ಚಿಕ್ಕನಾಯಕನಹಳ್ಳಿ ಕ್ಷೇತ್ರ: ಕೊಬ್ಬರಿ- ಹೈನುಗಾರಿಕೆ ಜೀವಾಳ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯವಸಾಯ ಪ್ರಾಶಸ್ತ್ಯವಿರುವ, ಕೊಬ್ಬರಿಯಿಂದ ಆದಾಯ ನಿರೀಕ್ಷೆ ಮಾಡುವ, ಸಾಂಸ್ಕೃತಿಕವಾಗಿ ಚಟುವಟಿಕೆಯಿಂದ ಇರುವ ತಾಲೂಕು ಅಥವಾ ಕ್ಷೇತ್ರ. ಹೈನುಗಾರಿಕೆ- ಕುರಿ ಸಾಕಣೆಗೂ ಇಲ್ಲಿ ಪ್ರಾಶಸ್ತ್ಯವಿದೆ. ಜೆಡಿಎಸ್ ನ ಸಿ.ಬಿ.ಸುರೇಶ್ ಬಾಬು ಶಾಸಕರು. ಬಿಜೆಪಿಯಿಂದ ಇಲ್ಲಿ ಪೈಪೋಟಿ ನೀಡುವ ಎಲ್ಲ ಸಾಧ್ಯತೆ ಇದೆ.
ಆದರೆ, ಬಿಜೆಪಿ ಒಳಗೆ ಪರಿಹರಿಸಿಕೊಳ್ಳಬೇಕಾದ ಒಂದಿಷ್ಟು ಮನಸ್ತಾಪ- ಅಸಮಾಧಾನ ಇದೆ. ಇದು ಉಳಿದ ಕ್ಷೇತ್ರಗಳಲ್ಲೂ ಇರುವ ಕೆಜೆಪಿ- ಬಿಜೆಪಿಯ ಸಂಘರ್ಷ. ಜತೆಗೆ ಇಡೀ ತುಮಕೂರಿನ ಯಾವ ಕ್ಷೇತ್ರದಲ್ಲಿ ಗಮನಿಸಿದರೂ ಜೆಡಿಎಸ್- ಕಾಂಗ್ರೆಸ್ ನ ಹಣಾಹಣಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
ಜೆ.ಸಿ.ಮಾಧುಸ್ವಾಮಿ ಅವರ ಕಾರಣಕ್ಕೆ ಬಿಜೆಪಿಯ ಪಾಲಿಗೆ ಇಲ್ಲೊಂದು ಹೋರಾಟದ ಭರವಸೆ ಇದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯದಂಥ ಸಮಸ್ಯೆ ಈ ಕ್ಷೇತ್ರದ ಜನರ ಪಾಲಿಗೆ ಅಗತ್ಯದಂತೆ ಕಂಡುಬಂದರೆ, ಪಶುವೈದ್ಯಕೀಯ ವ್ಯವಸ್ಥೆ ತುರ್ತಾಗಿ ಮಾಡಿಕೊಡಬೇಕಾದ ಅನುಕೂಲ.

ಸಚಿವರಾದ ಟಿ.ಬಿ.ಜಯಚಂದ್ರ ಮಗ ಸಂತೋಷ್ ಜಯಚಂದ್ರ ಇಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿದ್ದಾರೆ. ಈ ಕ್ಷೇತ್ರದ ಮೇಲೆ ಜಯಚಂದ್ರ ಅವರ ಹಿಡಿತ ಸ್ವಲ್ಪ ಮಟ್ಟಿಗೆ ಇರುವುದರಿಂದ ತಮ್ಮ ಮಗನನ್ನು ಇಲ್ಲಿಂದ ಕಣಕ್ಕೆ ಇಳಿಸಿದ್ದಾರೆ. ಆದರೂ ಇಲ್ಲಿ ಮಾಧುಸ್ವಾಮಿ ಹಾಗೂ ಸುರೇಶ್ ಬಾಬು ಮಧ್ಯೆ ಹಣಾಹಣಿ ಎಂದು ಜನ ಮಾತನಾಡುತ್ತಾರೆ.
ಸಾಹಿತ್ಯಕ್ಕೂ ಹೆಸರಾದ ಈ ತಾಲೂಕಿನಲ್ಲಿ ರಸ್ತೆ, ನೀರು ಮುಂತಾದ ಮೂಲ ಸೌಕರ್ಯಕ್ಕೆ ಸಮಸ್ಯೆಗಳಿವೆ. ಇನ್ನು ಜಾತಿ ಸಂಘರ್ಷಗಳು ಸಹ ಆಗಾಗ ಕಾಣಿಸಿಕೊಂಡಿದ್ದಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜನರ ಒಅಲವು ಯಾರ ಕಡೆಗೋ ಎಂಬ ಕುತೂಹಲ ಅಂತೂ ಇದ್ದೇ ಇದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications