ಉಡುಪಿ ಜಿಲ್ಲೆ ಅಭ್ಯರ್ಥಿಗಳು:ಯಾರಿಗೆ ಮಾರಾಯ್ರೇ ಗೆಲುವು
ಅಷ್ಟಮಂಗಲ, ನೀಲಿ ಸಿಡಿ ಹಗರಣ, ಮಡೆಸ್ನಾನ, ಸಹಪಂಕ್ತಿ ಭೋಜನ, ಕೃಷ್ಣ ಮಠ ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆನ್ನುವ ಪರ, ವಿರೋಧ ಚರ್ಚೆ.. ಹೀಗೆ ಹತ್ತು ಹಲಾವಾರು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಜಿಲ್ಲೆ ಉಡುಪಿ.
ಪೊಡವಿಗೊಡೆಯ ಕೃಷ್ಣನ ನಾಡಿನಲ್ಲೀಗ ಬಿಸಿಲಿನ ತಾಪಕ್ಕಿಂತ ಹೆಚ್ಚಾಗಿರುವುದು ಚುನಾವಣೆಯ ಕಾವು. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ. ಕಾಪು ಕ್ಷೇತ್ರದಲ್ಲಿ ಮಾತ್ರ ತ್ರಿಕೋಣ ಸ್ಪರ್ಧೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಆಗಸ್ಟ್ 1997ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಜೆ ಎಚ್ ಪಟೇಲ್ ಅವಧಿಯಲ್ಲಿ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆ ಪೂರ್ವಕ್ಕೆ ಸಹ್ಯಾದ್ರಿ, ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಪ್ರಕೃತಿ ಮೈಸಿರಿಯನ್ನು ತುಂಬಿಕೊಂಡಿರುವ ನಾಡು. ಮಲ್ಪೆ, ಕಾಪು ಬೀಚ್, ಸೈಂಟ್ ಮೇರಿ ದ್ವೀಪ, ಕೊಲ್ಲೂರು ದೇವಾಲಯ, ಮರವಂತೆಯ ಸುಂದರ ಕಡಲ ಕಿನಾರೆ, ಮಂದರ್ತಿ, ಕಮಲಶಿಲೆ, ಆನೆಗುಡ್ಡೆ ದೇವಾಲಯ, ಸೈಂಟ್ ಮಿಲಾಗ್ರಿಸ್ ಚರ್ಚ್ ಮುಂತಾದವು ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳು.
ಉಡುಪಿ ಕಡೆಗೆ ಹೋದಾಗ ಗೋಳಿಬಜೆ, ಬಿಸ್ಕುಟ್ ಅಂಬಡೆ, ಅಡ್ಯೆ, ಬಜಿಲ್ ಸಜ್ಜಿಗೆ, ಪತ್ರೋಡೆ, ಬಂಗುಡೆ ಸಾರು ತಿನ್ನಲು ಮರೆಯದಿರಿ. ಹಾಗೇ, ಭೂತಕೋಲ, ಯಕ್ಷಗಾನವನ್ನೂ ಕಣ್ತುಂಬಿಸಿಕೊಳ್ಳಿ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಿವೆ.
2008ರಲ್ಲಿ
ಗೆದ್ದವರ
ಪಟ್ಟಿ
ಬೈಂದೂರು
:
ಕೆ
ಲಕ್ಷ್ಮೀನಾರಾಯಣ,
ಬಿಜೆಪಿ,
ಗೆದ್ದ
ಮತದ
ಅಂತರ
7,970.
ಕುಂದಾಪುರ
:
ಹಾಲಾಡಿ
ಶ್ರೀನಿವಾಸ
ಶೆಟ್ಟ,
ಬಿಜೆಪಿ,
ಗೆದ್ದ
ಮತದ
ಅಂತರ
25,083.
ಉಡುಪಿ
:
ರಘುಪತಿ
ಭಟ್,
ಬಿಜೆಪಿ,
ಗೆದ್ದ
ಮತದ
ಅಂತರ
2,479.
ಕಾಪು
:
ಲಾಲಾಜಿ
ಆರ್
ಮೆಂಡನ್,
ಬಿಜೆಪಿ,
ಗೆದ್ದ
ಮತದ
ಅಂತರ
967.
ಕಾರ್ಕಳ
:
ಎಚ್
ಗೋಪಾಲ
ಭಂಡಾರಿ,
ಕಾಂಗ್ರೆಸ್,
ಗೆದ್ದ
ಮತದ
ಅಂತರ
1,538.
2013 ಕರ್ನಾಟಕ ವಿಧಾನಸಭೆ ಚುನಾವಣೆ ಉಡುಪಿ ಜಿಲ್ಲೆ ಅಭ್ಯರ್ಥಿಗಳು:
ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು |
118 | ಬೈಂದೂರು |
ಗೋಪಾಲ
ಪೂಜಾರಿ | ಬಿ ಎಂ ಸುಕುಮಾರ ಶೆಟ್ಟಿ | ಸುರಯ್ಯಾ ಭಾನು | ನವೀನ್ ಚಂರ ಉಪ್ಪುಂದ | ಒಟ್ಟು 13 ಮಂದಿ ಕಣದಲ್ಲಿ |
119 | ಕುಂದಾಪುರ |
ಮಲ್ಯಾಡಿ
ಶಿವರಾಂ
ಶೆಟ್ಟಿ | ಕಿಶೋರ್ ಕುಮಾರ್ | ಅಭ್ಯರ್ಥಿ ಕಣಕ್ಕಿಳಿಸಲಿಲ್ಲ | ಅಭ್ಯರ್ಥಿ ಕಣಕ್ಕಿಳಿಸಲಿಲ್ಲ |
ಕೆ
ಎಚ್
ಇಬ್ರಾಹಿಂ
(BSR) ಹಾಲಾಡಿ ಶ್ರೀನಿವಾಸ ಶೆಟ್ಟಿ (Independent)) ಸೇರಿ ಕಣದಲ್ಲಿ ಆರು ಅಭ್ಯರ್ಥಿಗಳು |
120 | ಉಡುಪಿ | ಪ್ರಮೋದ್ ಮಧ್ವರಾಜ್ | ಸುಧಾಕರ ಶೆಟ್ಟಿ | ಸತೀಶ್ ಪೂಜಾರಿ | ಅಭ್ಯರ್ಥಿ ಕಣಕ್ಕಿಳಿಸಲಿಲ್ಲ | ನಾಸಿರ್ ಹುಸೇನ್ (BSR) ಸೇರಿ ಕಣದಲ್ಲಿ 7 ಅಭ್ಯರ್ಥಿಗಳು |
121 | ಕಾಪು |
ವಿನಯ್
ಕುಮಾರ್
ಸೊರಕೆ | ಲಾಲಾಜಿ ಮೆಂಡನ್ | ವಸಂತ್ ಸಾಲ್ಯಾನ್ | ಅಭ್ಯರ್ಥಿ ಕಣಕ್ಕಿಳಿಸಲಿಲ್ | ಪ್ರವೀಣ್ ಕುಮಾರ್ (BSR) ಸೇರಿ ಕಣದಲ್ಲಿ 11 ಅಭ್ಯರ್ಥಿಗಳು |
122 | ಕಾರ್ಕಳ | ಎಚ್ ಗೋಪಾಲ್ ಭಂಡಾರಿ | ವಿ ಸುನಿಲ್ ಕುಮರ್ | ವಾಲ್ಟರ್ ಡಿಸೋಜಾ | ಯು ಕೆ ಸಯ್ಯದ್ | ಒಟ್ಟು 9 ಮಂದಿ ಕಣದಲ್ಲಿ |