ಏರುತ್ತಿದೆ, ಇಳಿಯುತ್ತಿದೆ ಬಿಜೆಪಿಯ ಅಭ್ಯರ್ಥಿ ಶ್ರೀರಾಮುಲು ಆಸ್ತಿ
Recommended Video

ಬೆಂಗಳೂರು, ಏಪ್ರಿಲ್ 24: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಸದ ಬಿ. ಶ್ರೀರಾಮುಲು ಆಸ್ತಿ ವಿವರ ಸಲ್ಲಿಸಿದ್ದು, ಐದು ವರ್ಷದಲ್ಲಿ ಅವರ ಕುಟುಂಬದ ಆಸ್ತಿ ಶೇ 41.4ರಷ್ಟು ಕರಗಿದೆ. ಆದರೆ, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ಆಸ್ತಿಗಿಂತ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ.
2008ರ ಚುನಾವಣೆಯಿಂದಲೂ ಶ್ರೀರಾಮುಲು ಅವರ ಆಸ್ತಿ ಮೌಲ್ಯದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. 2008ರಲ್ಲಿ ತಮ್ಮ ಬಳಿ ಇರುವ ಆಸ್ತಿ ಮೊತ್ತ 19.22 ಕೋಟಿ ರೂಪಾಯಿ ಎಂದು ಶ್ರೀರಾಮುಲು ಘೋಷಿಸಿದ್ದರು. 2011ರ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವೇಳೆ ಅವರ ಆಸ್ತಿ ಮೌಲ್ಯ 47.74 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 45 ಕೋಟಿ ಇದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಅದು ಏಕಾಏಕಿ 15.13 ಕೋಟಿ ರೂಪಾಯಿಗೆ ಕುಸಿದಿತ್ತು. ಈಗ ಅವರ ಆಸ್ತಿ ಮತ್ತೆ ಏರಿಕೆಯಾಗಿದೆ.

ಕುಟುಂಬದ ಆಸ್ತಿ 25.6 ಕೋಟಿ
ತಮ್ಮ ಕುಟುಂಬದ ಬಳಿ 25.6 ಕೋಟಿ ಆಸ್ತಿ ಇದೆ ಎಂದು ಶ್ರೀರಾಮುಲು ಅಫಿಡವಿಟ್ನಲ್ಲಿ ಹೇಳಿದ್ದಾರೆ. ಬಳ್ಳಾರಿ ನಗರದಲ್ಲಿ ಮತದಾನದ ಹಕ್ಕು ಹೊಂದಿರುವ ಅವರು, ಟ್ವಿಟರ್ ಅಕೌಂಟ್ ಹೊಂದಿರುವುದಾಗಿ ತಿಳಿಸಿದ್ದಾರೆ.
* ಶ್ರೀರಾಮುಲು ಬಳಿ ಇರುವ ಚರಾಸ್ತಿ ಮೌಲ್ಯ -4.51 ಕೋಟಿ
* ಪತ್ನಿ ಭಾಗ್ಯಲಕ್ಷ್ಮಿ ಅವರ ಬಳಿ ಇರುವ ಚರಾಸ್ತಿ- 22.40 ಲಕ್ಷ
* ಮಕ್ಕಳಾದ ರಕ್ಷಿತಾ ಮತ್ತು ದೀಕ್ಷಿತಾ ಹೆಸರಿನಲ್ಲಿರುವ ಚರಾಸ್ತಿ- 30.51 ಲಕ್ಷ
* ಶ್ರೀರಾಮುಲು ಬಳಿ ಇರುವ ಸ್ಥಿರಾಸ್ತಿ ಮೌಲ್ಯ- 12.40 ಕೋಟಿ
* ಪತ್ನಿ ಭಾಗ್ಯಲಕ್ಷ್ಮಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ- 1.04 ಕೋಟಿ

6.23 ಲಕ್ಷ ಸಾಲ
ತಾವು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 6.23 ಲಕ್ಷ ಸಾಲ ಹೊಂದಿರುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಶ್ರೀರಾಮುಲು ತಮ್ಮ ಮೇಲೆ 40 ಲಕ್ಷ ರೂಪಾಯಿ ಸಾಲವಿದೆ ಎಂದು
ಹೇಳಿದ್ದರು. 2013ರ ವಿಧಾನಸಭೆ ಚುನಾವಣೆ ವೇಳೆ 15 ಕೋಟಿ ಸಾಲದ ಹೊರೆ ಇದೆ ಎಂದು ಮಾಹಿತಿ ನೀಡಿದ್ದರು. ಆ ಸಾಲದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
* ಶ್ರೀರಾಮುಲು ಕೈಯಲ್ಲಿರುವ ನಗದು ಹಣ- 2.20 ಲಕ್ಷ
* ಭಾಗ್ಯಲಕ್ಷ್ಮಿ ಬಳಿ ಇರುವ ನಗದು- 75 ಸಾವಿರ

4 ಕೆಜಿ ಚಿನ್ನಾಭರಣ
ತಮ್ಮ ಬಳಿ ಒಟ್ಟು 4,257 ಗ್ರಾಂನಷ್ಟು ಚಿನ್ನವಿದ್ದು, 9,500 ಗ್ರಾಂ ಬೆಳ್ಳಿ ವಸ್ತುಗಳಿವೆ. ಇವುಗಳ ಮೌಲ್ಯ 38.98 ಲಕ್ಷ. ಹಾಗೆಯೇ ತಮ್ಮ ಪತ್ನಿ ಬಳಿ 2,330 ಗ್ರಾಂ ಚಿನ್ನಾಭರಣವಿದ್ದು, 6.79 ಮೌಲ್ಯ ಹೊಂದಿವೆ ಎಂದು ಶ್ರೀರಾಮುಲು ಘೋಷಿಸಿದ್ದಾರೆ.
1.20 ಕೋಟಿ ಮತ್ತು 1 ಕೋಟಿ ಬೆಲೆಯ ಎರಡು ಕಾರುಗಳಿವೆ. ಪತ್ನಿ ಬಳಿ 14 ಲಕ್ಷ ಬೆಲೆಯ ಕಾರು ಇದೆ ಎಂದು ಹೇಳಿದ್ದಾರೆ.

ಭೂಮಿ, ಕಟ್ಟಡ ವಿವರ
ಬಳ್ಳಾರಿಯಲ್ಲಿ 3 ಎಕರೆ ಕೃಷಿಭೂಮಿ ಹೊಂದಿದ್ದು, ಅದರ ಅಂದಾಜು ಮಾರುಕಟ್ಟೆ ಮೌಲ್ಯ 3 ಲಕ್ಷ ರೂಪಾಯಿ. ಬಳ್ಳಾರಿ, ಗದಗದಲ್ಲಿ ಐದು ಕಡೆ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 20 ಎಕರೆ ಜಮೀನು ಇದೆ. ಬಳ್ಳಾರಿಯಲ್ಲಿ ವಾಣಿಜ್ಯ ಕಟ್ಟಡವಿದೆ. ಬಳ್ಳಾರಿ ಮತ್ತು ಗದಗದಲ್ಲಿ ಮೂರು ಕಡೆ ನಿವಾಸಗಳಿವೆ. ಇವುಗಳ ಮೇಲೆ ಸುಮಾರು 4 ಕೋಟಿ ಹೂಡಿಕೆ ಮಾಡಿದ್ದಾರೆ.

ವೈಯಕ್ತಿಕ ಮಾಹಿತಿ
47 ವರ್ಷದ ಶ್ರೀರಾಮುಲು ಅವರು ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತಮಗೆ ಸಂಸದ ಸ್ಥಾನದಿಂದ, ಡೆನ್ ನೆಟ್ವರ್ಕ್ ಡಿಸ್ಟ್ರಿಬ್ಯೂಷನ್ನಿಂದ ಮತ್ತು ಕೃಷಿಯಿಂದ ಆದಾಯ ದೊರಕುತ್ತಿದೆ.
ತಮ್ಮ ಅವಲಂಬಿತರಾದ ಭಾಗ್ಯಲಕ್ಷ್ಮಿ ಹೆಸರಿನಲ್ಲಿ 40,587 ರೂಪಾಯಿ, ದೀಕ್ಷಿತಾ ಹೆಸರಿನಲ್ಲಿ 3.19 ಲಕ್ಷ ರೂಪಾಯಿ, ರಕ್ಷಿತಾ ಹೆಸರಿನಲ್ಲಿ 5.48 ಲಕ್ಷ ಉಳಿತಾಯ ಖಾತೆ ಹಣವಿದೆ ಎಂದು ತಿಳಿಸಿದ್ದಾರೆ.

ಗಂಭೀರ ಆರೋಪದ ಪ್ರಕರಣ ಒಂದು
ಶ್ರೀರಾಮುಲು ವಿರುದ್ಧ ನ್ಯಾಯಾಲಯದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆ ವಿಧಿಸುವಂತಹ ಪ್ರಕರಣಗಳಲ್ಲಿ ಒಂದು ಪ್ರಕರಣ ಬಾಕಿ ಉಳಿದಿದೆ. ಗಂಭೀರವಲ್ಲದ ಮೂರು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ.
ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದಂತೆ 35.85 ಲಕ್ಷ ಮೊತ್ತದ ವಿವಾದ ಬೆಂಗಳೂರಿನ ಸಿಐಟಿ ಮುಂದಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications