ಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ

ಬೇಸಿಗೆ ರಜೆ ಅರಂಭವಾಯಿತೆಂದರೆ, ಅಪ್ಪ ಅಮ್ಮಂದಿರಿಗೆ, ತಮ್ಮ ಮಕ್ಕಳನ್ನು ಕಂಟ್ರೋಲು ಮಾಡುವುದು ಹೇಗಪ್ಪಾ ಅನ್ನುವ ಚಿಂತೆ ಶುರು. ಇತ್ತೀಚಿನ ವರುಷಗಳಲ್ಲಿ, ಪಾಶ್ಚಾತ್ಯ ಪ್ರಭಾವದಿಂದ ದೇಶದಾದ್ಯಂತ ಹುಟ್ಟಿಕೊಂಡಿರುವ ಸಮ್ಮರ್ ಕ್ಯಾಂಪುಗಳು, ಹೆತ್ತವರ ತಲೆಬಿಸಿ ಕಡಿಮೆ ಮಾಡಿವೆ.
ಬೇಸಿಗೆ ಶಿಬಿರ ಎಂದರೆ, ಬೇಸಿಗೆ ರಜೆಯಲ್ಲಿ ಹೆಚ್ಚಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ, ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ. ಇವುಗಳು ಅಟಗಳು, ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಒಳಗೊಂಡಿದೆ. ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಸಮಾಜಿಕ ಬೆಳವಣಿಗೆ ಮಾಡಿಸುವುದು, ಈ ತರಹದ ಶಿಬಿರಗಳ ಮುಖ್ಯ ಉದ್ದೇಶ.
ಬೇಸಿಗೆ ಶಿಬಿರಗಳು, ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಪ್ರತಿ ಬೇಸಿಗೆಯಲ್ಲೂ, ಅದೆಷ್ಟೋ ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಂಡು, ತಮ್ಮ ಜೀವನಾನುಭವ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸುವುದರಿಂದಾಗುವ ಅನುಕೂಲಗಳು ಬಹಳಷ್ಟು. ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು.. ಹೀಗೆ ಮಗುವೊಂದರ ನಿಜವಾದ ವಿಕಾಸದ ವೇದಿಕೆಯಾಗಬಲ್ಲವು ಬೇಸಿಗೆ ಶಿಬಿರಗಳು. ಇಲ್ಲಿ ಮಕ್ಕಳಿಗೆ ಅತ್ಯಂತ ಅಗತ್ಯವಾದ ಸ್ವಾತಂತ್ರ್ಯದ ಪರಿಚಯವಾಗುತ್ತದೆ. ತಾವಾಗಿಯೇ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಅರಿವಾಗುತ್ತದೆ. ತಂದೆ ತಾಯಿಗಳಿಲ್ಲದ ಸಂದರ್ಭದಲ್ಲಿ, ಹೇಗೆ ತಮ್ಮನ್ನು ತಾವು ಅರಿತುಕೊಳ್ಳಬೇಕೆಂಬುದು ತಿಳಿಯುತ್ತದೆ. ಹೊಸ ಜವಾಬ್ದಾರಿಗಳು ಬೆಳೆಯುತ್ತದೆ.
ಶಿಬಿರಗಳಲ್ಲಿ, ಕಲೆ-ಸಂಸ್ಕೃತಿಗಳ ವಿಚಾರಗಳು, ಅಟೋಟಗಳಲ್ಲಿ ಎಲ್ಲರೂ ಒಂದಾಗಿ ಪಾಲುಗೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ, ಒಂದು ಸಮುದಾಯದಲ್ಲಿ ಮಗು, ತಾನು ಹೇಗೆ ಇತರರೊಡನೆ ಬೆರೆಯಬೇಕು- ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತದೆ. ಸಣ್ಣಪುಟ್ಟ ಕೆಲಸಗಳ ಮೂಲಕ, ತನ್ನ ಪರಿಣತಿಯನ್ನೂ ಬೆಳಸಿಕೊಳ್ಳುತ್ತದೆ. ವಿನೂತನ ಅನುಭವಗಳು, ಮಕ್ಕಳಲ್ಲಿನ ಪರಿಣಿತಿಯನ್ನು ಬೆಳೆಸುತ್ತದೆ. ಇಲ್ಲಿ ಮಕ್ಕಳಿಗೆ ಪರಿಣತಿ ಹೆಚ್ಚಿಸುವ ಅಟಗಳು, ಇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗುತ್ತದೆ. ಇಲ್ಲಿನ ಕಲಿಕೆ, ಮುಂದಿನ ದಿನಗಳಲ್ಲಿ ಮಕ್ಕಳ ಅಸಕ್ತಿಗೆ ಹೊಸ ರೂಪ ನೀಡಬಹುದು.
ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ, ಅದೇ ಸ್ನೇಹಿತರನ್ನು ಹೊಂದಿದ್ದ ಮಗುವಿಗೆ, ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ, ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ, ತನ್ನ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಇಂತಹ ಕಡೆಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು, ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ.
ಮಕ್ಕಳು ಇಲ್ಲಿ ಬಹಳಷ್ಟು ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ, ತಮ್ಮ ಅಸಕ್ತಿಯೇನು ಎಂಬುದನ್ನು ಅರಿಯುತ್ತಾರೆ. ಅಲ್ಲಿ ಕಲಿಸುವ ಬೇರೆ ಬೇರೆ ಅಟಗಳಲ್ಲಿ, ಮೆದುಳಿನ ಕೆಲಸ ಹೆಚ್ಚಿಸುವ ಕ್ರಿಯೆಗಳಲ್ಲಿ ತಮಗೆ ಯಾವುದು ಇಷ್ಟ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದು, ಮುಂದೆ ಅವರ ಅಸಕ್ತಿಯ ಕ್ಷೇತ್ರವನ್ನು ಅಯ್ದುಕೊಳ್ಳಲು ಉಪಕಾರಿ. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಕೂಡ ಬೆಳೆಸುತ್ತವೆ. ಪ್ರತಿ ದಿನ ಕೇವಲ ಶೈಕ್ಷಣಿಕ ವಿಚಾರಗಳ ಸುತ್ತ ಸುತ್ತುತ್ತಿದ್ದ ಮನಸ್ಸಿಗೆ, ಹಿತಕಾರಕ ಎನ್ನಿಸುವ ಸರಳ ಚಟುವಟಿಕೆಗಳು, ಹೊಸ ಹುರುಪು ನೀಡುತ್ತದೆ. ಗುಂಪು ಚಟುವಟಿಕೆಗಳು ಮಕ್ಕಳಲ್ಲಿ ಕೂಡಲೇ ನಿರ್ಧಾರಗಳನ್ನು ತೆಗೆದುಕೊಳ್ಳುವ. ನಾಯಕತ್ವ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಇದು ಮುಂದಿನ ಬದುಕಿಗೆ ಸಹಕಾರಿ.
ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ, ಹೊಣೆಕಾರಿಕೆ ಅರಿತುಕೊಳ್ಳುವುದರಲ್ಲಿ, ಎಲ್ಲರ ಜೊತೆಗಿನ ಪಾಲ್ಗೊಳ್ಳುವಿಕೆಯಲ್ಲಿ, ಕರ್ತವ್ಯಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲೂ ಈ ಕ್ಯಾಂಪ್ ಗಳ ಮಹತ್ವ ಹೆಚ್ಚಿನದು. ಸ್ವಗೌರವ ಹೆಚ್ಚಿಸಿ, ಕೀಳರಿಮೆ ಹೋಗಲಾಡಿಸುವುದರಲ್ಲೂ ಇವುಗಳ ಪಾತ್ರ ಪ್ರಮುಖ. ಯಾವುದೇ ಜಾತಿ, ಧರ್ಮಗಳ ಹಂಗಿಲ್ಲದೇ, ಬೆರೆತು ಬಾಳುವುದನ್ನು ಕೂಡ ಈ ಶಿಬಿರಗಳ ಕಲಿಸುತ್ತವೆ. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ.
ಈ ಶಿಬಿರಗಳು ಶಿಕ್ಷಣ- ಅಂಕಗಳು- ಗ್ರೇಡ್ ಪದ್ಧತಿಯಿಂದ ಹೊರತಾಗಿರುವುದರಿಂದ, ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ವರುಷವಿಡೀ ಪರೀಕ್ಷೆಗಳ ಜಂಜಡದಿಂದ ನೊಂದ ಮನಸ್ಸಿಗೆ ಇವು ಸಹಾಯ ಮಾಡುತ್ತವೆ. ಕ್ಯಾಂಪ್ ಗಳಲ್ಲಿ ಭಾಗವಹಿಸುವುದರಿಂದ, ದೈಹಿಕ ಕ್ಷಮತೆ ಹೆಚ್ಚುತ್ತದೆ. ಹೊಸ ಬಗೆಯ ಅಟಗಳು, ಈಜು ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದರಿಂದ ಅರೋಗ್ಯ ಕೂಡ ವೃದ್ಧಿಸುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಅರಿತುಕೊಳ್ಳಲು ಇಂತಹ ಶಿಬಿರಗಳು ಸರಿಯಾದ ವೇದಿಕೆ ಒದಗಿಸಬಲ್ಲದು. ಕಲೆ, ಪೇಂಟಿಗ್, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳಿಗೆ ಸಾಧ್ಯವಾಗಬಹುದಾದ ಹೊಸ ನೆಲೆಗಟ್ಟನ್ನು ಒದಗಿಸಬಲ್ಲವು.
ಇಂದು ಭಿನ್ನ ಭಿನ್ನ ಬಗೆಯ ಬೇಸಿಗೆ ಶಿಬಿರಗಳು ನಡೆಯುತ್ತವೆ. ಕೇವಲ ಕ್ರೀಡೆಗೆ ಸಂಬಂಧಿಸಿದವು, ಕಲಿಕೆ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಬಲ್ಲವು ಹೀಗೆ ಮಕ್ಕಳ ಅಭಿರುಚಿಗೆ ತಕ್ಕ ಹಾಗಿನ ಬೇಸಿಗೆ ಶಿಬಿರಗಳು ಲಭ್ಯವಿದೆ. ಕಂಪ್ಯೂಟರ್, ಫೋಟೋಗ್ರಫಿ, ನಾಟಕ ಇತ್ಯಾದಿಗಳನ್ನು ಕಲಿಸುವ ಶಿಬಿರಗಳೂ ಇವೆ. ಇದುವರೆಗೆ ಕೇಳಿರದ, ನೋಡಿರದ, ಅನುಭವಿಸಿರದ ಹೊಸ ಅನುಭೂತಿಯನ್ನು ಮಕ್ಕಳಿಗೆ ನೀಡುತ್ತವೆ. ಹೊಸ ಪ್ರಯೋಗಗಳನ್ನು ಮಾಡಲು ಸಂಪೂರ್ಣ ಅನುಮತಿ ನೀಡುತ್ತವೆ. ಇಲ್ಲಿ ಮಕ್ಕಳಿಗೆ ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹ ದೊರಕುತ್ತದೆ. ಸರಿಯಾದ ಬೇಸಿಗೆ ಶಿಬಿರಗಳನ್ನು ಹುಡುಕಿ- (ಕಿಸೆಗೆ ಭಾರವಾಗದ ಹಾಗಿನವು ಮತ್ತು ನಿಜಕ್ಕೂ ಉಪಯೋಗಿಯಾಗಬಲ್ಲವು) ಮಕ್ಕಳನ್ನು ಸೇರಿಸಿ ನೋಡಿ- ಅವರ ಕ್ಷಿತಿಜ ವಿಸ್ತಾರವಾದೀತು.
ದಿನಗಳೆದಂತೆ, ಅಥವಾ ವರುಷಗಳು ಕಳೆದ ಹಾಗೆ, ನಿಮ್ಮ ಮಕ್ಕಳಿಗೆ ತಾವು ಹೋದ ಬೇಸಿಗೆ ಶಿಬಿರದ ನೆನಪು ಮಾಸಿಹೋಗಬಹುದು. ಅದರೆ, ಅಲ್ಲಿ ಕಲಿತ ವಿಚಾರಗಳು, ಮನಸಿನಾಳಕ್ಕಿಳಿದು, ಜೀವನವಿಡೀ ಜೊತೆ ನೀಡುತ್ತವೆ, ಅವರಿಗೆ ತಿಳಿಯದ ಹಾಗೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications