ಮಾತಿನ ಮಲ್ಲ ಪ್ರಥಮ್ನ ಕನಸಿನ ಕರ್ನಾಟಕ ಹೀಗಿರಬೇಕಂತೆ
Recommended Video

ಮಾತಿನ ಮಲ್ಲ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಹುಡುಗಾಟದ ಹುಡುಗನಾದರೂ ಕರ್ನಾಟಕದ ವಿಷಯ ಬಂದಾಗ ಗಂಭೀರ. ತಮ್ಮ ಕನಸಿನ ಕರ್ನಾಟಕದ ಬಗ್ಗೆ ಅವರಿಗೆ ಅವರದ್ದೇ ಆದ ಸುಂದರ ಕಲ್ಪನೆಗಳಿವೆ. ತಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎಂಬುದನ್ನು ಅವರು 'ಒನ್ ಇಂಡಿಯಾ ಕನ್ನಡ' ಬಳಿ ಹಂಚಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅವರ ಮಾತು ಪ್ರಾರಂಭವಾಗುವುದು ಹತ್ತಿರದಲ್ಲೇ ಇರುವ ವಿಧಾನಸಭೆ ಚುನಾವಣೆ ಇಂದ. 'ಚುನಾವಣೆ ಹತ್ತಿರವಿದೆ, ರಾಜ್ಯದ ಜನರೆಲ್ಲರೂ ತಮ್ಮ ಭವಿಷ್ಯ ನಿರ್ಧಾರಕ್ಕಾಗಿ ಸ್ವಯಂ ಪ್ರೇರಿತವಾಗಿ ಮತ ಚಲಾಯಿಸುವ ಜಾಗೃತಿ ಬರಬೇಕು, ಜಾಗೃತ ನಾಗರೀಕರಿರುವ ಕರ್ನಾಟಕ ನಮ್ಮದಾಗಬೇಕು'. ಪ್ರಜಾಪ್ರಭುತ್ವದ ಸುಂದರತೆ ಮತ್ತು ವಿಶಾಲತೆಯನ್ನು ಅರಿತುಕೊಂಡು ನಡೆಯುವ ಕರ್ನಾಟಕ ಸೃಷ್ಠಿಯಾಗಬೇಕು ಎಂಬುದು ಅವರ ಮೊದಲ ಕನಸು.
ಅವರ ಮುಂದಿನ ಆದರೆ ಹೆಚ್ಚಿನ ಆದ್ಯತೆ ರಾಜ್ಯದ ಅನ್ನದಾತರ ಬಗ್ಗೆ. ರೈತರ ಬಗ್ಗೆ ಅತೀವ ಕಾಳಜಿ ಮತ್ತು ಕುಕ್ಕುಲತೆಯಿಂದ ಮಾತನಾಡಿರುವ ಅವರು 'ನಮ್ಮದು ಎಂತಹಾ ರಾಜ್ಯವಾಗಬೇಕೆಂದರೆ, ಇಲ್ಲಿನ ರೈತ ನೆಮ್ಮದಿಯಿಂದ ಜೀವನ ಸಾಗಿಸುವಂತಿರಬೇಕು, ಆತ ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿಯಾಗಬೇಕು, ನೀರಿನ ಕೊರತೆ ಸೇರಿದಂತೆ ಆತನಿಗೆ ತನ್ನ ಕಾಯಕ ಮಾಡಲು ಯಾವುದೇ ಕಷ್ಟ ಎದುರಾಗದ ವ್ಯವಸ್ಥೆಯೊಂದು ನಿರ್ಮಾಣವಾಗಿರುವ ರಾಜ್ಯ ನಮ್ಮದಾಗಬೇಕು' ಎನ್ನುತ್ತಾರೆ ಪ್ರಥಮ್.

ಅವರ ಮೂರನೇ ಆದ್ಯತೆ ಧರ್ಮನಿರಪೇಕ್ಷತೆಯದ್ದು. 'ಯಾವುದೇ ಬಲವಂತದ ಮತಾಂತರ ಇಲ್ಲದ, ಪರಸ್ಪರ ಧರ್ಮಗಳ ನಡುವೆ, ಜಾತಿಗಳ ನಡುವೆ ಕಂದಕಗಳೇ ಇಲ್ಲದ ಹಾಗೆ, ಎಲ್ಲರೂ ಎಲ್ಲರ ಆಚರಣೆಗಳನ್ನು ಗೌರವಿಸುವ ರಾಜ್ಯ ಕರ್ನಾಟಕವಾಗಬೇಕು, ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಧರ್ಮಗಳಿವೆ ಇನ್ನೂ ಕೆಲವು ಧರ್ಮಗಳು ಹುಟ್ಟುವ ಮುನ್ಸೂಚನೆ ಕಾಣುತ್ತಿದೆ ಆದರೆ ಇಲ್ಲಿನ ಜನ ಧರ್ಮಗಳಾಚೆಗೆ ಅನ್ಯೋನ್ಯವಾದ ಬಂಧವನ್ನು ಪ್ರದರ್ಶಿಸಬೇಕು, ಧರ್ಮವನ್ನು ದಾಟಿ ನಿಂತ ಜನರ ರಾಜ್ಯ ನನ್ನದಾಗಬೇಕು' ಎಂಬುದು ಪ್ರಥಮ್ ಆಶಯ.
ಪ್ರಥಮ್ರ ಕನಸಿನ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ, 'ಹಣದ ಸೋಂಕು ಇಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಹಾ ರಾಜ್ಯ ನಮ್ಮದಾಗಬೇಕು' ಎಂಬುದು ಅವರ ಆಸೆ.
ಸಾವಿರಾರು ಭಿನ್ನ ಸಂಸ್ಕೃತಿಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಕರ್ನಾಟಕ ಅನೇಕ ಆದರ್ಶ ಜೀವನ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದೆ, ತನ್ನ ವಿವಿಧತೆ, ಸುಂದರತೆ, ಸಹಿಷ್ಣುತೆ, ಅಹಿಂಸಾತ್ಮಕತೆಗಳಿಂದ ಕರ್ನಾಟಕ ವಿಶ್ವಮಟ್ಟದಲ್ಲಿ ಬೆಳಗಬೇಕು ಜೊತೆಗೆ ವಿಶ್ವಕ್ಕೆ ಬೆಳಕು ಕೊಡಬೇಕು ಎಂಬುದು ಅವರ ಕರ್ನಾಟಕದ ಬಗೆಗೆ ಒಳ್ಳೆ ಹುಡುಗ ಪ್ರಥಮ್ರ ಕನಸು.
-
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications