ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ಕೆಪಿಜೆಪಿ) ಹೊರಬಂದ ನಟ ಉಪೇಂದ್ರ ನಡೆ ಕುತೂಹಲ ಮೂಡಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹದೊಂದಿಗೆ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದ ಉಪೇಂದ್ರ, ಕೆಪಿಜೆಪಿ ಮೂಲಕ ರಾಜಕೀಯ ಬದಲಾವಣೆಯ ಪ್ರಯತ್ನದ ಕನಸುಗಳನ್ನು ಹಂಚಿಕೊಂಡಿದ್ದರು.
ಆದರೆ, ಉಪ್ಪಿ ಈಗ ಎಲ್ಲಿದ್ದಾರೆ? ಮತ್ತೆ ಸಿನಿಮಾಕ್ಕೆ ಮರಳಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಜತೆಗೆ ರಾಜಕೀಯದಲ್ಲಿಯೂ ಮುಂದುವರಿಯುವ ಸುಳಿವು ನೀಡಿದ್ದಾರೆ. ಸದ್ಯಕ್ಕೆ ಅವರೀಗ ದೆಹಲಿಯಲ್ಲಿದ್ದಾರೆ. ಅದೂ ರಾಜಕೀಯದ ಕೆಲಸಕ್ಕೆ.
ಹೌದು. ಉಪೇಂದ್ರ ರಾಜಕೀಯ ಸೇರ್ಪಡೆಯ ಆರಂಭದಿಂದಲೂ 'ಪ್ರಜಾಕೀಯ' ಪಕ್ಷದ ಹೆಸರು ಕೇಳಿಬರುತ್ತಿತ್ತು. ಈ ಹೆಸರನ್ನು ಅಪ್ಪಿಕೊಂಡಿರುವ ಉಪ್ಪಿ, 'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನು ಸ್ಥಾಪಿಸಲು ಮುಂದಾಗಿದ್ದಾರೆ.
At Delhi for “Utthama PRAJAAKEEYA Party “registration process..., pic.twitter.com/6nFWrzpjqy
— Upendra (@nimmaupendra) 25 April 2018
ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ತೆರಳಿರುವ ಉಪೇಂದ್ರ 'ಉತ್ತಮ ಪ್ರಜಾಕೀಯ ಪಾರ್ಟಿ'ಯ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ.
ರಾಜಕೀಯವನ್ನು 'ಪ್ರಜಾಕೀಯ' ಎಂದು ಪರಿವರ್ತಿಸಿರುವ ಉಪೇಂದ್ರ, ಕೆಪಿಜೆಪಿ ಆರಂಭಿಸಿದ್ದಾಗಿನಿಂದಲೂ ರಾಜಕೀಯದಲ್ಲಿ ಆಗಬೇಕಾದ ಸ್ಥಿತ್ಯಂತರದ ಕುರಿತು ಸುದೀರ್ಘ ಕನಸುಗಳನ್ನು ಹಂಚಿಕೊಂಡಿದ್ದರು. ಅವರ ಮಾತುಗಳು ಸಿನಿಮಾ ಸಂಭಾಷಣೆಯ ಧಾಟಿಯಲ್ಲಿಯೇ ಇದ್ದವು. ಕೊನೆಗೆ ತಮ್ಮದೇ ಪಕ್ಷದಿಂದ ತಾವೇ ಹೊರಬೇಕಾದ 'ದುರಂತ ನಾಯಕ'ನಂತೆಯೂ ಕಂಡಿದ್ದರು.
ಪಕ್ಷ ಸ್ಥಾಪನೆ ಬಳಿಕ ಮುಂದೇನು?
ಕೆಪಿಜೆಪಿಯಿಂದ ಹೊರಬಂದ ಬಳಿಕ ಉಪೇಂದ್ರ ಮುಂದಿನ ನಡೆ ಏನೆಂಬುದು ಗುಪ್ತವಾಗಿತ್ತು. ಆದರೆ, ರಾಜಕೀಯದಿಂದ ಹೊರಬರುವುದಿಲ್ಲ ಎಂಬ ಸುಳಿವು ನೀಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಹೊಂದಿದ್ದ ಉಪೇಂದ್ರ, ಈಗ ಆ ಅವಕಾಶ ಹೊಂದಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕ ಏಪ್ರಿಲ್ 24 (ಮಂಗಳವಾರ) ಅಂತ್ಯಗೊಂಡಿದೆ. ಹೀಗಾಗಿ ಹೊಸ ಪಕ್ಷ ಸ್ಥಾಪಿಸಿದರೂ ಉಪೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ.
ಹೊಸ ಪಕ್ಷ ಆರಂಭಿಸಲಿರುವ ಉಪೇಂದ್ರ, ಪಕ್ಷ ಸಂಘಟನೆಯ ಚಟುವಟಿಕೆಗೆ ಮುಂದಾಗಬೇಕಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಉಪೇಂದ್ರ ಅವರೊಂದಿಗೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮುನಿಸಿಕೊಂಡಿದ್ದರು. ಈಗ ತಮ್ಮದೇ ಪಕ್ಷ ಸ್ಥಾಪಿಸುತ್ತಿರುವ ಉಪ್ಪಿ, ಮುಂದೆ ಪಕ್ಷವನ್ನು ಹೇಗೆ ಕಟ್ಟುತ್ತಾರೆ ಎಂಬುದು ಮುಂದಿರುವ ಕುತೂಹಲ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications