ಚುನಾವಣಾ ಆಯೋಗಕ್ಕೆ ಸಿದ್ದು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆಯೆ?
ಇತ್ತೀಚಿಗಷ್ಟೇ ಮೈಸೂರಿನ ಚಾಮುಂಡೇಶ್ವರಿ ಹಾಗು ಬಾಗಲಕೋಟೆಯ ಬದಾಮಿ - ಎರಡೂ ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆಯೆ? ಹೀಗೆ ಸಂಶಯ ಬರಲು ಹಲವಾರು ಕಾರಣಗಳಿವೆ.
ತಮ್ಮ ಪ್ರಮಾಣಪತ್ರದ 3ನೇ ವಿಷಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಿದ್ದು, ತಮ್ಮ ಬಳಿ ಇಮೇಲ್ ಐಡಿ, ಫೇಸ್ಬುಕ್ ಖಾತೆ, ವಾಟ್ಸ್ ಆಪ್ ಸಂಖ್ಯೆ, ಟ್ವಿಟ್ಟರ್ ಖಾತೆ ಹಾಗು ಯಾವುದೇ ಸಾಮಾಜಿಕ ಜಾಲತಾಣದ ಖಾತೆ ಇಲ್ಲ ಎಂದು ನಮೂದಿಸಿದ್ದಾರೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರಾಸರಿ ದಿನಂಪ್ರತಿಯೂ ತಮ್ಮ ಟ್ವಿಟ್ಟರ್ ಖಾತೆ @siddaramaiah ಖಾತೆ ಇಂದ ಟ್ವೀಟ್ ಮಾಡುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರ. ಈ ತಾಣದಲ್ಲಿ ಸಾಕಷ್ಟು ವಾಗ್ವಾದಗಳೂ ನಡೆಯುತ್ತಿರುತ್ತವೆ.

ಮುರಳೀಧರ ರಾವ್ ಅವರ ಟ್ವೀಟಿಗೆ ತಿರುಗೇಟು
ಇತ್ತೀಚಿಗಷ್ಟೇ ಬಿಜೆಪಿಯ ಮುರಳೀಧರ ರಾವ್ ಅವರು ಸಿದ್ದರಾಮಯ್ಯರಿಗೆ ಟ್ವೀಟ್ ಮಾಡಿ ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಛೇಡಿಸಿದ್ದರು. ಇದೆ ಟ್ವೀಟ್ ಗೆ ರೀ ಟ್ವೀಟ್ ಮಾಡಿ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಏನ್ ಸಿದ್ದರಾಮಯ್ಯನವರೇ, ಹೆದರಿಬಿಟ್ರಾ, ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಆರಿಸಿಕೊಂಡ್ರಿ ಎಂದು ಕನ್ನಡದಲ್ಲಿಯೇ ಮುರಳೀಧರ್ ರಾವ್ ಅವರು ಟ್ವೀಟ್ ಮಾಡಿದ್ದಕ್ಕೆ ಸಿದ್ದರಾಮಯ್ಯನವರು ಇಂಗ್ಲಿಷಿನಲ್ಲಿ ಉತ್ತರ ಕೊಟ್ಟಿದ್ದರು.

ಪ್ರಮಾಣಪತ್ರದಲ್ಲಿ ತಿಳಿಸಿರುವುದು ಸುಳ್ಳು
ಈ ವಾದವಿವಾದಗಳು ಏನೇ ಇರಲಿ, ಅವರ ಬಳಿ ವೈಯಕ್ತಿಕ ಟ್ವಿಟ್ಟರ್ ಖಾತೆ ಇಲ್ಲ ಎನ್ನುವುದಾದರೆ, ಇಂತಹ ಟ್ವೀಟ್ ಗಳಿಗೆ ಉತ್ತರಿಸುತ್ತಿರುವವರು ಯಾರು? ತಮ್ಮ ಹೆಸರಲ್ಲಿ ಇಂಥ ವಾದ ವಿವಾದ ಮಾಡುವುದು ಬೇಡ ಎಂದು ಸಿದ್ದರಾಮಯ್ಯನವರೇ ಹೇಳಬಹುದಲ್ಲ? ಈ ವಿಚಾರದಲ್ಲಿ ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿರುವುದು ಸುಳ್ಳೆಂದು ಜನಸಾಮಾನ್ಯನೂ ಹೇಳಬಹುದು. ನನ್ನ ಬಳಿ ಟ್ವಿಟ್ಟರ್, ಫೇಸ್ ಬುಕ್ ಖಾತೆಗಳಿವೆ ಅಂದಿದ್ರೆ ಪ್ರಮಾದವೂ ಆಗುತ್ತಿರಲಿಲ್ಲ. ಅಂದ ಹಾಗೆ, ಮುಖ್ಯಮಂತ್ರಿಗಳಿಗೆ ಸರ್ಕಾರದ ವತಿಯಿಂದ ಅಧಿಕೃತ ಸಾಮಾಜಿಕ ಜಾಲತಾಣಗಳಿರುವುದರ ಬಗ್ಗೆ ಈ ಪ್ರಶ್ನೆಯಲ್ಲ. ಅವರ ವೈಯಕ್ತಿಕ ಖಾತೆಯ ಬಗೆಗೆ.

ಸಿದ್ದು ಹೆಸರಲ್ಲಿರುವುದು ನಕಲಿ ಖಾತೆಯೆ?
@siddaramaiah ಖಾತೆ ಸಿದ್ದರಾಮಯ್ಯರ ವೈಯಕ್ತಿಕ ಖಾತೆ ಅಲ್ಲ ಎಂದಾದರೆ, ಮತ್ಯಾರೋ ಸಿದ್ದರಾಮಯ್ಯನವರ ಹೆಸರಿನಲ್ಲಿ ನಕಲಿ ಖಾತೆ ಹೊಂದಿದ್ದು ಟ್ವೀಟ್ ಮಾಡುತ್ತಿದ್ದಾರೆ ಎಂದಾಗುತ್ತದೆ. ಅದು ಹೇಗೆ ಸಾಧ್ಯ? ಅನೇಕ ಬಾರಿ ಸರ್ಕಾರದ ಮಾಹಿತಿಯನ್ನು ಟ್ವೀಟ್ ಮಾಡಲು ಯಾರಿಂದಲೋ ಹೇಗೆ ಸಾಧ್ಯ? ಹಾಗೇ ಮಾಡುತ್ತಿದ್ದಾರೆ ಎಂದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಖಾತೆ ತೆರೆದು ಟ್ವೀಟ್ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಕ್ರಮವೇಕೆ ಜರುಗಿಸಲಾಗುತ್ತಿಲ್ಲಅಥವಾ ಅಂತಹ ಖಾತೆಯನ್ನು ಏಕೆ ನಿರ್ಬಂಧಿಸಲಾಗುತ್ತಿಲ್ಲ?

ಸಿದ್ದರಾಮಯ್ಯರ ಮೇಲೆ ಏನಾದರು ಕ್ರಮ?
ಹಾಗೆಯೆ ಸಿದ್ದರಾಮಯ್ಯರ ವೈಯಕ್ತಿಕ ಈ ಮೇಲ್ ಐಡಿ ಹಾಗು ಫೇಸ್ ಬುಕ್ ಖಾತೆ ಹೊಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಮೇಲೆ ಚುನಾವಣಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಏನಾದರು ಕ್ರಮ ಕೈಗೊಳ್ಳಬಹುದಾ?
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications