ಜನಪ್ರಿಯ 25 ಹೊಸ ವರ್ಷದ ರೆಸಲೂಷನ್ಸ್
ಒಂದು ಕ್ಯಾಲೆಂಡರ್ ವರ್ಷ ಉರುಳಿ ಹೊಸ ಕ್ಯಾಲೆಂಡರ ಗೋಡೆ ಏರಿದೆ. ಇನ್ನೊಂದು ವರ್ಷ ಕಳೆದು ಹೋಯಿತಲ್ಲ ಎಂಬ ವ್ಯಥೆ ಕೆಲವರಿಗಾದರೆ ಹೊಸ ವರ್ಷದಲ್ಲಿ ಹೊಸ ಸಾಧನೆ ಮಾಡಿದರಾಯಿತು ಎಂಬ ಛಲ ಕೆಲವರಿಗೆ.
ಇದೇ ಉದ್ದೇಶದಿಂದ ಅನೇಕರು ಹೊಸ ವರ್ಷಕ್ಕೆ ಹೊಸ ರೆಸಲೂಷನ್ ತೆಗೆದುಕೊಳ್ಳುವುದು ವಾಡಿಕೆ. ಹೊಸ ವರ್ಷಕ್ಕೆ ನಿಮ್ಮ ಹೊಚ್ಚಹೊಸ ರೆಸಲೂಷನ್ ಯಾವುದು? ನಮಗೆ ಗೊತ್ತಾಗಲಿಲ್ಲವೇ.
ಕಾಲದೇಶ ವರ್ತಮಾನಗಳನ್ನು ಗಮನದಲ್ಲಿಟ್ಟು ಹೊಸ ವರ್ಷದ 25 ಸಂಕಲ್ಪಗಳನ್ನು ಜಾಗರೂಕತೆಯಿಂದ ಪಟ್ಟಿಮಾಡಲಾಗಿದೆ. ಇವು ನಿಮಗೂ ಇಷ್ಟವಾಗುವುದೆಂಬ ಸಂಕಲ್ಪ ನಮ್ಮದು.
ಕಳೆದ ಎರಡು ದಿನಗಳಲ್ಲಿ ನಮ್ಮ ಕಣ್ಣು ಕಿವಿಗೆ ಬಿದ್ದ ಕೆಲವು ಪಾಪುಲರ್ ನ್ಯೂ ಇಯರ್ ರೆಸಲೂಷನ್ನುಗಳು ಹೀಗಿವೆ. ನೀವು ಓದಿ. ನೀವು ಕೇಳಿದ ಅಥವಾ ಕೈಗೊಂಡ ರೆಸಲೂಶನ್ನುಗಳನ್ನೂ ಇಲ್ಲಿ ಪಟ್ಟಿ ಮಾಡಬಹುದು. ಹ್ಯಾಪಿ ನ್ಯೂ ಇಯರ್!

* ಕುಡಿಯುವುದನ್ನು ಬಿಡುತ್ತೇನೆ.
* ಸಿಗರೇಟು ಸೇದುವುದನ್ನು ನಿಲ್ಲಿಸುತ್ತೇನೆ.
* ಕಚೇರಿಗೆ ಟೈಮಿಗೆ ಸರಿಯಾಗಿ ಹೋಗುತ್ತೇನೆ.
* ಹೆಲ್ಮೆಟ್ ಧರಿಸದೆ ಗಾಡಿ ಓಡಿಸುವುದಿಲ್ಲ.
* ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದಿಲ್ಲ.
* ಹಣ ಪೋಲು ಮಾಡುವುದಿಲ್ಲ.
* ಈ ವರ್ಷ ಭಾರತಕ್ಕೆ ತಪ್ಪದೆ ಹೋಗುತ್ತೇನೆ.
* ಹೆಂಡತಿಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತೇನೆ.
* ಗಂಡ ಹಾಕಿದ ಗೆರೆ ದಾಟುವುದಿಲ್ಲ.
* ಕನ್ನಡ ಸಿನೆಮಾ ತಪ್ಪದೆ ನೋಡುತ್ತೇನೆ.
* ದೀನದಲಿತರಿಗೆ ನೆರವಾಗುತ್ತೇನೆ.
* ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ.
* ಒಂದು ಪೈಸಾ ಲಂಚ ಕೊಡಲ್ಲ.
* ಇವತ್ತಿಂದ ಜಗಳ ಕಾಯುವುದು ನಿಲ್ಲಿಸುತ್ತೇನೆ.
* ಪಾಸ್ ಪೋರ್ಟ್ ಮಾಡಿಸಲೇಬೇಕು.
* ನಾಳೆ ಕೆಲಸ ಇಂದೇ ಮಾಡುತ್ತೇನೆ.
* ತೂಕ ಕಡಿಮೆ ಮಾಡಿಕೊಳ್ಳುತ್ತೇನೆ.
* ಕಳೆದುಹೋದ ಗೆಳತಿಯನ್ನು ಹುಡುಕುವುದು ಇವತ್ತಿನಿಂದಲೇ ಸ್ಟಾಪ್.
* ದೂರದ ಊರಿಗೆ ಪ್ರವಾಸ ಕೈಗೊಳ್ಳುತ್ತೇನೆ.
* ಅವಳಿಗೆ ತಕ್ಕ ಪಾಠ ಕಲಿಸುತ್ತೇನೆ
* ಇನ್ನೊಬ್ಬರ ತಪ್ಪು ತಿದ್ದುವುದಿಲ್ಲ.
* ಮದುವೆ ಆಗೇ ಆಗುತ್ತೇನೆ.
* ಹುಟ್ಟಿದ ಊರಿಗೆ ಮರಳುತ್ತೇನೆ.
* ಬೇರೆ ಕೆಲಸ ಹುಡುಕುತ್ತೇನೆ.
* ಬೇಗ ಮಲಗಿ ಬೇಗ ಏಳುತ್ತೇನೆ.
More From
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications