ನಿಮ್ಮ ಹೀರೋ ಯಾರು, ಯಾರವರು?

ಒಬ್ಬೊಬ್ಬರಿಗೆ ಒಬ್ಬೊಬ್ಬರು ಹೀರೋ ಆಗಿರುತ್ತಾರೆ. ಮಾದರಿ ಎನಿಸಿರುತ್ತಾರೆ. ಬದುಕಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಒಬ್ಬ ವ್ಯಕ್ತಿಗೆ ಮಾದರಿಯಾಗುವ ಆ ವ್ಯಕ್ತಿ ಮನುಕುಲವನ್ನು ಪ್ರತಿನಿಧಿಸುವವರಾಗಿರಬಹುದು. ಹೆಸರಾಂತ ಸಾಧಕರಾಗಿರಬಹುದು. ಪ್ರಸಿದ್ಧ ರಾಜಕಾರಣಿ, ಗುರು, ತತ್ತ್ವಜ್ಞಾನಿ, ವಿಜ್ಞಾನಿ ಅಥವಾ ತಂತ್ರಜ್ಞರೇ ಆಗಿರಬಹುದು. ಒಂದು ಸಿನಿಮಾದಲ್ಲಿ ಬರುವ ಸನ್ನಿವೇಶ ಅಥವಾ ನಟನ ಅಭಿನಯವೇ ಎಂದೂ ಅಳಿಸಲಾಗದ ಪ್ರಭಾವ ಬೀರಿರಬಹುದು.
ನಿಮ್ಮ ಜೀವನದಲ್ಲೂ ಅಂಥವರೊಬ್ಬರಿರುತ್ತಾರೆ. ಅವರಿಂದ ನೀವು ಪಡೆದ ಪ್ರೇರಣೆ ಸದಾ ನಿಮ್ಮೊಡನೆ ಸ್ಥಾಯಿ ಭಾವದಲ್ಲಿ ಇರುತ್ತದೆ. ತಂದೆ, ತಾಯಿ, ಅಜ್ಜ, ಅಜ್ಜಿ, ಹೆಂಡತಿ, ಗಂಡ, ಉಪಾಧ್ಯಾಯರು, ಅಥವಾ ನೆರೆಮನೆಯ ಜಗಲಿಯ ಮೇಲೆ ಕುಳಿತಿರುವ ನೆರೆತ ಕೂದಲಿನ ಒಂಟಿ ಜೀವಿ ಆಗಿರಲಿಕ್ಕೂ ಸಾಕು. ಗಾಂಧಿಯಾಗಿರಬಹುದು, ಗೋಡ್ಸೆ ಆಗಿರಬಹುದು. ನಿಮ್ಮ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸಿದ ಶಿಲ್ಪಿಯಾಗಿರಬಹುದು. ಸತತವಾಗಿ ಓದುವ ಅಭ್ಯಾಸ ರೂಢಿಸಿಕೊಂಡವರಿಗೆ ಒಬ್ಬ ಲೇಖಕ ಅಥವಾ ಒಂದು ಪುಸ್ತಕ ನಿಮ್ಮ ಜೀವನ ಧರ್ಮವನ್ನೇ ರೂಪಿಸಿರಬಹುದು, ನಿರೂಪಿಸುತ್ತಿರಬಹುದು. ಅವರು ಯಾರು? ಯಾರವರು?
ನಿಮ್ಮ ಜೀವನದ ಹೀರೋ ಯಾರೆಂಬುದನ್ನು ನಮಗೂ ತಿಳಿಸಿ. ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ. ನಿಮ್ಮ ನೆನಪಿನ ಭಿತ್ತಿಯಲ್ಲಿ ಸದಾ ಗುಪ್ತಗಾಮಿನಿಯಾಗಿ ಕುಳಿತು, ಪ್ರೇರಣೆಯ ಚಿಲುಮೆಯಾಗಿರುವ ಆ ವ್ಯಕ್ತಿ-ಶಕ್ತಿಯ ಹೆಸರು ಹೇಳಿ. ಹೆಸರಿನ ಜತೆಗೆ, ಅವರು ನಿಮಗೆ ಆದರ್ಶಪ್ರಾಯರಾದುದು ಹೇಗೆ? ಏಕೆ? ಎಂಬುದನ್ನು ಎರಡು, ಮೂರು ವಾಕ್ಯಗಳಲ್ಲಿ ಕಾಮೆಂಟ್ ವಿಭಾಗದಲ್ಲಿ ದಾಖಲಿಸಲು ಮರೆಯಬೇಡಿ. ವಿಸ್ತಾರವಾಗಿ ಚಿತ್ರಸಮೇತ ಬರೆಯಲಿಚ್ಛಿಸುವವರು ಬರಹ ಅಥವಾ ಯುನಿಕೋಡ್ ನಲ್ಲಿ ಬರೆದು [email protected] ವಿಳಾಸಕ್ಕೆ ಕಳಿಸಿರಿ. ವಂದನೆಗಳು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications