ಫೈರ್ಫಾಕ್ಸ್ ಆಡ್ ಆನ್ : ಒನ್ಇಂಡಿಯಾ ಕನ್ನಡ ಮೆನು
ಕನ್ನಡ ಓದಲು ಬರುವ ಬ್ರೌಸರ್ಗಳಿಗೆ ಲೇಖನಗಳನ್ನು ಓದುವ ರೀತಿಯಲ್ಲಿ, ಅತ್ಯಂತ ಸರಳವಾಗಿ ನೀಡುವ ಅಗತ್ಯ ಹೇಗೆ ಇದೆಯೋ, ಒಂದು ಅಂತರ್ಜಾಲದಲ್ಲಿರುವ ಎಲ್ಲ ವಿಭಾಗಗಳು, ಉಪ-ವಿಭಾಗಗಳು ಕೂಡ ಅತ್ಯಂತ ಸುಲಭವಾಗಿ ದೊರೆಯಬೇಕು. ಇದಕ್ಕೆ ಇಂಟರ್ನೆಟ್ ಸ್ನೇಹಿಯಾಗಿರುವುದು ಅಂತಾರೆ.
ವೆಬ್ ಪುಟಗಳು ನೋಡಲು ಎಷ್ಟು ಸುಂದರವಾಗಿರಬೇಕೆಂದು ನಾವು ಬಯಸುತ್ತೇವೋ, ನ್ಯಾವಿಗೇಷನ್ (ವೆಬ್ ಪುಟಗಳ ಯಾನ) ಕೂಡ ಅಷ್ಟೇ ಸರಳ ಮತ್ತು ಸುಲಲಿತವಾಗಿರಬೇಕು. ಒಂದು ಪುಟಕ್ಕೆ ಹೋದರೆ ಇನ್ನೊಂದು ಪುಟವನ್ನು ಮತ್ತು ಇನ್ನೊಂದು ವಿಭಾಗವನ್ನು ಅತ್ಯಂತ ಸರಳವಾಗಿ ಹುಡುಕುವಂತಿರಬೇಕು. ಯಾವುದೋ ಪುಟಕ್ಕೆ ಹೋದರೆ ಚಕ್ರವ್ಯೂಹದಲ್ಲಿ ಕಳೆದುಹೋದಂತೆ ಇರಬಾರದು.
ನಮ್ಮ ಒನ್ಇಂಡಿಯಾ ಕನ್ನಡ ಪೋರ್ಟಲ್ನ ಎಲ್ಲಾ ವಿಭಾಗಗಳು ಒಂದೇ ಜಾಗದಲ್ಲಿ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಫೈರ್ಫಾಕ್ಸ್ ಆಡ್ ಆನ್ 'ಒನ್ಇಂಡಿಯಾ ಕನ್ನಡ ಮೆನು' ರೂಪಿಸಲಾಗಿದೆ. ಫೈರ್ ಫಾಕ್ಸ್ ಬಳಸುವವರು ಯಾರಾದರೂ ಈ ಆಡ್ ಆನ್ ಅನ್ನು ಅತ್ಯಂತ ಸುಲಭವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಇನ್ಸ್ಟಾಲ್ ಮಾಡುವುದು ಕೂಡ ಸುಲಭ
* ಫೈರ್ಫಾಕ್ಸ್ ಆಡ್ ಆನ್ ಇನ್ಸ್ಟಾಲ್ ಮಾಡಲು ಇಲ್ಲಿ ಕ್ಲಿಕ್ಕಿಸಿ
* 'Add to Firefox' ಕ್ಲಿಕ್ಕಿಸಿ.
* ಆಗ ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ Install ಬಟನ್ ಕ್ಲಿಕ್ಕಿಸಿ ಆಡ್ ಆನ್ ಇನ್ಸ್ಟಾಲ್ ಮಾಡಿಕೊಳ್ಳಿ.
* ಬ್ರೌಸರ್ ಮತ್ತೆ ಆರಂಭಿಸಲು ಕೋರಿಕೆ ಬರುತ್ತದೆ. ಮತ್ತೆ ಸ್ಟಾರ್ಟ್ ಮಾಡಿರಿ.
ಈಗ ನಿಮ್ಮ ಫೈರ್ಫಾಕ್ಸ್ ಬ್ರೌಸರ್ನ ಮೆನು ಬಾರ್ನಲ್ಲಿ Oneindia Kannada ಆಡ್ ಆನ್ ಬಂದು ಕುಳಿತಿರುತ್ತದೆ. ಅದನ್ನು ಬಳಸಿ ನಿಮಗಿಷ್ಟವಾದ ವಿಭಾಗಕ್ಕೆ ಭೇಟಿ ನೀಡಿ, ನಿಮಗಿಷ್ಟವಾದ ಲೇಖನಗಳನ್ನು ಓದುವ ಸವಲತ್ತು ನಿಮ್ಮದಾಗುತ್ತದೆ. ಒನ್ಇಂಡಿಯಾ ಕನ್ನಡ ಸುತ್ತಾಟ ಈಗ ಇನ್ನೂ ಸುಲಭ. ಈ ಒನ್ಇಂಡಿಯಾ ಕನ್ನಡ ಮೆನು ಫೈರ್ಫಾಕ್ಸ್ ಆಡ್ ಆನ್ ಇನ್ಸ್ಟಾಲ್ ಮಾಡಲು ಕಷ್ಟವಾದರೆ ಅಥವಾ ತಿಳಿಯದಿದ್ದರೆ ನಮಗೆ ಬರೆಯಿರಿ : [email protected]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್













Click it and Unblock the Notifications