ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆ : ಲೇಖಕರ ಮಾತು
78 ವರ್ಷ ವಯಸ್ಸಿನ ಅಲನ್ ಟೇಯ್ಲರ್ ತನ್ನ ಆಹಾರ ಕ್ರಮವನ್ನು ಬದಲಾಯಿಸಿ ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಕ್ಯಾನ್ಸರನ್ನು ಹೊಡೆದೋಡಿಸಿದ. ಅಂತರ್ಜಾಲವನ್ನು ಶೋಧಿಸಿ ಅದರ ಆಧಾರದಲ್ಲಿ ತನ್ನ ಪಥ್ಯಾಹಾರವನ್ನು ಅಮೂಲಾಗ್ರವಾಗಿ ಬದಲಾಯಿಸಿದಾಗ ಅವನ ಸ್ಥಿತಿ ಆಶ್ಚರ್ಯಕರವಾಗಿ ಉತ್ತಮಗೊಂಡಿತು. ಮೇಲೆ ಕಾಣಿಸಿದ ಆಹಾರ ವಿಧಾನ ಹಾಗೂ ಔಷಧಿಗಳು ಎಲ್ಲರಲ್ಲಿಯೂ ಇದೇ ರೀತಿ ಧನಾತ್ಮಕವಾಗಿ ಫಲಕೊಡುವುದೇ ಇಲ್ಲವೇ ಎಂದು ಹೇಳಲಾಗದು. ಹಾಗೆಯೇ ಪ್ರತಿದಿನ ಅಧಿಕ ಸಂಖ್ಯೆಯ ಕರ್ಕ್ಯುಮಿನ್ ಮತ್ತು ಕಹಿಯಾದ ಅಪ್ರಿಕೋಟ್ ತಿರುಳಿನ ಸೇವನೆಯು ಕಷ್ಟಸಾಧ್ಯವಾದುದು. ಕೆಲವರಲ್ಲಿ ಇದು ಅಡ್ಡ ಪರಿಣಾಮವೂ ಉಂಟುಮಾಡಬಹುದು.
ದೊಡ್ಡ ಕರುಳಿನ ಕ್ಯಾನ್ಸರ್ ಹೆಚ್ಚು ಹೆಚ್ಚು ಮರುಕಳಿಸುತ್ತಿರುವುದರ ಮುಖ್ಯ ಕಾರಣ ಕೆಮೋಥೆರಪಿಯು ಕ್ಯಾನ್ಸರ್ ಆಕರ ಕೋಶಗಳನ್ನು ಸಂಪೂರ್ಣ ನಾಶಮಾಡುವುದರಲ್ಲಿ ವಿಫಲವಾಗುವುದು ಎನ್ನುತ್ತಾರೆ ಅಮೇರಿಕದ ಟೆಕ್ಸಾಸಿನ ಬಾಯ್ಲಾರ್ ಯುನಿವರ್ಸಿಟಿ ಮೆಡಿಕಲ್ ಸೆಂಟರಿನ ಎಪಿಜೆನೆಟಿಕ್ಸ್ ಮತ್ತು ಕ್ಯಾನ್ಸರ್ ಪ್ರಿವೆನ್ಶನ್ ಪಂಗಡದ ಮುಖ್ಯಸ್ಥರಾದ ಅಜಯ ಗೋಯಲ್. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯಲ್ಲಿ ಅಡಗಿ ಕುಳಿತುಕೊಳ್ಳುವ ಕೆಲವು ಕ್ಯಾನ್ಸರ್ ಆಕರ ಕೋಶಗಳು ಮುಂದೆ ವಿಜೃಂಭಿಸಿ ಕಾಯಿಲೆ ಮರುಕಳಿಸಲು ಕಾರಣವಾಗುತ್ತವೆ. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯ ಗಾತ್ರ ಬಹಳಷ್ಟು ಕುಗ್ಗುವುದರಿಂದ ಕಾಯಿಲೆ ಗುಣವಾಗುತ್ತಿದೆಯೆಂಬ ಕಲ್ಪನೆಯನ್ನು ಮೂಡಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಅಜಯ ಗೋಯಲ್ರವರು ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆಯ ದಾರಿ ಹುಡುಕುತ್ತಾ ಕೆಮೋ ಒಟ್ಟಿಗೆ ಅರಸಿನದಲ್ಲಿರುವ ಕರ್ಕ್ಯುಮಿನಿನ ಬಳಕೆಯ ಪರಿಣಾಮವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದರು. 5-FU ಎಂಬ ಕರುಳಿನ ಕ್ಯಾನ್ಸರಿಗೆ ಬಳಸುವ ಕೆಮೋ ಔಷಧಿಯು ಕ್ಯಾನ್ಸರ್ ಗಡ್ಡೆಯ ಗಾತ್ರವನ್ನು ಶೇ.50ಕ್ಕಿಂತ ಹೆಚ್ಚು ಕುಗ್ಗಿಸಿದರೂ ಕ್ಯಾನ್ಸರ್ ಆಕರ ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೆಮೋ ಚಿಕಿತ್ಸೆ ಮುಗಿದ ನಂತರ ಹೆಚ್ಚು ತೀವ್ರವಾಗಿ ಕ್ಯಾನ್ಸರ್ ಹಬ್ಬಲು ಕಾರಣವಾಗುತ್ತದೆ ಎನ್ನುತ್ತಾರೆ ಅವರು.
ಕರ್ಕ್ಯುಮಿನ್ ಬಳಸಿದಾಗ ಬೇಕಾಗುವ ಕೆಮೋದ ಪ್ರಮಾಣವೂ ಕಡಿಮೆಯಾಗುತ್ತದೆ ಮತ್ತು ಕೆಮೋ ಹೆಚ್ಚು ಪರಿಣಾಮಕಾರಿಯಾಗಿ ಈ ಆಕರ ಕೋಶಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಕರ್ಕ್ಯುಮಿನ್ನ ಸಮಕ್ಷದಲ್ಲಿ ಕ್ಯಾನ್ಸರ್ ಆಕರ ಕೋಶಗಳು ಕೆಮೋಗೆ ಹೆಚ್ಚು ಸೂಕ್ಷ್ಮಗ್ರಾಹಿಯಾಗಿ ವರ್ತಿಸುತ್ತವೆ. ಕೆಮೋಥೆರಪಿಯ ಮೊದಲು ಕರ್ಕ್ಯುಮಿನ್ ಬಳಸುವುದರಿಂದ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಈ ಹಿಂದೆ ಸುಮಾ ಎಂಬ ತರುಣಿಯು ಅರಶಿನದ ಸೇವನೆಯಿಂದ ನಾನ್ ಹೋಡ್ಜಿನ್ಸ್ ಲಿಂಫೋಮಾದಿಂದ ಮುಕ್ತಿ ಪಡೆದಿದ್ದನ್ನು ತಿಳಿಸಿದ್ದೆ. ಮೇಲಿನ ವರದಿ ಇದನ್ನು ಮತ್ತಷ್ಟು ದೃಢಪಡಿಸುತ್ತಿದೆ. (ಅಜಯ್ ಗೋಯಲ್ರವರು ಅರಶಿನದ ಆವಶ್ಯಕ ತೈಲಗಳನ್ನೊಳಗೊಂಡ ಮತ್ತು ಉತ್ತಮ ಹೀರುವಿಕೆ ಗುಣವುಳ್ಳ 'BCM-95 ಕರ್ಕ್ಯುಮಿನ್' ಎಂಬ ಉತ್ಪನ್ನವನ್ನು ತಮ್ಮ ಅಧ್ಯಯನಕ್ಕೆ ಬಳಸಿರುತ್ತಾರೆ). ಇದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಶಿನವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಯಬಹುದು.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications