ಕೆಜಿಎಫ್ ವಿಧಾನಸಭಾ ಕ್ಷೇತ್ರ: ಸರ್ವ ಜನಾಂಗದ ಶ್ರಮಿಕರ ತೋಟ
ಕೋಲಾರ ಜಿಲ್ಲೆಯಲ್ಲೇ ಬಿಜೆಪಿಯ ಅಸ್ತಿತ್ವ ತುಂಬ ಸ್ಪಷ್ಟವಾಗಿ ಕಾಣುವ ಕ್ಷೇತ್ರ ಕೆಜಿಎಫ್. ಇಲ್ಲಿಂದ ಆರಿಸಿಬಂದ ಬಿಜೆಪಿ ಶಾಸಕಿ ವೈ.ರಾಮಕ್ಕ ಅವರು ಸಂಪಂಗಿ ತಾಯಿ. ಬಿಜಿಎಂಎಲ್ ಎಂಬ ಕಂಪೆನಿ ಸಾವಿರಾರು ಮಂದಿಗೆ ಅನ್ನ ಹಾಕಿದ ತಾಯಿ. ಇನ್ನು ಇಲ್ಲಿ ಖಾಸಗೀಕರಣದ ಅಂಚಿನಲ್ಲಿರುವ ಬೆಮೆಲ್ ಕೂಡ ಇದೆ.
ಕನ್ನಡ, ತಮಿಳು, ತೆಲುಗು ಪ್ರಭಾವ ದಟ್ಟವಾಗಿದೆ. ಬ್ರಿಟಿಷರ ಪದ್ಧತಿಗಳು ಇಂದಿಗೂ ಇಲ್ಲಿನ ಜನರ ಮೇಲಿದೆ. ಜತೆಗೆ ಬಡತನವೂ ಹಾಗೆ. ಕಾಂಗ್ರೆಸ್ ಸರಕಾರದ ಅನ್ನ ಭಾಗ್ಯ ಯೋಜನೆಗೆ ಅತಿ ಹೆಚ್ಚು ಮೈಲೇಜ್ ದೊರೆಯುವಂತಿದ್ದರೆ ಇಲ್ಲೇ. ಇನ್ನೊಂದು ಅಂಶ ನೆನಪಿಡಿ, ಕೆಜಿಎಫ್ ತಾಲೂಕು ಕೇಂದ್ರವಲ್ಲ. ಬಂಗಾರಪೇಟೆ ತಾಲೂಕಿನಲ್ಲಿ ಬರುವ ಒಂದು ಕ್ಷೇತ್ರ.
ಆದರೆ ಅಲ್ಲಿಗಿಂತ ಇದು ಹೆಸರುವಾಸಿ. ಜತೆಗೆ ಕೋಟಿಲಿಂಗ ಬಹಳ ಹೆಸರು ಪಡೆದ ಕ್ಷೇತ್ರ. ಸಂಸದ ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಕಲಾ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನಿಂದ ಭಕ್ತವತ್ಸಲಂ. ಇನ್ನು ಬಿಜೆಪಿಯಿಂದ ಸಂಪಂಗಿ ಮಗಳು ಅಶ್ವಿನಿ ಕಣದಲ್ಲಿದ್ದಾರೆ.

ಕಳೆದ ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ಸಂಪಂಗಿ ಅವರ ಮಗಳು ಅಶ್ವಿನಿ ಅವರು ರೂಪಕಲಾ ಅವರನ್ನು ಸೋಲಿಸಿದ್ದರು. ಇದಕ್ಕೆ ಕಾರಣ ಆಗಿದ್ದು ಜೆಡಿಎಸ್ ನ ಭಕ್ತವತ್ಸಲಂ ಬೆಂಬಲ. ತಮ್ಮ ಅಭ್ಯರ್ಥಿಯನ್ನು ಕಣದಲ್ಲಿ ಇಳಿಸದೆ ಅಶ್ವಿನಿಯನ್ನು ಬೆಂಬಲಿಸಿದ್ದರು. ಆಗ ನೂರೈವತ್ತು ಚಿಲ್ಲರೆ ಮತಗಳಿಂದ ಅಶ್ವಿನಿ ಜಯ ಸಾಧಿಸಿದ್ದರು.
ಆದರೆ, ಬದಲಾದ ಕಾಲ ಘಟ್ಟದಲ್ಲಿ ಬಿಜೆಪಿಯ ಸಂಪಂಗಿ ಕುಟುಂಬಕ್ಕೆ ಸ್ಥಳೀಯವಾಗಿ ಕೇಸರಿ ಪಕ್ಷದ ನಾಯಕರ ವಿರೋಧವಿದೆ. ಹೇಗಾದರೂ ಸರಿ ಈ ಸಲ ಸಂಪಂಗಿ ಕುಟುಂಬವನ್ನು ಬೆಂಬಲಿಸಬಾರದು ಎಂಬ ಸಿಟ್ಟು ಎದ್ದು ಕಾಣುತ್ತಿದೆ. ಈ ಅಂಶವು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಇರುವ ಸಂಪಂಗಿ ಅವರ ಮಗಳಿಗೆ ಹಿನ್ನಡೆ ಆಗಬಹುದು.
ಇನ್ನು ಜಾತಿ ಲೆಕ್ಕಾಚಾರದಿಂದ ನೋಡಿದರೆ ಪರಿಶಿಷ್ಟ ಜಾತಿ ಹಾಗೂ ಕುರುಬ ಸಮುದಾಯದ ಮತಗಳು ನಿರ್ಣಾಯಕವಾದವು. ಆದರೆ ಈ ಸಲ ಸಂಸದ ಕೆ.ಎಚ್.ಮುನಿಯಪ್ಪ ಅವರ ಮಗಳು ಕಾಂಗ್ರೆಸ್ ನ ರೂಪಕಲಾ ಅವರಿಗೆ ಪ್ಲಸ್ ಆಗಬಹುದಾದಂಥ ಬಹಳ ಅಂಶಗಳಿವೆ ಎಂದು ಸ್ಥಳೀಯ ಮುಖಂಡರು ಅಭಿಪ್ಪ್ರಾಯ ಪಡುತ್ತಾರೆ.
ಕೆರೆ ಒತ್ತುವರಿ, ಸಮುದಾಯ ಶೌಚಾಲಯ ಸೇರಿದಂತೆ ಈ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳಿವೆ. ಇಲ್ಲಿಯ ಕಾರ್ಮಿಕ ವರ್ಗಕ್ಕೆ ದುಡಿಯುವ ಮಾರ್ಗ ಬೇಕಿದೆ. ಜತೆಗೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಲಿಷ್ಠ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications