ರಾಜ್ಯದ ಮುಕುಟ ಬೀದರ್ ಒಡೆಯ ಯಾರಾಗಲಿದ್ದಾರೆ?

ಪ್ರಮುಖ ಮೂರು ಪಕ್ಷಗಳ ಜೊತೆ ಈ ಬಾರಿ ಯಡಿಯೂರಪ್ಪ ಅವರ ಕೆಜೆಪಿ ಕೂಡಾ ಸೇರಲಿದೆ. ಬಿಎಸ್ ಆರ್ ಕಾಂಗ್ರೆಸ್ ಕೂಡಾ ತನ್ನ ಅದೃಷೃ ಪರೀಕ್ಷೆ ಮಾಡುತ್ತಿದ್ದು, ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರು ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಹಾಲಿ ಶಾಸಕರು: [2013 ಫಲಿತಾಂಶ: ಗೆದ್ದವರು, ಸೋತವರ ವಿವರ]
* ಬಸವಕಲ್ಯಾಣ: ಬಿಜೆಪಿ ಶಾಸಕ ಬಸವರಾಜ ಅಟ್ಟೂರ್ ಅವರು ರಾಜೀನಾಮೆ ನೀಡಿ ಕೆಜೆಪಿ ಸೇರಿದ್ದಾರೆ.
* ಹುಮ್ನಾಬಾದ್: ರಾಜಶೇಖರ ಪಾಟೀಲ (ಕಾಂಗ್ರೆಸ್)
* ಬೀದರ್ ದಕ್ಷಿಣ: ಬಂಡೆಪ್ಪ ಕಾಶಂಪುರ (ಜೆಡಿಎಸ್)
* ಬೀದರ್: ರಹೀಂ ಖಾನ್(ಕಾಂಗ್ರೆಸ್)
* ಭಾಲ್ಕಿ: ಈಶ್ವರ ಖಂಡ್ರೆ (ಕಾಂಗ್ರೆಸ್)
* ಔರಾದ್ (ಎಸ್ ಸಿ): ಪ್ರಭು ಚವ್ಹಾಣ (ಬಿಜೆಪಿ)
ಬೀದರ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಒಮ್ಮೆ ಬಿಎಸ್ಪಿಗೆ ಒಲಿದಿತ್ತು. ಈಗ ಕೆಜೆಪಿ ಹಾಗೂ ಬಿಜೆಪಿ ಜೊತೆ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಬೀದರ್ ದಕ್ಷಿಣ ಬಹುತೇಕ ಜೆಡಿಎಸ್ ಪರ ಇದ್ದರೂ ಅಶೋಕ್ ಖೇಣಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಕುತೂಹಲ ಕೆರಳಿಸಿದೆ.
ಭಾಲ್ಕಿಯಲ್ಲಿ ಖಂಡ್ರೆ ಸೋದರರ ಕಾಳಗ ಗಮನ ಸೆಳೆದಿದ್ದು, ಭೀಮಣ್ಣ ಖಂಡ್ರೆ ಅವರ ಸೋದರನ ಮಗನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಶ್ವರ್ ಖಂಡ್ರೆ, ಪ್ರಕಾಶ್ ಖಂಡ್ರೆ ಸೋಲಿಸುವ ಹುಮ್ಮಸ್ಸಿನಲ್ಲಿ ಕೆಜೆಪಿ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಕಣಕ್ಕಿಳಿದಿದ್ದಾರೆ.
ಹುಮ್ನಾಬಾದಿನಲ್ಲಿ ರಾಜಶೇಖರ್ ಪಾಟೀಲ್ ಹ್ಯಾಟ್ರಿಕ್ ನಿರೀಕ್ಷೆಯಿದೆ. ಬಸವಕಲ್ಯಾಣ ಬಿಜೆಪಿ ಕೈ ತಪ್ಪಿದರೂ ಅಚ್ಚರಿಯೇನಿಲ್ಲ. ಕೆಜೆಪಿ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ. ಔರಾದ್ ಗಡಿಭಾಗದ ಮತದಾರರಲ್ಲಿ ಗೊಂದಲವಿದ್ದರೂ ಪ್ರಭು ಚವ್ಹಾಣ್ ಮತ್ತೆ ಬಿಜೆಪಿ ಬಾವುಟ ಹಾರಿಸುವ ನಿರೀಕ್ಷೆಯಿದೆ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ / ಪಕ್ಷೇತರರು/ಇತರೆ |
| 47 | ಬಸವಕಲ್ಯಾಣ | ಸಂಜಯ್ ಪಟವಾರಿ | ನಾರಾಯಣರಾವ್ ಬಿ | ಮಲ್ಲಿಕಾರ್ಜುನ ಖೂಬಾ | ಮಲ್ಲಮ್ಮ ಬಿ. ಆಟ್ಟೂರು | ಎಂಜಿ ಮುಳೆ (ಬಿಎಸ್ ಆರ್ಸಿ) + 17 |
| 48 | ಹುಮ್ನಾಬಾದ್ | ಪದ್ಮಾಕರ ಪಾಟೀಲ್ | ರಾಜಶೇಖರ್ ಬಸವರಾಜ್ ಪಾಟೀಲ್ | ನಸಿಮುದ್ದೀನ್ ಪಟೇಲ್ | ಅಶ್ರಫ್ ಪಟೇಲ್ | ಬ್ಯಾಂಕ್ ರೆಡ್ಡಿ+12 |
| 49 | ಬೀದರ್ ದಕ್ಷಿಣ | ಬಸವರಾಜ್ ಪಾಟೀಲ್ ಅಟ್ಟೂರ | ಮೀನಾಕ್ಷಿಭಾಯಿ | ಬಂಡೆಪ್ಪ ಕಾಶಂಪೂರ | ಡಾ. ಶೈಲೇಂದ್ರ ಬೆಲ್ದಾಳೆ | ಪ್ರವೀಣ್ ಕುಮಾರ್ (ಬಿಎಸ್ ಆರ್ಸಿ), ಅಶೋಕ್ ಖೇಣಿ (ಕಮಪ) + 20 |
| 50 | ಬೀದರ್ | ರಮೇಶ್ ಕುಮಾರ್ ಪಾಂಡೆ | ರಹೀಂ ಖಾನ್ | ಡಾ. ಅಮರ ಎರೋಳಕರ್ | ಗುರುಪಾದಪ್ಪ ನಾಗಮಾರಪಳ್ಳಿ | ಅನಿಲ ಗುಂಡಪ್ಪ+18 |
| 51 | ಭಾಲ್ಕಿ | ಪ್ರಕಾಶ್ ಖಂಡ್ರೆ | ಈಶ್ವರ್ ಖಂಡ್ರೆ | ಜನಾರ್ದನ ಬಿರಾದಾರ | ಸಿ.ಕೆ ಸಿದ್ರಾಮ್ | ಜಗನ್ನಾಥ ಜಮಾದಾರ + 12 |
| 52 | ಔರಾದ್ | ಪ್ರಭು ಚವ್ಹಾಣ್ | ವಿಜಯ್ ಕುಮಾರ್ ಗಾಯಕ್ವಾಡ್ | ಜಿ.ಎಂ ಯಾತನೂರ | ಧನಾಜಿ ಜಾದವ್ | ಶಿವಕುಮಾರ ಬೆಲ್ಲಾಳ (ಬಿಎಸ್ ಆರ್ಸಿ) +15 |
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications