ಕುಡಚಿ : ಮೂಲ ಸೌಕರ್ಯ ವಂಚಿತ ಕ್ಷೇತ್ರಕ್ಕೆ ಯಾರು ದಿಕ್ಕು?
ಕೃಷ್ಣೆ ತಟದ ಕ್ಷೇತ್ರ ಕುಡಚಿಗೆ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸಮರ್ಪಕವಾಗಿ ನೀರಿನ ನಿರೀಕ್ಷೆ ಹುಸಿಯಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿದೆ. ರಸ್ತೆ, ಕುಡಿವ ನೀರು, ಮೂಲ ಸೌಕರ್ಯಗಳ ಬಗ್ಗೆ ದೂರಗಳ ಸುರಿಮಳೆಯಾಗುತ್ತಿದೆ. ಮೀಸಲು ಕ್ಷೇತ್ರವಾದರೂ ಸರಿಯಾದ ಪೋಷಣೆ ಸಿಕ್ಕಿಲ್ಲ. ಬೆಳಗಾವಿ ಜಿಲ್ಲೆಗಳ ಪೈಕಿ ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಆಶ್ವಾಸನೆ
ಕಳೆದ ಬಾರಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಪಿ ರಾಜೀವ್ ಈ ಬಾರಿ ಬಿಜೆಪಿಯ ಸ್ಪರ್ಧಿ. ಪಿ ರಾಜೀವ್ ಕಳೆದ ಬಾರಿ 70787 ಮತಗಳು, ಕಾಂಗ್ರೆಸ್ ಅಮಿತ್ ಶಾಮ ಘಾಟ್ಗೆ 24751 ಮತಗಳು,ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್ (14257 ಮತಗಳು) ಸ್ಪರ್ಧಿಸಿ ಮೂರನೇ ಸ್ಥಾನ ಗಳಿಸಿದ್ದರು. ಈ ಬಾರಿ ಜೆಡಿಎಸ್ ನ ರಾಜೇಂದ್ರ ಅಪ್ಪಣ್ಣ ಐಹೊಳೆ ಕಣದಲ್ಲಿದ್ದಾರೆ.

2013ರ ಫಲಿತಾಂಶ:
ಕುಡಚಿಯಲ್ಲಿ 2013ರಲ್ಲಿ 17 ಮಂದಿ ನಾಮಪತ್ರ ಸಲ್ಲಿಸಿದ್ದರು. 6 ನಾಮಪತ್ರ ತಿರಸ್ಕೃತವಾಯಿತು. ಒಬ್ಬರು ನಾಮಪತ್ರ ಹಿಂಪಡೆದರು. 10 ಮಂದಿ ಸ್ಪರ್ಧಿಗಳ ಪೈಕಿ 8 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು ಶೇ 78 ರಷ್ಟು ಮತದಾನವಾಗಿದ್ದು, 115375 ಮತಗಳ ಪೈಕಿ ಬಿಎಸ್ ಆರ್ ಕಾಂಗ್ರೆಸ್ಸಿನ ಪಿ ರಾಜೀವ್ ಅವರು 71057 ಮತಗಳನ್ನು ಗಳಿಸಿ ಜಯ ಸಾಧಿಸಿದರು. ಕಾಂಗ್ರೆಸ್ಸಿನ ಶ್ಯಾಮ ಭೀಮ ಘಾಟ್ಗೆ ಅವರು 24823 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. 46234 ಮತಗಳ (ಶೇ 40.07) ಅಂತರದಿಂದ ಜಯ ದಾಖಲಿಸಿದ್ದರು.
ಪಿ ರಾಜೀವ್ ಗೆಲ್ಲುವ ನಿರೀಕ್ಷೆ:
ಕಾಂಗ್ರೆಸ್ಸಿನಿಂದ 6ನೇ ಬಾರಿಗೆ ಶ್ಯಾಮ ಭೀಮ ಘಾಟ್ಗೆ ಮೂಲತಃ ರಾಯಭಾಗ ಕ್ಷೇತ್ರದವರು. ಮೊದಲ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಪಿಎಸ್ ಐ ಪಿ. ರಾಜೀವ್ ಅವರು ಈಗ ಪ್ರಬಲ ಸ್ಪರ್ಧಿ ಹಾಗೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ. ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಮತ ವಿಭಜನೆ ಭೀತಿಯಿಲ್ಲ, ಮುಸ್ಲಿಮ್ ಹಾಗೂ ಪರಿಶಿಷ್ಟ ಮತದಾರರ ಒಲವು ಗಳಿಸಿರುವ ರಾಜೀವ್ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆಯಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications