ನೆಟ್ ಕೋರ್ ತೆಕ್ಕೆಗೆ ದಟ್ಸ್ ಕನ್ನಡ

ಈ ಕುರಿತು ಎರಡೂ ಸಂಸ್ಥೆಗಳ ನಡುವೆ ಒಡಂಬಡಿಕೆಯಾಗಿದ್ದು ಮೂರ್ನಾಲ್ಕು ತಿಂಗಳುಗಳಲ್ಲಿ ಕೂಡಿಕೆಯ ಔಪಚಾರಿಕತೆ ಪೂರ್ಣಗೊಳ್ಳಲಿದೆ.
ನೆಟ್ ಕೋರ್ ಸಲ್ಯುಷನ್ಸ್ ನ ಸಿಇಓ ಅಭಿಜಿತ್ ಸಕ್ಸೇನಾ ಅವರು ಈ ಒಡಂಬಡಿಕೆ ಕುರಿತಂತೆ ಹರ್ಷ ವ್ಯಕ್ತಪಡಿಸಿದ್ದು, ಭಾರತದಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವವನ್ನು ಪರಿಗಣಿಸಿದರೆ, ಇಂಟರ್ನೆಟ್ ಮತ್ತು ಮೊಬೈಲ್ ಕ್ಷೇತ್ರದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹಾಗೂ ವರಮಾನ ವೃದ್ಧಿಗೆ ಈ ಒಡಂಬಡಿಕೆ ಉತ್ತೇಜನ ನೀಡಲಿದೆ ಎಂದಿದ್ದಾರೆ.
ಭಾರತ ಕೇಂದ್ರಿತ ಮೊಬೈಲ್ ಇಂಟರ್ನೆಟ್ ಪೋರ್ಟಲ್ ಮೈಟುಡೆ ಮುಖಾಂತರ ನೆಟ್ ಕೋರ್ ಕಂಪನಿ ನೇರವಾಗಿ ಜಾಗತಿಕ ಗ್ರಾಹಕರನ್ನು ಸೆಳೆಯುತ್ತಿದೆ. ಮೊಬೈಲ್ ಮತ್ತು ಇಂಟರ್ನೆಟ್ ಕ್ಷೇತ್ರದ ಗ್ರಾಹಕರನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಲು ಈ ಕೂಡಿಕೆ ಸಹಕಾರಿಯಾಗಲಿದೆ ಮತ್ತು ಇ-ಕಾಮರ್ಸ್ ಮತ್ತು ಎಮ್-ಕಾಮರ್ಸ್ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಯಾಗಲಿವೆ ಎಂದು ಸಕ್ಸೇನಾ ಹೇಳಿದರು.
ಪಿಸಿ-ಇಂಟರ್ನೆಟ್ ಮತ್ತು ಮೊಬೈಲ್-ಇಂಟರ್ನೆಟ್ ನಡುವಿನ ಅಂತರ ದಿನೇದಿನೇ ಕಡಿಮೆ ಆಗುತ್ತಿದೆ, ಎರಡೂ ಕಂಪನಿಗಳ ಕೂಡಿಕೆಯಿಂದಾಗಿ ಇಂಟರ್ನೆಟ್ ನಲ್ಲಿರುವ ಆಡಿಯೋ, ವಿಡಿಯೋ ಮತ್ತಿತರ ಮಾಹಿತಿಯನ್ನು ಮೊಬೈಲ್ ಮೂಲಕ ಕೂಡ ನಮ್ಮ ಗ್ರಾಹಕರಿಗೆ ದಕ್ಕಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾಹೀರಾತುದಾರರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಸಕ್ಸೇನಾ ತಿಳಿಸಿದರು.
ಗ್ರೇನಿಯಂನ ಸಿಇಓ ಮತ್ತು ಸಂಸ್ಥಾಪಕರಾಗಿರುವ ಬಿಜಿ ಮಹೇಶ್ ಅವರು, ಪ್ರಾದೇಶಿಕ ಭಾಷಾ ಇಂಟರ್ನೆಟ್ ಕ್ಷೇತ್ರದಲ್ಲಿ ಮೊದಲು ಅಡಿಯಿರಿಸಿದ್ದೇ ಗ್ರೇನಿಯಂ. ಅಪಾರವಾದ ಇಂಟರ್ನೆಟ್ ವೀಕ್ಷಕರನ್ನು ಗ್ರೇನಿಯಂನ ಪ್ರಾದೇಶಿಕ ಮತ್ತು ಇಂಗ್ಲಿಷ್ ಪೋರ್ಟಲ್ ಗಳು ಸೆಳೆಯುತ್ತಿವೆ. ಪ್ರತಿ ತಿಂಗಳು ಆರು ಮಿಲಿಯನ್ ಗೂ ಹೆಚ್ಚಿನ ಹೊಸ ಗ್ರಾಹಕರು ಗ್ರೇನಿಯಂಗೆ ಬರುತ್ತಿದ್ದಾರೆ. ಇದು ಮೈಟುಡೇ ಮುಖಾಂತರ ನೆಟ್ ಕೋರ್ ಕಂಪನಿ ಹೊಂದಿರುವ 4 ಮಿಲಿಯನ್ ಗ್ರಾಹಕರಿಗೆ ವರದಾನವಾಗಲಿದೆ ಎಂದು ಹೇಳಿದರು.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷಾ ಪೋರ್ಟಲ್ ಗಳನ್ನು ಗ್ರೇನಿಯಂ ಹೊಂದಿದೆ. ಉಚಿತ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಕೂಡ ಗ್ರೇನಿಯಂ ಒಡೆತನದಲ್ಲಿದೆ. ಡಿಜಿಟಲ್ ಕಮ್ಯುನಿಕೇಷನ್ ನಲ್ಲಿ ಮುಂಚೂಣಿಯಲ್ಲಿರುವ ನೆಟ್ ಕೋರ್ ಕಂಪನಿಯ ಎಸ್ಎಮ್ಎಸ್ ಮತ್ತು ಈಮೇಲ್ ಸೇವೆಯನ್ನು ಭಾರತದ 2000ಕ್ಕೂ ಅಧಿಕ ಕಂಪನಿಗಳು ಪಡೆಯುತ್ತಿವೆ. ನೆಟ್ ಕೋರ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೈನ್ ಅವರು ಗ್ರೇನಿಯಂನಲ್ಲಿ ಈಮೊದಲು ಬಂಡವಾಳ ಹೂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
Also Read : Greynium/Oneindia.in/Click.in acquisition : My Thoughts
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications