ಇಂದಿನ ಕನ್ನಡ ಅಂಕಣಗಳು ಬೋರೋ ಬೋರು

ಅಶೋಕ್ ಶೆಟ್ಟರ್ : ಅಂಕಣಕಾರರಾದರೂ ಸಾಯಬೇಕು, ಅವರ ಅಂಕಣಗಳನ್ನು (ಗಾಡ್, ಹಾಗಂತ ಯಾರು ಹೆಸರಿಟ್ಟರೋ.. ಯಾಕೋ..) ಪ್ರಕಟಿಸುವ ಪತ್ರಿಕೆಗಳಾದರೂ ಸಾಯಬೇಕು. ಆದರೆ ಅಂ.ರಾ ನಾವೇಕೆ ಒದ್ದಾಡಿ ಸಾಯಬೇಕು? ಬೇಡವಾ.., ಬಿಟ್ಟುಬಿಡಿ, ಓದಬೇಡಿ.. ಇದಕ್ಕೆ ಸಂಬಂಧಿಸಿದಂತೆ ಹಿಂದೆ B.k.Sumathiಯವರು ಒಂದು ಲೇಖನವನ್ನೇ ಬರೆದಿದ್ದರು. ಇತ್ತೀಚೆಗೆ Jogiಯವರ ಕಥೆಗಳನ್ನು ಮತ್ತೊಂದಾವರ್ತಿ ಓದುತ್ತಿದ್ದೆ. ಲವಲವಿಕೆಯ ಬರಹಗಳು. ಆದರೆ ಅವುಗಳ ಸೋಲಿನ ನೆಲೆಗಳನ್ನು ನಾನು ಯೋಚಿಸಿದಾಗ ನನಗೆ ತೋಚಿದ್ದು ಅವರು ಅವುಗಳನ್ನು ಒಂದು ಅಂಕಣದ ಸರಕಾಗಿಸಲು ನೋಡಿದ್ದು. A story-writer, if he is also a columnist, should write about anything but a short story in his column. ಒಂದು ಅಂಕಣದ ಸ್ಥಳಮಿತಿಗೆ ಒಂದು ಕಥೆಯನ್ನು ಕುಗ್ಗಿಸುವದರಲ್ಲಿ ಅಂತಸ್ಥವಾಗೇ ಇರುವ ಕೃತ್ರಿಮತೆಯ ಹೊರತಾಗ್ಯೂ ಒಂದು ಕಥೆ ತನ್ನ ಹಂದರ, ಪಾತ್ರಪೋಷಣೆಯ ಅಗತ್ಯಗಳಿಗನುಗುಣವಾಗಿ ಸ್ವಚ್ಛಂದವಾಗಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನು ಒಬ್ಬ ಕತೆಗಾರ ತಾನೇ ಸ್ವತಃ ಕೊಂದು ಹಾಕುವದು ನನ್ನ ಮಟ್ಟಿಗೆ ವಿಲಕ್ಷಣ.
ಉಷಾ ಕಟ್ಟೆಮನೆ : ನಾನು ಪತ್ರಕರ್ತಳಲ್ಲ. ತಿಳಿದವಳಂತೂ ಮೊದಲೇ ಅಲ್ಲ. ಇನ್ನು ಓದುಗಳಾಗಿ ನಾನು ಅಂಕಣಗಳನ್ನು ಓದುವುದು ಕಡಿಮೆ. ಅವರು ಏನು ಹೇಳುತ್ತಿದ್ದಾರೆ ಮತ್ತು ಯಾವುದರ ಪರ ವಕಾಲತ್ತು ವಹಿಸುತ್ತಿದ್ದಾರೆಂದು ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಹಾಗಾಗಿ ಏನನ್ನೂ ಹೇಳಲಾರೆ ಅಂಜಲಿ. ಆದರೆ ನನಗೆ ಏನು ಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಎಲ್ಲಿಂದಾದರೂ ಹುಡುಕಿ ಪಡೆದುಕೊಳ್ಳುತ್ತೇನೆ. ಅರೆಬೆಂದ ಅಂಕಣಗಳ ಗೊಡವೆಯೇಕೆ ಅಂಜಲಿ?
More From
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications