ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆ : ಲೇಖಕರ ಮಾತು
78 ವರ್ಷ ವಯಸ್ಸಿನ ಅಲನ್ ಟೇಯ್ಲರ್ ತನ್ನ ಆಹಾರ ಕ್ರಮವನ್ನು ಬದಲಾಯಿಸಿ ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಕ್ಯಾನ್ಸರನ್ನು ಹೊಡೆದೋಡಿಸಿದ. ಅಂತರ್ಜಾಲವನ್ನು ಶೋಧಿಸಿ ಅದರ ಆಧಾರದಲ್ಲಿ ತನ್ನ ಪಥ್ಯಾಹಾರವನ್ನು ಅಮೂಲಾಗ್ರವಾಗಿ ಬದಲಾಯಿಸಿದಾಗ ಅವನ ಸ್ಥಿತಿ ಆಶ್ಚರ್ಯಕರವಾಗಿ ಉತ್ತಮಗೊಂಡಿತು. ಮೇಲೆ ಕಾಣಿಸಿದ ಆಹಾರ ವಿಧಾನ ಹಾಗೂ ಔಷಧಿಗಳು ಎಲ್ಲರಲ್ಲಿಯೂ ಇದೇ ರೀತಿ ಧನಾತ್ಮಕವಾಗಿ ಫಲಕೊಡುವುದೇ ಇಲ್ಲವೇ ಎಂದು ಹೇಳಲಾಗದು. ಹಾಗೆಯೇ ಪ್ರತಿದಿನ ಅಧಿಕ ಸಂಖ್ಯೆಯ ಕರ್ಕ್ಯುಮಿನ್ ಮತ್ತು ಕಹಿಯಾದ ಅಪ್ರಿಕೋಟ್ ತಿರುಳಿನ ಸೇವನೆಯು ಕಷ್ಟಸಾಧ್ಯವಾದುದು. ಕೆಲವರಲ್ಲಿ ಇದು ಅಡ್ಡ ಪರಿಣಾಮವೂ ಉಂಟುಮಾಡಬಹುದು.
ದೊಡ್ಡ ಕರುಳಿನ ಕ್ಯಾನ್ಸರ್ ಹೆಚ್ಚು ಹೆಚ್ಚು ಮರುಕಳಿಸುತ್ತಿರುವುದರ ಮುಖ್ಯ ಕಾರಣ ಕೆಮೋಥೆರಪಿಯು ಕ್ಯಾನ್ಸರ್ ಆಕರ ಕೋಶಗಳನ್ನು ಸಂಪೂರ್ಣ ನಾಶಮಾಡುವುದರಲ್ಲಿ ವಿಫಲವಾಗುವುದು ಎನ್ನುತ್ತಾರೆ ಅಮೇರಿಕದ ಟೆಕ್ಸಾಸಿನ ಬಾಯ್ಲಾರ್ ಯುನಿವರ್ಸಿಟಿ ಮೆಡಿಕಲ್ ಸೆಂಟರಿನ ಎಪಿಜೆನೆಟಿಕ್ಸ್ ಮತ್ತು ಕ್ಯಾನ್ಸರ್ ಪ್ರಿವೆನ್ಶನ್ ಪಂಗಡದ ಮುಖ್ಯಸ್ಥರಾದ ಅಜಯ ಗೋಯಲ್. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯಲ್ಲಿ ಅಡಗಿ ಕುಳಿತುಕೊಳ್ಳುವ ಕೆಲವು ಕ್ಯಾನ್ಸರ್ ಆಕರ ಕೋಶಗಳು ಮುಂದೆ ವಿಜೃಂಭಿಸಿ ಕಾಯಿಲೆ ಮರುಕಳಿಸಲು ಕಾರಣವಾಗುತ್ತವೆ. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯ ಗಾತ್ರ ಬಹಳಷ್ಟು ಕುಗ್ಗುವುದರಿಂದ ಕಾಯಿಲೆ ಗುಣವಾಗುತ್ತಿದೆಯೆಂಬ ಕಲ್ಪನೆಯನ್ನು ಮೂಡಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಅಜಯ ಗೋಯಲ್ರವರು ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆಯ ದಾರಿ ಹುಡುಕುತ್ತಾ ಕೆಮೋ ಒಟ್ಟಿಗೆ ಅರಸಿನದಲ್ಲಿರುವ ಕರ್ಕ್ಯುಮಿನಿನ ಬಳಕೆಯ ಪರಿಣಾಮವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದರು. 5-FU ಎಂಬ ಕರುಳಿನ ಕ್ಯಾನ್ಸರಿಗೆ ಬಳಸುವ ಕೆಮೋ ಔಷಧಿಯು ಕ್ಯಾನ್ಸರ್ ಗಡ್ಡೆಯ ಗಾತ್ರವನ್ನು ಶೇ.50ಕ್ಕಿಂತ ಹೆಚ್ಚು ಕುಗ್ಗಿಸಿದರೂ ಕ್ಯಾನ್ಸರ್ ಆಕರ ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೆಮೋ ಚಿಕಿತ್ಸೆ ಮುಗಿದ ನಂತರ ಹೆಚ್ಚು ತೀವ್ರವಾಗಿ ಕ್ಯಾನ್ಸರ್ ಹಬ್ಬಲು ಕಾರಣವಾಗುತ್ತದೆ ಎನ್ನುತ್ತಾರೆ ಅವರು.
ಕರ್ಕ್ಯುಮಿನ್ ಬಳಸಿದಾಗ ಬೇಕಾಗುವ ಕೆಮೋದ ಪ್ರಮಾಣವೂ ಕಡಿಮೆಯಾಗುತ್ತದೆ ಮತ್ತು ಕೆಮೋ ಹೆಚ್ಚು ಪರಿಣಾಮಕಾರಿಯಾಗಿ ಈ ಆಕರ ಕೋಶಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಕರ್ಕ್ಯುಮಿನ್ನ ಸಮಕ್ಷದಲ್ಲಿ ಕ್ಯಾನ್ಸರ್ ಆಕರ ಕೋಶಗಳು ಕೆಮೋಗೆ ಹೆಚ್ಚು ಸೂಕ್ಷ್ಮಗ್ರಾಹಿಯಾಗಿ ವರ್ತಿಸುತ್ತವೆ. ಕೆಮೋಥೆರಪಿಯ ಮೊದಲು ಕರ್ಕ್ಯುಮಿನ್ ಬಳಸುವುದರಿಂದ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಈ ಹಿಂದೆ ಸುಮಾ ಎಂಬ ತರುಣಿಯು ಅರಶಿನದ ಸೇವನೆಯಿಂದ ನಾನ್ ಹೋಡ್ಜಿನ್ಸ್ ಲಿಂಫೋಮಾದಿಂದ ಮುಕ್ತಿ ಪಡೆದಿದ್ದನ್ನು ತಿಳಿಸಿದ್ದೆ. ಮೇಲಿನ ವರದಿ ಇದನ್ನು ಮತ್ತಷ್ಟು ದೃಢಪಡಿಸುತ್ತಿದೆ. (ಅಜಯ್ ಗೋಯಲ್ರವರು ಅರಶಿನದ ಆವಶ್ಯಕ ತೈಲಗಳನ್ನೊಳಗೊಂಡ ಮತ್ತು ಉತ್ತಮ ಹೀರುವಿಕೆ ಗುಣವುಳ್ಳ 'BCM-95 ಕರ್ಕ್ಯುಮಿನ್' ಎಂಬ ಉತ್ಪನ್ನವನ್ನು ತಮ್ಮ ಅಧ್ಯಯನಕ್ಕೆ ಬಳಸಿರುತ್ತಾರೆ). ಇದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಶಿನವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಯಬಹುದು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications