ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳೆನರಸೀಪುರ : ಸುಭಿಕ್ಷ ಕ್ಷೇತ್ರದಲ್ಲಿ ಒಕ್ಕಲಿಗನೇ ಅಧಿಪತಿ

By Mahesh
|
Google Oneindia Kannada News

ಹೇಮಾವತಿ ಹೊಳೆ ನದಿ ದಂಡೆಯ ಊರು, ಶ್ರೀಲಕ್ಷ್ಮಿನರಸಿಂಹಸ್ವಾಮಿಯ ನೆಲೆಬೀಡು ನರಸೀಪುರ-ಹೊಳೆ ನರಸೀಪುರವಾಗಿ ಜನಜನಿತ. ಭತ್ತ, ಕಬ್ಬು ಬೆಳೆಯುವ ಇಲ್ಲಿನ ರೈತಾಪಿ ಜನಕ್ಕೆ ನೀರಿನ ಕೊರತೆ ಇಲ್ಲ. ಅಕ್ಕಿ ಗಿರಣಿಗಳಿದ್ದು, ಕೈಗಾರಿಕೆಗಳು, ಶಾಲೆ, ಕಾಲೇಜುಗಳು, ಉತ್ತಮ ರಸ್ತೆ ಸೌಲಭ್ಯಗಳಿವೆ. ರೈಲು ಸಂಪರ್ಕವೂ ಇದೆ.

ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ, ಪದವಿ ಕಾಲೇಜುಗಳ ಕೊರತೆ ಬಿಟ್ಟರೆ ಒಕ್ಕಲಿಗರೇ ಅಧಿಕವಾಗಿರುವ ಈ ಕ್ಷೇತ್ರ ಸದ್ಯಕ್ಕೆ ಸುಭಿಕ್ಷವಾಗಿದೆ ಎನ್ನಬಹುದು.

ಕಳೆದ ವಿಧಾನಸಭೆಯಲ್ಲಿ ಅರಕಲಗೂಡು ಹಾಗೂ ಬೇಲೂರು ಬಿಟ್ಟು ಮಿಕ್ಕ ಐದು ಕ್ಷೇತ್ರಗಳು ಜೆಡಿಎಸ್ ವಶವಾಗಿತ್ತು. ಈ ಬಾರಿ ಅಷ್ಟು ಸುಲಭವಲ್ಲ. ಒಕ್ಕಲಿಗರ ಉಪಜಾತಿಯಾದ ದಾಸ ಒಕ್ಕಲಿಗರು ತಿರುಗಿಬಿದ್ದರೆ ಹೊಳೆ ನರಸೀಪುರವೂ ದಕ್ಕುವುದಿಲ್ಲ ಎಂಬ ಪ್ರಜ್ಞೆ ಜೆಡಿಎಸ್ ವರಿಷ್ಠರಿಗಿದೆ.

ಮಾವಿನಕೆರೆ ರಂಗನಾಥ, ಹೀರೇಬೆಳಗುಲಿ, ಗ್ರಾಮದೇವತೆಗಳಾದ ಉಡುಸಲಮ್ಮ-ದುರ್ಗಮ್ಮ ದೇವೆ ಜಾತ್ರೆ ನಾಡಿನಲ್ಲಿ ಪ್ರಸಿದ್ಧ. ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರದ ಹರದನಹಳ್ಳಿಯ ಹಳೇಕೋಟೆ ಹೋಬಳಿಯಲ್ಲಿದೆ.

ಪ್ರವಾಸೋದ್ಯಮಕ್ಕೆ ಇನ್ನಷ್ಟು ಆದ್ಯತೆ, ಪದವಿ ಕಾಲೇಜುಗಳ ಕೊರತೆ ಬಿಟ್ಟರೆ ಒಕ್ಕಲಿಗರೇ ಅಧಿಕವಾಗಿರುವ ಈ ಕ್ಷೇತ್ರ ಸದ್ಯಕ್ಕೆ ಸುಭಿಕ್ಷವಾಗಿದೆ ಎನ್ನಬಹುದು.

ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ 1962ರಲ್ಲಿ ಕಣಕ್ಕಿಳಿದು ರಾಜಕೀಯ ಪ್ರವೇಶ ಪಡೆದ ಎಚ್. ಡಿ ದೇವೇಗೌಡ ಅವರು ಇಂದಿಗೂ ಸಕ್ರಿಯ ರಾಜಕಾರಣಿಯಾಗಿ ಉಳಿದಿದ್ದಾರೆ. ಹೊಳೆನರಸೀಪುರದಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ದೇವೇಗೌಡರ ಜತೆಗೂಡಿದ್ದ ಪುಟ್ಟಸ್ವಾಮಿ ಗೌಡ ಅವರು ಈಗ ದೇವೇಗೌಡರ ಜತೆಗಿಲ್ಲ.

1984ರ ನಂತರ ದೇವೇಗೌಡರ ಪುತ್ರ ಎಚ್ ಡಿ ರೇವಣ್ಣ ಅವರು ಶಾಸಕರಾದರು. ಅಪ್ಪ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕುಳಿತು ಹಾಸನ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು.

Karnataka Assembly Election 2018: Holenarsipura constituency profile

ಕಳೆದ ವಿಧಾನಸಭೆಯಲ್ಲಿ ಅರಕಲಗೂಡು ಹಾಗೂ ಬೇಲೂರು ಬಿಟ್ಟು ಮಿಕ್ಕ ಐದು ಕ್ಷೇತ್ರಗಳು ಜೆಡಿಎಸ್ ವಶವಾಗಿತ್ತು. ಈ ಬಾರಿ ಅಷ್ಟು ಸುಲಭವಲ್ಲ. ಒಕ್ಕಲಿಗರ ಉಪಜಾತಿಯಾದ ದಾಸ ಒಕ್ಕಲಿಗರು ತಿರುಗಿಬಿದ್ದರೆ ಹೊಳೆ ನರಸೀಪುರವೂ ದಕ್ಕುವುದಿಲ್ಲ ಎಂಬ ಪ್ರಜ್ಞೆ ಜೆಡಿಎಸ್ ವರಿಷ್ಠರಿಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಅವರು (92173 ಮತಗಳು), ಕಾಂಗ್ರೆಸ್ಸಿನ ಎಚ್ ಜಿ ಅನುಪಮ(62655) ಗಳಿಸಿದ್ದರು. 30 ಸಾವಿರ ಅಂತರದ ಮತಗಳಿಂದ ರೇವಣ್ಣ ಜಯಶಾಲಿಯಾಗಿದ್ದರು. ಈ ಬಾರಿ ಕೂಡಾ ಪ್ರಮುಖ ಸ್ಪರ್ಧಿಗಳಿಲ್ಲದಿದ್ದರೆ ರೇವಣ್ಣ ಅವರ ಗೆಲುವು ತಪ್ಪಿಸಲು ಸಾಧ್ಯವಿಲ್ಲ.

English summary
Karnataka Assembly Election 2018: Read all about Holenarsipura assembly constituency of Hassan. Get election news from Holenarsipura. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X