ಕುಡಚಿ : ಮೂಲ ಸೌಕರ್ಯ ವಂಚಿತ ಕ್ಷೇತ್ರಕ್ಕೆ ಯಾರು ದಿಕ್ಕು?
ಕೃಷ್ಣೆ ತಟದ ಕ್ಷೇತ್ರ ಕುಡಚಿಗೆ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸಮರ್ಪಕವಾಗಿ ನೀರಿನ ನಿರೀಕ್ಷೆ ಹುಸಿಯಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿದೆ. ರಸ್ತೆ, ಕುಡಿವ ನೀರು, ಮೂಲ ಸೌಕರ್ಯಗಳ ಬಗ್ಗೆ ದೂರಗಳ ಸುರಿಮಳೆಯಾಗುತ್ತಿದೆ. ಮೀಸಲು ಕ್ಷೇತ್ರವಾದರೂ ಸರಿಯಾದ ಪೋಷಣೆ ಸಿಕ್ಕಿಲ್ಲ. ಬೆಳಗಾವಿ ಜಿಲ್ಲೆಗಳ ಪೈಕಿ ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಆಶ್ವಾಸನೆ
ಕಳೆದ ಬಾರಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಪಿ ರಾಜೀವ್ ಈ ಬಾರಿ ಬಿಜೆಪಿಯ ಸ್ಪರ್ಧಿ. ಪಿ ರಾಜೀವ್ ಕಳೆದ ಬಾರಿ 70787 ಮತಗಳು, ಕಾಂಗ್ರೆಸ್ ಅಮಿತ್ ಶಾಮ ಘಾಟ್ಗೆ 24751 ಮತಗಳು,ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್ (14257 ಮತಗಳು) ಸ್ಪರ್ಧಿಸಿ ಮೂರನೇ ಸ್ಥಾನ ಗಳಿಸಿದ್ದರು. ಈ ಬಾರಿ ಜೆಡಿಎಸ್ ನ ರಾಜೇಂದ್ರ ಅಪ್ಪಣ್ಣ ಐಹೊಳೆ ಕಣದಲ್ಲಿದ್ದಾರೆ.

2013ರ ಫಲಿತಾಂಶ:
ಕುಡಚಿಯಲ್ಲಿ 2013ರಲ್ಲಿ 17 ಮಂದಿ ನಾಮಪತ್ರ ಸಲ್ಲಿಸಿದ್ದರು. 6 ನಾಮಪತ್ರ ತಿರಸ್ಕೃತವಾಯಿತು. ಒಬ್ಬರು ನಾಮಪತ್ರ ಹಿಂಪಡೆದರು. 10 ಮಂದಿ ಸ್ಪರ್ಧಿಗಳ ಪೈಕಿ 8 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು ಶೇ 78 ರಷ್ಟು ಮತದಾನವಾಗಿದ್ದು, 115375 ಮತಗಳ ಪೈಕಿ ಬಿಎಸ್ ಆರ್ ಕಾಂಗ್ರೆಸ್ಸಿನ ಪಿ ರಾಜೀವ್ ಅವರು 71057 ಮತಗಳನ್ನು ಗಳಿಸಿ ಜಯ ಸಾಧಿಸಿದರು. ಕಾಂಗ್ರೆಸ್ಸಿನ ಶ್ಯಾಮ ಭೀಮ ಘಾಟ್ಗೆ ಅವರು 24823 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. 46234 ಮತಗಳ (ಶೇ 40.07) ಅಂತರದಿಂದ ಜಯ ದಾಖಲಿಸಿದ್ದರು.
ಪಿ ರಾಜೀವ್ ಗೆಲ್ಲುವ ನಿರೀಕ್ಷೆ:
ಕಾಂಗ್ರೆಸ್ಸಿನಿಂದ 6ನೇ ಬಾರಿಗೆ ಶ್ಯಾಮ ಭೀಮ ಘಾಟ್ಗೆ ಮೂಲತಃ ರಾಯಭಾಗ ಕ್ಷೇತ್ರದವರು. ಮೊದಲ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಪಿಎಸ್ ಐ ಪಿ. ರಾಜೀವ್ ಅವರು ಈಗ ಪ್ರಬಲ ಸ್ಪರ್ಧಿ ಹಾಗೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ. ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಮತ ವಿಭಜನೆ ಭೀತಿಯಿಲ್ಲ, ಮುಸ್ಲಿಮ್ ಹಾಗೂ ಪರಿಶಿಷ್ಟ ಮತದಾರರ ಒಲವು ಗಳಿಸಿರುವ ರಾಜೀವ್ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆಯಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications