111443mysoreಹದಿನೆಂಟೂ ಸಮಸ್ತರ ಅರಕಲಗೂಡು ದಸರಾ/festivals/dasara/2008/1007-arakalgud-dasara-communal-harmony.htmlಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿರುವ ಈ ನವರಾತ್ರಿ ಉತ್ಸವ ಅರಕಲಗೂಡಿನ ಹೆಮ್ಮೆ. 18 ಕೋಮಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಅರಕಲಗೂಡು ದಸರಾ ರಾಜ್ಯದಲ್ಲೇ ವಿನೂತನ,ವಿಶಿಷ್ಠ ಮತ್ತು ಅನುಕರಣೀಯ. 442http://kannada.oneindia.com/img/2009/09/17-arakalgud-dasara1.jpg111443mysoreಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg111443mysoreನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg111443mysoreಸಡಗರದ ದ್ಯೋತಕ ಈ ದಸರಾ/festivals/dasara/stories/2006/260906bhalle.htmlವಿಜಯದಶಮಿ ಬಂತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ದಸರಾ ಮೆರವಣಿಗೆ, ಸರಸ್ವತಿ ಪೂಜೆ, ಆಯುಧಪೂಜೆ, ಬೊಂಬೆ ಹಬ್ಬ ಸೇರಿದಂತೆ ವಿವಿಧ ಆಚರಣೆಗಳು ನೀಡುವ ಖುಷಿಯನ್ನು ಮರೆಯುವುದಾದರೂ ಹೇಗೆ?ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರಾ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ, ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ 6633http://kannada.oneindia.com/img/2009/09/17-srinath-bhalle3.jpg111443mysoreವಿಶ್ವೇಶ್ವರಯ್ಯ: ಮೇರು ವಾಸ್ತುಶಿಲ್ಪಿ , ಶಿಸ್ತಿನ ಸಿಪಾಯಿ/literature/people/2003/150903sirmv.htmlಅದು ವಿಶ್ವೇಶ್ವರಯ್ಯನವರ ಆಪ್ತೇಷ್ಟರು, ಬಂಧುಗಳೆಲ್ಲ ಸೇರಿದ್ದ ಸಣ್ಣ ಸಂತೋಷ ಕೂಟ. ವಿಶ್ವೇಶ್ವರಯ್ಯ ಅವರಿಗೆ ದಿವಾನ್‌ ಪದವಿ ಸಿಕ್ಕಿತ್ತು. ಆ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಮೊದಲು ತಮ್ಮ ಬಂಧು ಬಳಗವನ್ನೆಲ್ಲ ಕರೆದು ಸಣ್ಣ ಭೋಜನ ಕೂಟವೇರ್ಪಡಿಸಿದ್ದರು. ಆ ಕೂಟ ದಿವಾನರಾದ ಖುಷಿಯನ್ನು ಹಂಚಿಕೊಳ್ಳುವುದಕ್ಕಲ್ಲ ; ಕರ್ತವ್ಯದ ಜವಾಬ್ದಾರಿ ಭಾರವನ್ನು ಬಂಧುಗಳಿಗೆ ಮನದಟ್ಟು ಮಾಡಿಸುವುದಕ್ಕಾಗಿ. ದಿವಾನ ಪದವಿಯಲ್ಲಿರುವ ತಮ್ಮನ್ನು ಯಾವುದೇ ಶಿಫಾರಸುಗಳಿಗೆ 8959http://kannada.oneindia.com/img/2009/09/15-sirmv1.jpg443409dasaraಮಹಾನವಮಿಯಂದು ಸರಸ್ವತಿ ದೇವಿ ಆರಾಧನೆ/festivals/dasara/2008/1008-worshipping-saraswati-on-mahanavami.htmlಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಪ್ರಮುಖ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯ ವಿರಚಿತ ಸರಸ್ವತಿ ಕುರಿತ ಕೃತಿ. ಮಾಹಿತಿ : ಹಂಸಾನಂದಿ ಮೈಸೂರು ವಾಸುದೇವಾಚಾರ್ಯರು(1865-1961) 20ನೇ ಶತಮಾನದಲ್ಲಿನ ಒಬ್ಬ ಪ್ರಮುಖ ವಾಗ್ಗೇಯಕಾರರು. ತ್ಯಾಗರಾಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸುಮಾರು 300ಕ್ಕೂ ಹೆಚ್ಚು ರಚನೆಗಳನ್ನು ಹೆಚ್ಚಾಗಿ ತೆಲುಗು 430http://kannada.oneindia.com/img/2009/09/17-mysore-vasudevacharya1.jpg443409dasaraನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ/festivals/dasara/2008/1001-navaratri-karnataka-music-hamsanandi.htmlದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನಮಗೆಲ್ಲ ಒಂದು ದೊಡ್ಡ ಹಬ್ಬ. ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. 537http://kannada.oneindia.com/img/2009/09/17-saraswati4e.jpg443409dasaraದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ/recipe/sweet/2008/1001-gasagase-payasa-poppy-seed-kheer-dasara.htmlದಸರಾ ಬಂತೆಂದರೆ ನಮ್ಮ ಕಡೆ ಒಂದು ರೀತಿ ಸಂಭ್ರಮ, ಮೈಸೂರಿಗೆ ಸಾಂಸ್ಕೃತಿಕ ಉತ್ಸವದ ಸಂಭ್ರಮವಾದರೆ, ಶೃಂಗೇರಿಯಲ್ಲಿ ಧಾರ್ಮಿಕ ದಸರೆಯ ಮೆರುಗಾದರೆ ಕನ್ನಡ ಜಿಲ್ಲೆಯಲ್ಲಿ ದಸರೆಯ ದಿನಗಳಲ್ಲಿ ದಿನನಿತ್ಯ ಬಗೆಬಗೆ ಪಾಯಸ ಮಾಡುವ ಪ್ರತೀತಿ. ಹೌದಾ, ನಾವು ಕೇಳೆ ಇಲ್ಲವಲ್ಲಾ ಎನ್ನಬೇಡಿ. ಹಬ್ಬದ ಆಚರಣೆ ಅವರವರ ಭಾವನೆಗೆ ಭಕುತಿಗೆ . ಹೊಟ್ಟೆ ಪೂಜೆಗೆ ಯಾವ ದೇವರ ಅಡ್ಡಿಯಿಲ್ಲ ಎಂಬುದು 538http://kannada.oneindia.com/img/2009/09/24-gasagase-payasa2.jpg443409dasaraನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg443409dasaraಸಡಗರದ ದ್ಯೋತಕ ಈ ದಸರಾ/festivals/dasara/stories/2006/260906bhalle.htmlವಿಜಯದಶಮಿ ಬಂತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ದಸರಾ ಮೆರವಣಿಗೆ, ಸರಸ್ವತಿ ಪೂಜೆ, ಆಯುಧಪೂಜೆ, ಬೊಂಬೆ ಹಬ್ಬ ಸೇರಿದಂತೆ ವಿವಿಧ ಆಚರಣೆಗಳು ನೀಡುವ ಖುಷಿಯನ್ನು ಮರೆಯುವುದಾದರೂ ಹೇಗೆ?ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರಾ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ, ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ 6633http://kannada.oneindia.com/img/2009/09/17-srinath-bhalle3.jpg111069shamಆಕಾಶದಾಗೆ ಯಾರೋ ಮಾಯಗಾರನೆ/column/sham/2007/050107about_us.htmlನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!ಪ್ರಿಯ ಬಂಧು,ಸಸ್ನೇಹ ನಮಸ್ಕಾರ.ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ 11212http://kannada.oneindia.com/img/2009/11/03-sham7.jpg111069sham‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg111069shamಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpg111069shamಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg111069shamಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ/column/sham/2009/0204-sydney-radio-thatskannada-editor-interview.htmlಸಿಡ್ನಿಯಲ್ಲಿರುವ ಎಸ್ ಬಿ ಎಸ್ ರೇಡಿಯೋ ಆಸ್ಟ್ರೇಲಿಯ ಪ್ರಜೆಗಳಿಗೆ ಒಂದು ಪ್ರಮುಖ ಮಾಧ್ಯಮ. ಇಂಗ್ಲಿಷ್ ಅಲ್ಲದೆ, 68 ವಿವಿಧ ಜಾಗತಿಕ ಭಾಷೆಗಳಲ್ಲಿ ಆಕಾಶವಾಣಿ ನುಡಿಸೇವೆ ಸಲ್ಲಿಸುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಆಸ್ಟ್ರೇಲಿಯ ಮತ್ತು ಏಷಿಯ ಪೆಸಿಫಿಕ್ ವಲಯದಲ್ಲಿ ನೆಲೆಸಿರುವ ಆಯಾ ಭಾಷಿಕ ಸಮುದಾಯದ ಶ್ರೋತೃಗಳನ್ನು ತಲಪುವುದು, ತನ್ಮೂಲಕ ಅವರವರ ಮಾತೃ ಭಾಷೆಗೆ ದನಿಯಾಗುವುದು ಆಕಾಶವಾಣಿಯ 34466http://kannada.oneindia.com/img/2009/02/04-sham6.jpgnews"> ವೃದ್ಧರ ಪಾಲಿನ ನಂದಗೋಕುಲ ಪೇಜಾವರ ಶ್ರೀಧಾಮ | Old Age home | Sridhama | Mysore | Pejawara Swamiji | Senior Citizens - ವೃದ್ಧರ ಪಾಲಿನ ನಂದಗೋಕುಲ ಪೇಜಾವರ ಶ್ರೀಧಾಮ - Kannada Oneindia

ವೃದ್ಧರ ಪಾಲಿನ ನಂದಗೋಕುಲ ಪೇಜಾವರ ಶ್ರೀಧಾಮ

Pejawarsri Vishwesha Teertha Swamiji
ಮುಪ್ಪು ಆವರಿಸಿದವರಿಗೆ ಸಾವಿನ ಅಂಜಿಕೆ ಇರುವುದಿಲ್ಲ, ಬದುಕುವುದು ಹೇಗೆ ಎಂಬ ಭಯ ಮಾತ್ರ ಅವರನ್ನು ಕ್ಷಣಕ್ಷಣಕ್ಕೂ ಕಾಡದೆ ಬಿಡುವುದಿಲ್ಲ. ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನಶೈಲಿಗಳು ಕನ್ನಡಿಗರ ಮೈ ಮನ ಮನೆಗಳನ್ನು ಆಕ್ರಮಿಸಿಕೊಂಡಿರುವುದರಿಂದ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಿದೆ. ಸಿರಿತನ ಬಡತನದ ಹಂಗುಮೀರಿದ, ಪರಂತು, ದಿಕ್ಕಿಲ್ಲದ ಅನೇಕ ವಯೋವೃದ್ಧರು ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ಇವತ್ತಿನ ಪರಿಸ್ಥಿತಿಗೆ ಕಾರಣಗಳು ದಂಡಿಯಾಗಿವೆ. ಹೀನಾಯ ಪರಿಸ್ಥಿತಿಗೆ ಯಾರನ್ನೂ ದೂರುವ ಹಾಗಿಲ್ಲ. ಆದರೆ ಅಪ್ಪ, ಅಮ್ಮ, ಅಜ್ಜಿ, ತಾತನನ್ನು ಅವರ ಜೀವನ ಸಂಧ್ಯಾಕಾಲದಲ್ಲಿ ನೋಡಿಕೊಳ್ಳವವರು ಯಾರು ಎಂಬ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ.

ಒಂದೇ ಸೂರಿನಲ್ಲಿ ಆಕಳು ಕರು, ಕುರಿ ಕೋಳಿ ಸಮೇತ ಸಮಸ್ತ ಕುಟುಂಬವರ್ಗ ಬದುಕನ್ನು ಸಾಧ್ಯಮಾಡಿಕೊಂಡಿದ್ದ ಕಾಲ ಈಗ ಕೆಟ್ಟು ಎಕ್ಕುಟ್ಟಿ ಹೋಗಿರುವುದರಿಂದ ಮನೆಮಂದಿಯೆಲ್ಲರೂ ಒಂದೊಂದು ದಿಕ್ಕಾಗಿದ್ದಾರೆ. ಏನಕೇನ ಪ್ರಕಾರೇಣ ನಮ್ಮ ಸಾಮಾಜಿಕ ವ್ಯವಸ್ಥೆಯೇ ಪಲ್ಲಟವಾಗಿರುವುದರಿಂದ ವಯೋವೃದ್ಧರು ನೆಮ್ಮದಿಯಿಂದ ಬದುಕುವ ಅವಕಾಶಗಳು ಕಡಿಮೆ ಆಗಿ, ಸವಾಲುಗಳು ಬೆಟ್ಟದಷ್ಟಾಗಿವೆ. ಮುಪ್ಪಡರಿದವರ ಜೀವನ ಹೇಗಾದರೂ ಇರಲಿ, ಹಿರಿಯರಿಗೆ ಅಯ್ಯೋಪಾಪ ಎನ್ನುವುದನ್ನು ಬಿಟ್ಟು ಇನ್ನೇನನ್ನೂ ಮಾಡಲಾಗದ ನಿಸ್ಸಹಾಯಕ ಮಕ್ಕಳು ಮೊಮ್ಮಕ್ಕಳ ನೆರವಿಗೆ ವೃದ್ಧಾಶ್ರಮಗಳು ಒದಗಿಬಂದಿವೆ ಎನ್ನೋಣವೇ?

ಮೈಯಲ್ಲಿ ರಕ್ತ ಬಿಸಿಯಾಗಿರುವ ತನಕ ಯುವಕ ಯುವತಿಯರಿಗೆ ಅಂದರೆ ಇನ್ನೂವರೆಗೆ ನಲವತ್ತು ವಯಸ್ಸು ದಾಟದ ಅತ್ತಿಗೆ, ನಾದಿನಿ, ಓರಗಿತ್ತಿ, ಭಾವ, ಭಾವಮೈದ, ಅಣ್ಣ ತಮ್ಮಂದಿರಿಗೆ ಪ್ರಾಂಬ್ಲಂ ಇಲ್ಲ. ಅವರೆಲ್ಲ ಚೆನ್ನಾಗಿರಲಿ. ಇಂಥವರಿಗೆ ಯಾವುದೋ ಒಂದು ಊರಿಗೆ ವರ್ಗವಾಗಿದೆ ಎಂದಿಟ್ಟುಕೊಳ್ಳಿ. ಸಾಮಾನು ಸರಂಜಾಮು ರವಾನಿಸಲು ಅವರು ಪ್ಯಾಕರ್ಸ್ ಅಂಡ್ ಮೂವರ್ಸ್ ಗೆ ಫೋನಾಯಿಸಿ ಆಗಿದೆ ಎಂದಿಟ್ಟುಕೊಳ್ಳಿ. ಆದರೆ, ಮೂಲೆಯಲ್ಲಿ ಕೆಮ್ಮುತ್ತಾ ಕುಳಿತಿರುವ ತಾತ, ಲಲಿತಾ ಸಹಸ್ರನಾಮದ ಪುಸ್ತಕ ಪಠಿಸುತ್ತಾ ಅಂಬೆಗಾಲಿಡುತ್ತಿರುವ ಮಗುವಿನ ಚಲನವಲನದ ಮೇಲೆ ಸದಾ ಒಂದು ಕಣ್ಣಿಟ್ಟಿರುವ ಅಜ್ಜಿಯನ್ನು ಎಲ್ಲಿಗೆ ಪಾರ್ಸಲ್ ಮಾಡೋಣ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೇನಲ್ಲ. ಅವರವರ ಮನೆಮಟ್ಟಿಗೆ ತಾತ್ಕಾಲಿಕ ಪರಿಹಾರಗಳನ್ನು ಅವರವರೇ ಕಂಡುಕೊಂಡರೂ ಸಹ ಇದ್ದುದರಲ್ಲೇ ಶಾಶ್ವತ ಎನಿಸುವಂತಹ ತಾಣಗಳು ಇಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ವೃದ್ಧಾಶ್ರಮಗಳು ನಮ್ಮ ಕಣ್ಣಿಗೆ ಬೀಳಬಹುದು. ಆದರೆ "ಅಪ್ಪ ಅಮ್ಮನನ್ನು ಈ ವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ತಳ್ಳಿದರು" ಎಂಬ ಸರೀಕರ ಅಪವಾದಕ್ಕೆ ಹೆದರುವ ಮಂದಿಯಿಂದಾಗಿ ಕನ್ನಡ ನಾಡಿನ ಎಷ್ಟೋ ವೃದ್ಧಾಶ್ರಮಗಳು ಬಳಕೆ ಆಗುತ್ತಿಲ್ಲ. ಹಾಗಂತ ಹಿರಿಯರು ಮನೆಯಲ್ಲೂ ನೆಮ್ಮದಿಯಿಂದ ಇದ್ದಾರೆಂದು ಭಾವಿಸುವಂತಿಲ್ಲ. ಹಾಗೇನೇ, ಬಳಕೆ ಆಗುತ್ತಿರುವ ಆಶ್ರಮಗಳನ್ನು ಪೋಷಿಸುವವರಿಲ್ಲ.

ಇವೆಲ್ಲವುಗಳ ನಡುವೆ, ಅದರಲ್ಲೂ ಕಣ್ಣುಕೋರೈಸುವ 2009ರ ದಸರಾ ಮಹೋತ್ಸವದ ನಡುವೆ ನನ್ನ ಗಮನವನ್ನು ಸೆಳೆಯುತ್ತಿರುವ ಮೈಸೂರಿನ ವೃದ್ಧಾಶ್ರಮದ ಹೆಸರು "ಶ್ರೀ ಪೇಜಾವರ ಶ್ರೀಧಾಮ". There is more to Mysore than Dasara Festival. ಮಾನವೀಯತೆ ಎಲ್ಲೆಲ್ಲಿ ಗಮನವನ್ನು ಸೆಳೆಯುತ್ತದೆಯೋ, ಅಲ್ಲಿ ಹೃದಯ ಮಿಡಿಯುವ ಶ್ರೀ ಪೇಜಾವರ ಸ್ವಾಮಿಗಳ ಪರಿಶ್ರಮದ ಫಲವೇ ಈ ಆಶ್ರಮ. ಅಗತ್ಯವಿರುವವರಿಗೆ, ಯೋಗ್ಯ ಫಲಾನುಭವಿಗಳ ಪ್ರಯೋಜನಕ್ಕಾಗಿ ತೆರೆದುಕೊಂಡಿರುವ ಶ್ರೀಧಾಮ ವೃದ್ಧಾಶ್ರಮದ ಓದು ಮತ್ತು ಬಳಕೆಗೆ ನಿಮಗೆ ಆಹ್ವಾನ.

ವೃದ್ಧಾಶ್ರಮವೆಂದರೆ ಮುದುಕರು ವಾಸಿಸುವ ಕೊಂಪೆಯಾಗಬಾರದು, ಅಲ್ಲಿ ವಾಸಿಸುವ ಹಿರಿಯನಾಗರಿಕರ ಸಾಂಸ್ಕೃತಿಕ ಮತ್ತು ಕೌಟುಂಬಿಕ ಮನೋಭೀಷ್ಟೆಗಳಿಗೆ ಕುಂದು ಬರಬಾರದು ಎಂಬುದು ಪೇಜಾವರರ ಮೊದಲ ಸಂಕಲ್ಪ. ಈ ಉದ್ದೇಶದಿಂದ ಜನ್ಮತಾಳಿದ ಆಶ್ರಮ ಮೈಸೂರಿನ ಜೆಪಿ ನಗರದಲ್ಲಿದೆ. ಶ್ರೀರಾಮವಿಠ್ಠಲ ಟ್ರಸ್ಟ್ ಮತ್ತು ಶ್ರೀಪೇಜಾವರರ ಕೃಪಾಪೋಷಿತ ಸಂಸ್ಥೆಯನ್ನು ಸಮರ್ಥ ಆಡಳಿತಗಾರರ ತಂಡ ಮುನ್ನಡೆಸುತ್ತಿದೆ.

ಇಲ್ಲಿ ವೃದ್ಧರಿಗೆ ಅಗತ್ಯವಾಗುವ ಮೂಲಭೂತ ಸೌಕರ್ಯಗಳು ಇವೆ. ತಮ್ಮ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸಿಕೊಳ್ಳುವ ವೃದ್ಧರಿಗೆ ಒಂದು ವಿಭಾಗ ಇದೆ. ಆದರೆ, ನನಗೆ ಯಾರೂ ಗತಿಯಿಲ್ಲ ದೇವರೇ ಗತಿ ಎನ್ನುವ ಕಡುಬಡವರಿಗೂ ಒಂದು ವಿಭಾಗವಿದೆ. ಆಶ್ರಮಕ್ಕೆ ಸೇರಲು ಅಥವಾ ಸೇರಿಸಲು ಬಯಸುವವರು ಆಶ್ರಮದ ಉಸ್ತುವಾರಿ ನೋಡಿಕೊಳ್ಳುವ ಎಚ್.ಎಂ. ಗುರುನಾಥ್ ಅವರನ್ನು ಸಂಪರ್ಕಿಸಬಹುದು. ಅವರ ಇಮೇಲ್ ವಿಳಾಸ [email protected]. ಫೋನ್ ನಂ 97412 08808.

ಆಶ್ರಮಕ್ಕೆ ಸೇರುವುದಿಲ್ಲ, ನಮ್ಮ ಹಿರಿಯರನ್ನು ಸೇರಿಸುವ ಅವಶ್ಯಕತೆಯಿಲ್ಲ. ಆದರೆ ಇಂಥ ಉದಾತ್ತ ಧ್ಯೇಯಕ್ಕಾಗಿ ತನ್ನನ್ನು ಮುಡಿಪಾಗಿಟ್ಟಿರುವ ಆಶ್ರಮಕ್ಕೆ ಬೆಂಬಲ ನೀಡುತ್ತೇವೆ ಎನ್ನುವವರೂ ಗುರುನಾಥ್ ಅವರನ್ನು ಸಂಪರ್ಕಿಸಬಹುದು. ದೇಣಿಗೆ ಕೊಡುವುದಾದರೆ ಆದಾಯ ತೆರಿಗೆ ಸೆಕ್ಷನ್ 88gg ಅನ್ವಯ ವಿನಾಯಿತಿ ಸಿಗುತ್ತದೆ. ದೇಣಿಗೆಗಳನ್ನು Sri Pejawara Sridhama ಹೆಸರಿಗೆ ಸಲ್ಲುವಂತೆ ಬರೆಯಬೇಕು. ಶ್ರೀಧಾಮದ ವಿಳಾಸ ಗುರುತುಹಾಕಿಕೊಳ್ಳಿ.

Pejawara Sridhama, sy.no. 106/1, Nachanahally, kuppalur III stage, J.P.nagar, E block, MYSORE - 500 008.

ಏನಿಲ್ಲವೆಂದರೂ, ರಾಮವಿಠ್ಠಲ ಟ್ರಸ್ಟ್ ಮತ್ತು ಗುರುನಾಥ್ ಅವರ ಶ್ರಮವನ್ನು ಮೆಚ್ಚಿ ಅವರಿಗೆ ಒಂದು ಇಮೇಲ್ ಹಾಕಿ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+