ಇಂದಿನ ಕನ್ನಡ ಅಂಕಣಗಳು ಬೋರೋ ಬೋರು

ಅಶೋಕ್ ಶೆಟ್ಟರ್ : ಅಂಕಣಕಾರರಾದರೂ ಸಾಯಬೇಕು, ಅವರ ಅಂಕಣಗಳನ್ನು (ಗಾಡ್, ಹಾಗಂತ ಯಾರು ಹೆಸರಿಟ್ಟರೋ.. ಯಾಕೋ..) ಪ್ರಕಟಿಸುವ ಪತ್ರಿಕೆಗಳಾದರೂ ಸಾಯಬೇಕು. ಆದರೆ ಅಂ.ರಾ ನಾವೇಕೆ ಒದ್ದಾಡಿ ಸಾಯಬೇಕು? ಬೇಡವಾ.., ಬಿಟ್ಟುಬಿಡಿ, ಓದಬೇಡಿ.. ಇದಕ್ಕೆ ಸಂಬಂಧಿಸಿದಂತೆ ಹಿಂದೆ B.k.Sumathiಯವರು ಒಂದು ಲೇಖನವನ್ನೇ ಬರೆದಿದ್ದರು. ಇತ್ತೀಚೆಗೆ Jogiಯವರ ಕಥೆಗಳನ್ನು ಮತ್ತೊಂದಾವರ್ತಿ ಓದುತ್ತಿದ್ದೆ. ಲವಲವಿಕೆಯ ಬರಹಗಳು. ಆದರೆ ಅವುಗಳ ಸೋಲಿನ ನೆಲೆಗಳನ್ನು ನಾನು ಯೋಚಿಸಿದಾಗ ನನಗೆ ತೋಚಿದ್ದು ಅವರು ಅವುಗಳನ್ನು ಒಂದು ಅಂಕಣದ ಸರಕಾಗಿಸಲು ನೋಡಿದ್ದು. A story-writer, if he is also a columnist, should write about anything but a short story in his column. ಒಂದು ಅಂಕಣದ ಸ್ಥಳಮಿತಿಗೆ ಒಂದು ಕಥೆಯನ್ನು ಕುಗ್ಗಿಸುವದರಲ್ಲಿ ಅಂತಸ್ಥವಾಗೇ ಇರುವ ಕೃತ್ರಿಮತೆಯ ಹೊರತಾಗ್ಯೂ ಒಂದು ಕಥೆ ತನ್ನ ಹಂದರ, ಪಾತ್ರಪೋಷಣೆಯ ಅಗತ್ಯಗಳಿಗನುಗುಣವಾಗಿ ಸ್ವಚ್ಛಂದವಾಗಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನು ಒಬ್ಬ ಕತೆಗಾರ ತಾನೇ ಸ್ವತಃ ಕೊಂದು ಹಾಕುವದು ನನ್ನ ಮಟ್ಟಿಗೆ ವಿಲಕ್ಷಣ.
ಉಷಾ ಕಟ್ಟೆಮನೆ : ನಾನು ಪತ್ರಕರ್ತಳಲ್ಲ. ತಿಳಿದವಳಂತೂ ಮೊದಲೇ ಅಲ್ಲ. ಇನ್ನು ಓದುಗಳಾಗಿ ನಾನು ಅಂಕಣಗಳನ್ನು ಓದುವುದು ಕಡಿಮೆ. ಅವರು ಏನು ಹೇಳುತ್ತಿದ್ದಾರೆ ಮತ್ತು ಯಾವುದರ ಪರ ವಕಾಲತ್ತು ವಹಿಸುತ್ತಿದ್ದಾರೆಂದು ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಹಾಗಾಗಿ ಏನನ್ನೂ ಹೇಳಲಾರೆ ಅಂಜಲಿ. ಆದರೆ ನನಗೆ ಏನು ಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಎಲ್ಲಿಂದಾದರೂ ಹುಡುಕಿ ಪಡೆದುಕೊಳ್ಳುತ್ತೇನೆ. ಅರೆಬೆಂದ ಅಂಕಣಗಳ ಗೊಡವೆಯೇಕೆ ಅಂಜಲಿ?
More From
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications