ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಬಾವುಟ
ಹೋದ ವರ್ಷ ಅಂದರೆ 2011ರ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನೆಲಮಂಗಲದ ವಿನೋದ್ ಕುಮಾರ್ ಎಂಬುವವರು ಕನ್ನಡ ಜಗತ್ತಿನ ಅತ್ಯಂತ ದೊಡ್ಡ ಕನ್ನಡ ಬಾವುಟವನ್ನು ತಯಾರಿಸಿ ಅನಾವರಣಗೊಳಿಸಿದ್ದರು. ಜನ ನೋಡಿ ಸಂಭ್ರಮ ಪಟ್ಟಿದ್ದರು. ಇಂಥ ಧ್ವಜವನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಸಂತಸದಿಂದ ಬೀಗಿದ್ದರು.
ಬಟರ್ ಸಿಲ್ಕ್ ನಿಂದ ತಯಾರಿಸಿದ 100 ಅಡಿ ಎತ್ತರ, 150 ಅಡಿ ಉದ್ದದ ಕನ್ನಡ ಬಾವುಟ ವಿನೋದ್ ಕುಮಾರ್ ಕುಟುಂಬದ ಕನ್ನಡ ಪ್ರೀತಿಗೆ ದ್ಯೋತಕವಾಗಿತ್ತು. ಒಟ್ಟು 2000 ಮೀಟರ್ ಬಟ್ಟೆಯನ್ನು ಬಳಸಿ ತಯಾರಿಸಿದ ಕೆಂಪು ಹಳದಿಯ ಬಾವುಟ ಹೊಲಿಯುವುದಕ್ಕೆ ಕುಟುಂಬದ ಎಲ್ಲರೂ ಕೈಜೋಡಿಸಿದ್ದು ಗಮನಾರ್ಹ.
ಈ ಪಾಟಿ ದೊಡ್ಡ ಬಾವುಟವನ್ನು ಹಾರಿಸುವುದು ಕಷ್ಟ. ಅದಕ್ಕೆ ವಿನೋದ್ ಕುಮಾರ್ ಒಂದು ಪ್ಲಾನ್ ಮಾಡಿದ್ದರು. 750 ಶಾಲಾ ಬಾಲಕಿಯರ ತಂಡ ರಚಿಸಿ ಸಾಮೂಹಿಕ ಧ್ವಜಾರೋಹಣ ಮಾಡಿ ಕನ್ನಡ ಪ್ರಪಂಚದ ಗಮನ ಸೆಳೆದಿದ್ದರು. ಅಂದಹಾಗೆ, ಈ ಬಾವುಟ ತಯಾರಿಸಲು ಅವರಿಗೆ ತಗುಲಿದ ವೆಚ್ಚ 2 ಲಕ್ಷ ರೂಪಾಯಿ.
2012ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ ವಿನೋದ್ ಕುಮಾರ್ ಅವರನ್ನು ಒನ್ಇಂಡಿಯ ಕನ್ನಡ ಪ್ರತಿನಿಧಿ ಭೇಟಿಯಾಗಿದ್ದರು. ಗತವೈಭವವನ್ನು ಮೆಲಕು ಹಾಕಿದ ಅವರು ಈ ಬಾವುಟ ನಮ್ಮ ಕುಟುಂಬದ ಜೀವಮಾನದ ಶ್ರೇಷ್ಠ ಸಾಧನೆ ಎಂದು ಹೇಳಿದರು.
ಈ ವರ್ಷದ ರಾಜ್ಯೋತ್ಸವಕ್ಕೆ ವಿನೋದ್ ಕುಮಾರ್ ವಿಶೇಷ ಕಾರ್ಯಕ್ರಮವನ್ನೇನೂ ಹಾಕಿಕೊಂಡಿಲ್ಲ. ಏನಾದರೂ ಹೊಸದನ್ನು ಮಾಡುವ ಬಯಕೆ ಅವರಿಗಿದ್ದೇ ಇದೆ. ಆದರೆ, ಪ್ರತೀವರ್ಷ ಲಕ್ಷಾಂತರ ರು. ಬಂಡವಾಳ ತೊಡಗಿಸುವ ಸ್ಥಿತಿಯಲ್ಲಿ ಅವರಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ನೆಲಮಂಗಲದಲ್ಲಿ ನಾಟ್ಯಭೂಷಣ ಕಲಾಕೇಂದ್ರ ನಡೆಸುತ್ತಿದ್ದಾರೆ. ಆಸಕ್ತರಿಗೆ ಭರತನಾಟ್ಯ ಹೇಳಿಕೊಡುವ ಶಾಲೆ ಅದಾಗಿದೆ.
ಯಾರೇ ಆಗಲಿ, ಕನ್ನಡ ಪ್ರೀತಿಗಾಗಿ ಪ್ರತೀವರ್ಷ ಭರತನಾಟ್ಯ ಮಾಡುವುದಕ್ಕೆ ಆಗಲ್ಲ. ಏನೇ ಆಗಲಿ, ವಿನೋದ್ ಕುಮಾರ್ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನಮ್ಮ ಕಡೆಯಿಂದ 2012ರ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ವಿನೋದ್ ಅವರ ಈಮೇಲ್ ವಿಳಾಸ : [email protected]
ಬೃಹತ್ ಕನ್ನಡ ಬಾವುಟ ನೋಡಲು ಇಲ್ಲಿ ಕ್ಲಿಕ್ಕಿಸಿ. [ತುಮಕೂರಿನ ಮತ್ತೊಬ್ಬ ಸಾಧಕ]
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ













Click it and Unblock the Notifications