ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಬಾವುಟ
ಹೋದ ವರ್ಷ ಅಂದರೆ 2011ರ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನೆಲಮಂಗಲದ ವಿನೋದ್ ಕುಮಾರ್ ಎಂಬುವವರು ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಕನ್ನಡ ಬಾವುಟವನ್ನು ತಯಾರಿಸಿ ಅನಾವರಣಗೊಳಿಸಿದ್ದರು. ಜನ ನೋಡಿ ಸಂಭ್ರಮ ಪಟ್ಟಿದ್ದರು. ಇಂಥ ಧ್ವಜವನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಸಂತಸದಿಂದ ಬೀಗಿದ್ದರು.
ಬಟರ್ ಸಿಲ್ಕ್ ನಿಂದ ತಯಾರಿಸಿದ 100 ಅಡಿ ಎತ್ತರ, 150 ಅಡಿ ಉದ್ದದ ಕನ್ನಡ ಬಾವುಟ ವಿನೋದ್ ಕುಮಾರ್ ಕುಟುಂಬದ ಕನ್ನಡ ಪ್ರೀತಿಗೆ ದ್ಯೋತಕವಾಗಿತ್ತು. ಒಟ್ಟು 2000 ಮೀಟರ್ ಬಟ್ಟೆಯನ್ನು ಬಳಸಿ ತಯಾರಿಸಿದ ಕೆಂಪು ಹಳದಿಯ ಬಾವುಟ ಹೊಲಿಯುವುದಕ್ಕೆ ಕುಟುಂಬದ ಎಲ್ಲರೂ ಕೈಜೋಡಿಸಿದ್ದು ಗಮನಾರ್ಹ.
ಈ ಪಾಟಿ ದೊಡ್ಡ ಬಾವುಟವನ್ನು ಹಾರಿಸುವುದು ಕಷ್ಟ. ಅದಕ್ಕೆ ವಿನೋದ್ ಕುಮಾರ್ ಒಂದು ಪ್ಲಾನ್ ಮಾಡಿದ್ದರು. 750 ಶಾಲಾ ಬಾಲಕಿಯರ ತಂಡ ರಚಿಸಿ ಸಾಮೂಹಿಕ ಧ್ವಜಾರೋಹಣ ಮಾಡಿ ಕನ್ನಡ ಪ್ರಪಂಚದ ಗಮನ ಸೆಳೆದಿದ್ದರು. ಅಂದಹಾಗೆ, ಈ ಬಾವುಟ ತಯಾರಿಸಲು ಅವರಿಗೆ ತಗುಲಿದ ವೆಚ್ಚ 2 ಲಕ್ಷ ರೂಪಾಯಿ.
2012ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ ವಿನೋದ್ ಕುಮಾರ್ ಅವರನ್ನು ಒನ್ಇಂಡಿಯ ಕನ್ನಡ ಪ್ರತಿನಿಧಿ ಭೇಟಿಯಾಗಿದ್ದರು. ಗತವೈಭವವನ್ನು ಮೆಲಕು ಹಾಕಿದ ಅವರು ಈ ಬಾವುಟ ನಮ್ಮ ಕುಟುಂಬದ ಜೀವಮಾನದ ಶ್ರೇಷ್ಠ ಸಾಧನೆ ಎಂದು ಹೇಳಿದರು.
ಈ ವರ್ಷದ ರಾಜ್ಯೋತ್ಸವಕ್ಕೆ ವಿನೋದ್ ಕುಮಾರ್ ವಿಶೇಷ ಕಾರ್ಯಕ್ರಮವನ್ನೇನೂ ಹಾಕಿಕೊಂಡಿಲ್ಲ. ಏನಾದರೂ ಹೊಸದನ್ನು ಮಾಡುವ ಬಯಕೆ ಅವರಿಗಿದ್ದೇ ಇದೆ. ಆದರೆ, ಪ್ರತೀವರ್ಷ ಲಕ್ಷಾಂತರ ರು. ಬಂಡವಾಳ ತೊಡಗಿಸುವ ಸ್ಥಿತಿಯಲ್ಲಿ ಅವರಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ನೆಲಮಂಗಲದಲ್ಲಿ ನಾಟ್ಯಭೂಷಣ ಕಲಾಕೇಂದ್ರ ನಡೆಸುತ್ತಿದ್ದಾರೆ. ಆಸಕ್ತರಿಗೆ ಭರತನಾಟ್ಯ ಹೇಳಿಕೊಡುವ ಶಾಲೆ ಅದಾಗಿದೆ.
ಯಾರೇ ಆಗಲಿ, ಕನ್ನಡ ಪ್ರೀತಿಗಾಗಿ ಪ್ರತೀವರ್ಷ ಭರತನಾಟ್ಯ ಮಾಡುವುದಕ್ಕೆ ಆಗಲ್ಲ. ಏನೇ ಆಗಲಿ, ವಿನೋದ್ ಕುಮಾರ್ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನಮ್ಮ ಕಡೆಯಿಂದ 2012ರ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ವಿನೋದ್ ಅವರ ಈಮೇಲ್ ವಿಳಾಸ : [email protected]
ಬೃಹತ್ ಕನ್ನಡ ಬಾವುಟ ನೋಡಲು ಇಲ್ಲಿ ಕ್ಲಿಕ್ಕಿಸಿ. [ತುಮಕೂರಿನ ಮತ್ತೊಬ್ಬ ಸಾಧಕ]
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ













Click it and Unblock the Notifications