಗುವುದು ಎಷ್ಟು ಚಾಲೆಂಜಿಂಗ್ ಎನ್ನುವರ ಬಗ್ಗೆ ಮಾತನಾಡಿರುವ ಅಪ್ಪಣ್ಣ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಕಾಮಿಡಿಗಳ ಬಳಕೆ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
'ಕಿರಿಯರು ಹಿರಿಯರು ಸೇರದಂತೆ ಸಂಪೂರ್ಣ ಕುಟುಂಬಗಳು ಕೂತು ನೋಡುವ ಕಾಮಿಡಿ ಕಾರ್ಯಕ್ರಮದಲ್ಲಿ ಡಬಲ್ ಮೀನಿಂಗ್ ತಮಾಷೆಗಳ ಬಗ್ಗೆ ನನಗೂ ತುಂಬಾ ನೋವಿದೆ. ಈ ರೀತಿ ಕಾಡಿಮಿಗಳು ಸಮಾಜಕ್ಕೆ ತುಂಬಾ ಹಾನಿಯುಂಟು ಮಾಡುತ್ತದೆ. ಆದರೆ ನಮ್ಮನ್ನಾಳುವ ಮೇಲಿರುವ ಮಾಲೀಕರು, ಅವರ ಮೇಲಿರುವ ಮಾಲೀಕರು ನಂಬರ್ ಬೇಕು ಅಂತಾರೆ' ಎನ್ನುವುದರ ಮೂಲಕ ಡಬಲ್ ಮೀನಿಂಗ್ ತಮಾಷೆಗಳು ಟಿಆರ್ಪಿಗೊಸ್ಕರ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

'ಇದು ತಪ್ಪು ಅಂದಾಗ ಯಾರು ಇದನ್ನು ತಪ್ಪು ಎಂದು ಕಮೆಂಟ್ ಮಾಡುತ್ತಾನೋ ಅವನೇ ಟಿವಿ ಮುಂದೆ ಕುಳಿತು ನೋಡುತ್ತಾನೆ. ಅವನು ಕಮೆಂಟ್ ಮಾಡಲು ರೆಡಿಇದ್ದಾನೆ. ಡಬಲ್ ಮೀನಿಂಗ್, ಅಸಹ್ಯ ಮಾತನಾಡುತ್ತೀರಿ, ಫ್ಯಾಮಿಲಿ ನೋಡುವ ಶೋ ಎಂದು ಕಮೆಂಟ್ ಮಾಡುತ್ತಾನಲ್ಲ ಅವನೇ ಮೊದಲು ನೋಡುತ್ತಿರುತ್ತಾನೆ. ಹೀಗಾಗಿ ಹೇಳುವವನು ನೋಡುತ್ತಿದ್ದಾನೆ. ಹೇಳದೇ ಇರುವವನು ನೋಡುತ್ತಿದ್ದಾನೆ. ಅವನಿಗೆ ಅದೇ ಬೇಕಾಗಿದೆ' ಎಂದರು.
'ನಾವು ಶುದ್ಧವಾದ ಕಾಮಿಡಿ ಮಾಡುತ್ತೇವೆ. ರಾಜ ಹಾಸ್ಯ ಮಾಡುತ್ತೇವೆ ಅಂತಾ ಮಾಡಿದರೆ ನೋಡುಗರು ಎಷ್ಟಂತಾ ಅದೇ ಹಾಸ್ಯ ಮಾಡುತ್ತೀರಿ. ಹೊಸದಾಗಿ ಏನಾದರೂ ಮಾಡಿ ಅಂತಾರೆ. ಹೊಸದಾಗಿ ಮಾಡಲು ಹೋದರೆ ಅದಕ್ಕೆ ಡಬಲ್ ಮೀನಿಂಗ್ ಎಂದು ಹೆಸರು ಇಡುತ್ತಾರೆ' ಎಂದು ಹೇಳಿದರು.

'ಡಬಲ್ ಮೀನಿಂಗ್ ಇಲ್ಲ ಅಂತಾ ನಾನು ಹೇಳುವುದಿಲ್ಲ. ಖಂಡಿತಾ ಇದೆ. ನಮ್ಮವರೆಲ್ಲಾ ತುಂಬಾ ಕೆಟ್ಟದಾಗೇ ಮಾಡುತ್ತಿದ್ದಾರೆ. ನಾನು ಮಾಡಿದ್ದೇನೆ. ಅದನ್ನೂ ನಾನು ಒಪ್ಪಿಕೊಳ್ಳುತ್ತೇನೆ. ನಂದೂ ತಪ್ಪದು. ನನ್ನ ಬಾಯಿಂದ ಸಹ ಹೇಳಿದ್ದೇನೆ. ಹೀಗಾಗಿ ಅದು ಕಡಿಮೆಯಾಗಬೇಕು. ನಗಿಸಲು ಬೇರೆ ಬೇರೆ ದಾರಿಗಳಿದಾವೆ. ಶುದ್ಧವಾದ ತಮಾಷೆ ಮಾಡಲು ನಾವು ಪ್ರಯತ್ನ ಪಡಬೇಕು. ಇವರು ಕಂಟೆಂಟ್, ಕಾಮಿಡಿ, ನಂಬರ್ ಬರಬೇಕು ಅಂತಾಹೇಳಿ, ಇನ್ನೂ ಕೆಳಕ್ಕೆ ಹೋದರೆ ನೋಡಲು ಅಸಹ್ಯ ಎನಿಸುತ್ತದೆ' ಎಂದು ಅಪ್ಪಣ್ಣ ರಾಮದುರ್ಗ ಈ ದಿನ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿದ್ದಾರೆ.
-
DKD Winner: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ: ಸಿದ್ದೇಗೌಡ-ದೀಶಲ್ ಜೋಡಿಗೆ ಒಲಿದ 'ಡಿಕೆಡಿ' ಕಿರೀಟ -
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ











Click it and Unblock the Notifications