ನಿಮ್ಮ ಕಚೇರಿಯಲ್ಲೂ ಕುದುರೆ ಹಂದಿ ಇದಾವಾ?
ಇಂದು ಬೆಳಗ್ಗೆ ಮಿಂಚಂಚೆ ಬಾಗಿಲು ತಟ್ಟಿದಾಗ ನನ್ನ ಗಮನ ಅಪಹರಿಸಿದ subject line ಹಂದಿ ಮತ್ತು ಕುದುರೆ. ಕೂಡಲೆ ತೆರೆದು ನೋಡಿದೆ. ಅದೊಂದು ಸಣ್ಣ ಕಥೆ. ಚೆನ್ನಾಗಿದೆ. ಚೆನ್ನಾಗಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದು ಚೆನ್ನ ಎಂದು ಕಥೆಯನ್ನು ಪ್ರಕಟಿಸುತ್ತಿದ್ದೇನೆ. ಕಥೆ ಕಳಿಸಿದವರು, ಪ್ರಭುಪ್ರಸಾದ್ ನಡುತೋಟ, ಶೃಂಗೇರಿ - ಸಂಪಾದಕ.
ಒಬ್ಬ ಜಮೀನುದಾರನ ಬಳಿ ಅನೇಕ ತಳಿಯ ಕುದುರೆಗಳಿದ್ದವು. ಬೇರೆ ಬೇರೆ ತರಹದ ಕುದುರೆಗಳನ್ನು ಖರೀದಿಸಿ ಸಂಗ್ರಹಿಸುವುದು ಅವನ ನೆಚ್ಚಿನ ಹವ್ಯಾಸವಾಗಿತ್ತು. ಅವನ ನೆರೆಯವನ ಬಳಿ, ಅವನ ಹತ್ತಿರ ಇರದ, ಒಂದು ವಿಶೇಷ ಜಾತಿಯ ಕುದುರೆಯಿತ್ತು. ಅದರ ಮೇಲೆ ಅವನ ಕಣ್ಣು ಬಿತ್ತು.
ಹಾಗಾಗಿ ನೆರೆಯವನನ್ನು ತುಂಬಾ ಪೀಡಿಸಿ, ಹೆಚ್ಚಿನ ಬೆಲೆ ತೆತ್ತು ಅದನ್ನು ಕೊಂಡುಕೊಂಡನು. ಆದರೆ ದುರ್ದೈವವಶಾತ್ ಕೆಲವೇ ದಿನಗಳಲ್ಲಿ ಆ ಕುದುರೆಯು ಕಾಯಿಲೆ ಬಿತ್ತು. ಆಗ ಅಲ್ಲಿಗೆ ಬಂದು ಪರಿಶೀಲಿಸಿದ ಪಶುವೈದ್ಯರು ಆ ಕುದುರೆಗೆ ವೈರಾಣು ಜ್ವರ ಬಂದಿದೆಯೆಂದೂ, ಇನ್ನೂ ಮೂರು ದಿನಗಳ ಕಾಲ ಅದರ ಬಗ್ಗೆ ನಿಗಾ ವಹಿಸಬೇಕೆಂದೂ ಜಮೀನುದಾರನರಿಗೆ ತಿಳಿಸಿದರು.

ಅಲ್ಲದೇ, ಅಕಸ್ಮಾತ್ ಮೂರು ದಿನಗಳಲ್ಲಿ ಅದು ಗುಣಮುಖವಾಗದಿದ್ದಲ್ಲಿ, ಅದರಿಂದ ಬೇರೆ ಕುದುರೆಗಳಿಗೆ ಈ ರೋಗ ದಾಟುವ ಸಂಭವವಿರುವುದರಿಂದ, ಅದನ್ನು ಸಾಯಿಸಬೇಕಾಗುವುದೆಂದೂ ಹೇಳಿದರು. ಅವರಿಬ್ಬರ ಮಾತುಕತೆಯನ್ನು ಅಲ್ಲಿಯೇ ಇದ್ದ ಹಂದಿಯೊಂದು ಕೇಳಿಸಿಕೊಂಡಿತು.
ನಂತರ ಅದು ಕುದುರೆಯ ಬಳಿ ಹೋಗಿ ಹೀಗೆಂದಿತು: "ಗೆಳೆಯನೇ! ಬೇಗ ಹುಶಾರಾಗು. ಇಲ್ಲವಾದಲ್ಲಿ ಅವರು ನಿನ್ನನ್ನು ಕೊಂದುಬಿಡುತ್ತಾರೆ." ಮಾರನೆಯ ದಿನ ಮತ್ತೆ ಆ ವೈದ್ಯರು ಬಂದು ಔಷಧಿ ಕೊಟ್ಟು ಹೋದರು. ತರುವಾಯ ಆ ಹಂದಿ ಮತ್ತೆ ಕುದುರೆಯಿದ್ದಲ್ಲಿ ಬಂದು "ಮಿತ್ರಾ.. ನೀನು ಏಳದಿದ್ದಲ್ಲಿ ನಿನ್ನ ಕೊನೆಯಾಗಿಬಿಡುತ್ತದೆ. ಎದ್ದು ಓಡಾಡಲು ಪ್ರಯತ್ನಿಸು. ನಾನು ನಿನಗೆ ಸಹಾಯ ಮಾಡುತ್ತೇನೆ. ಹಾ.. ಈಗ ಏಳು! ಒಂದು, ಎರಡು, ಮೂರು.. ತಯಾರಾಗು." ಎಂದು ಹುರಿದುಂಬಿಸಿತು. ಆದರೆ ಆ ಕುದುರೆಗೆ ಏಳಲು ಸಾಧ್ಯವಾಗಲೇ ಇಲ್ಲ.
ನಂತರದ ದಿನ ವೈದ್ಯರು ಬಂದಾಗಲೂ ಅದರ ಪರಿಸ್ಥಿತಿಯೇನೂ ಸುಧಾರಿಸಿರಲಿಲ್ಲ. ಹಾಗಾಗಿ ಅವರು "ಇದರಿಂದ ಬೇರೆ ಕುದುರೆಗಳಿಗೆ ಈ ರೋಗ ಹರಡುವ ಸಂಭವವಿದೆ. ನಾಳೆ ಇದನ್ನು ಸಾಯಿಸಿಬಿಡೋಣ" ಎಂದು ಹೇಳಿ ವಾಪಸಾದರು.
ಅವರು ತೆರಳಿದ ತರುವಾಯ ಅಲ್ಲಿಗೆ ಬಂದ ಹಂದಿ ಕುದುರೆಯನ್ನುದ್ದೇಶಿಸಿ "ಇದು ನಿನ್ನ ಮಾಡು ಇಲ್ಲವೇ ಮಡಿ ಹೋರಾಟ. ಇವತ್ತು ನೀನು ಎದ್ದು ಓಡಾಡದಿದ್ದರೆ, ಇನ್ನೆಂದೂ ನಿನ್ನಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಹಾ! ಹಾಗೆ ಏಳು! ಪ್ರಯತ್ನಿಸು! ನಿನಗೆ ಇದು ಅಸಾಧ್ಯವೇನಲ್ಲ." ಎಂದು ಪ್ರೋತ್ಸಾಹಿಸಿ, ಆ ಕುದುರೆ ಓಡಾಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಅಕಸ್ಮಾತ್ತಾಗಿ ಅಲ್ಲಿಗೆ ಬಂದ ಜಮೀನುದಾರನು ಕುದುರೆ ಗುಣಮುಖವಾಗಿರುವುದನ್ನು ಕಂಡು "ಆಹಾ! ಎಂತಹಾ ವಿಸ್ಮಯ.. ನನ್ನ ಕುದುರೆ ಗುಣಮುಖವಾಗಿದೆ. ಇದಕ್ಕಾಗಿ ಒಂದು ಔತಣವನ್ನೇ ಏರ್ಪಡಿಸೋಣ. ಈ ಕೊಬ್ಬಿರುವ ಹಂದಿಯನ್ನೇ ಕಡಿದು ಭರ್ಜರಿ ಭೋಜನ ಮಾಡೋಣ!" ಎಂದು ಉದ್ಗರಿಸಿದನು.
ನೀತಿ : ಇದು ಸಾಧಾರಣವಾಗಿ ಎಲ್ಲಾ ಸಂಸ್ಥೆಗಳಲ್ಲಿ ಜರುಗುವ ವಿದ್ಯಮಾನವಾಗಿದೆ. ಯಾರು ನಿಜವಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆನ್ನುವುದು ತಿಳಿಯುವುದೇ ಇಲ್ಲ.
[ಈ ಮಾದರಿಯ ಕಥೆಗಳು ಎಲ್ಲ ಭಾಷೆಗಳಲ್ಲಿ ಸಿಕ್ತಾವೆ. ಅನ್ಯ ಭಾಷೆ, ಅನ್ಯ ಸಂಸ್ಕೃತಿಗಳಲ್ಲಿ ಲಭ್ಯವಿರುವ ಕಥೆಗಳನ್ನು ಕನ್ನಡಕ್ಕೆ ತರುವ ಕೆಲಸ ನಿಮ್ಮಿಂದಾಗುತ್ತಿರಲಿ.]
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications