ಇಂದಿನ ಕನ್ನಡ ಅಂಕಣಗಳು ಬೋರೋ ಬೋರು

ಅಶೋಕ್ ಶೆಟ್ಟರ್ : ಅಂಕಣಕಾರರಾದರೂ ಸಾಯಬೇಕು, ಅವರ ಅಂಕಣಗಳನ್ನು (ಗಾಡ್, ಹಾಗಂತ ಯಾರು ಹೆಸರಿಟ್ಟರೋ.. ಯಾಕೋ..) ಪ್ರಕಟಿಸುವ ಪತ್ರಿಕೆಗಳಾದರೂ ಸಾಯಬೇಕು. ಆದರೆ ಅಂ.ರಾ ನಾವೇಕೆ ಒದ್ದಾಡಿ ಸಾಯಬೇಕು? ಬೇಡವಾ.., ಬಿಟ್ಟುಬಿಡಿ, ಓದಬೇಡಿ.. ಇದಕ್ಕೆ ಸಂಬಂಧಿಸಿದಂತೆ ಹಿಂದೆ B.k.Sumathiಯವರು ಒಂದು ಲೇಖನವನ್ನೇ ಬರೆದಿದ್ದರು. ಇತ್ತೀಚೆಗೆ Jogiಯವರ ಕಥೆಗಳನ್ನು ಮತ್ತೊಂದಾವರ್ತಿ ಓದುತ್ತಿದ್ದೆ. ಲವಲವಿಕೆಯ ಬರಹಗಳು. ಆದರೆ ಅವುಗಳ ಸೋಲಿನ ನೆಲೆಗಳನ್ನು ನಾನು ಯೋಚಿಸಿದಾಗ ನನಗೆ ತೋಚಿದ್ದು ಅವರು ಅವುಗಳನ್ನು ಒಂದು ಅಂಕಣದ ಸರಕಾಗಿಸಲು ನೋಡಿದ್ದು. A story-writer, if he is also a columnist, should write about anything but a short story in his column. ಒಂದು ಅಂಕಣದ ಸ್ಥಳಮಿತಿಗೆ ಒಂದು ಕಥೆಯನ್ನು ಕುಗ್ಗಿಸುವದರಲ್ಲಿ ಅಂತಸ್ಥವಾಗೇ ಇರುವ ಕೃತ್ರಿಮತೆಯ ಹೊರತಾಗ್ಯೂ ಒಂದು ಕಥೆ ತನ್ನ ಹಂದರ, ಪಾತ್ರಪೋಷಣೆಯ ಅಗತ್ಯಗಳಿಗನುಗುಣವಾಗಿ ಸ್ವಚ್ಛಂದವಾಗಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನು ಒಬ್ಬ ಕತೆಗಾರ ತಾನೇ ಸ್ವತಃ ಕೊಂದು ಹಾಕುವದು ನನ್ನ ಮಟ್ಟಿಗೆ ವಿಲಕ್ಷಣ.
ಉಷಾ ಕಟ್ಟೆಮನೆ : ನಾನು ಪತ್ರಕರ್ತಳಲ್ಲ. ತಿಳಿದವಳಂತೂ ಮೊದಲೇ ಅಲ್ಲ. ಇನ್ನು ಓದುಗಳಾಗಿ ನಾನು ಅಂಕಣಗಳನ್ನು ಓದುವುದು ಕಡಿಮೆ. ಅವರು ಏನು ಹೇಳುತ್ತಿದ್ದಾರೆ ಮತ್ತು ಯಾವುದರ ಪರ ವಕಾಲತ್ತು ವಹಿಸುತ್ತಿದ್ದಾರೆಂದು ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಹಾಗಾಗಿ ಏನನ್ನೂ ಹೇಳಲಾರೆ ಅಂಜಲಿ. ಆದರೆ ನನಗೆ ಏನು ಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಎಲ್ಲಿಂದಾದರೂ ಹುಡುಕಿ ಪಡೆದುಕೊಳ್ಳುತ್ತೇನೆ. ಅರೆಬೆಂದ ಅಂಕಣಗಳ ಗೊಡವೆಯೇಕೆ ಅಂಜಲಿ?
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications