ನಿಮ್ಮ ಹೀರೋ ಯಾರು, ಯಾರವರು?

ಒಬ್ಬೊಬ್ಬರಿಗೆ ಒಬ್ಬೊಬ್ಬರು ಹೀರೋ ಆಗಿರುತ್ತಾರೆ. ಮಾದರಿ ಎನಿಸಿರುತ್ತಾರೆ. ಬದುಕಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಒಬ್ಬ ವ್ಯಕ್ತಿಗೆ ಮಾದರಿಯಾಗುವ ಆ ವ್ಯಕ್ತಿ ಮನುಕುಲವನ್ನು ಪ್ರತಿನಿಧಿಸುವವರಾಗಿರಬಹುದು. ಹೆಸರಾಂತ ಸಾಧಕರಾಗಿರಬಹುದು. ಪ್ರಸಿದ್ಧ ರಾಜಕಾರಣಿ, ಗುರು, ತತ್ತ್ವಜ್ಞಾನಿ, ವಿಜ್ಞಾನಿ ಅಥವಾ ತಂತ್ರಜ್ಞರೇ ಆಗಿರಬಹುದು. ಒಂದು ಸಿನಿಮಾದಲ್ಲಿ ಬರುವ ಸನ್ನಿವೇಶ ಅಥವಾ ನಟನ ಅಭಿನಯವೇ ಎಂದೂ ಅಳಿಸಲಾಗದ ಪ್ರಭಾವ ಬೀರಿರಬಹುದು.
ನಿಮ್ಮ ಜೀವನದಲ್ಲೂ ಅಂಥವರೊಬ್ಬರಿರುತ್ತಾರೆ. ಅವರಿಂದ ನೀವು ಪಡೆದ ಪ್ರೇರಣೆ ಸದಾ ನಿಮ್ಮೊಡನೆ ಸ್ಥಾಯಿ ಭಾವದಲ್ಲಿ ಇರುತ್ತದೆ. ತಂದೆ, ತಾಯಿ, ಅಜ್ಜ, ಅಜ್ಜಿ, ಹೆಂಡತಿ, ಗಂಡ, ಉಪಾಧ್ಯಾಯರು, ಅಥವಾ ನೆರೆಮನೆಯ ಜಗಲಿಯ ಮೇಲೆ ಕುಳಿತಿರುವ ನೆರೆತ ಕೂದಲಿನ ಒಂಟಿ ಜೀವಿ ಆಗಿರಲಿಕ್ಕೂ ಸಾಕು. ಗಾಂಧಿಯಾಗಿರಬಹುದು, ಗೋಡ್ಸೆ ಆಗಿರಬಹುದು. ನಿಮ್ಮ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸಿದ ಶಿಲ್ಪಿಯಾಗಿರಬಹುದು. ಸತತವಾಗಿ ಓದುವ ಅಭ್ಯಾಸ ರೂಢಿಸಿಕೊಂಡವರಿಗೆ ಒಬ್ಬ ಲೇಖಕ ಅಥವಾ ಒಂದು ಪುಸ್ತಕ ನಿಮ್ಮ ಜೀವನ ಧರ್ಮವನ್ನೇ ರೂಪಿಸಿರಬಹುದು, ನಿರೂಪಿಸುತ್ತಿರಬಹುದು. ಅವರು ಯಾರು? ಯಾರವರು?
ನಿಮ್ಮ ಜೀವನದ ಹೀರೋ ಯಾರೆಂಬುದನ್ನು ನಮಗೂ ತಿಳಿಸಿ. ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ. ನಿಮ್ಮ ನೆನಪಿನ ಭಿತ್ತಿಯಲ್ಲಿ ಸದಾ ಗುಪ್ತಗಾಮಿನಿಯಾಗಿ ಕುಳಿತು, ಪ್ರೇರಣೆಯ ಚಿಲುಮೆಯಾಗಿರುವ ಆ ವ್ಯಕ್ತಿ-ಶಕ್ತಿಯ ಹೆಸರು ಹೇಳಿ. ಹೆಸರಿನ ಜತೆಗೆ, ಅವರು ನಿಮಗೆ ಆದರ್ಶಪ್ರಾಯರಾದುದು ಹೇಗೆ? ಏಕೆ? ಎಂಬುದನ್ನು ಎರಡು, ಮೂರು ವಾಕ್ಯಗಳಲ್ಲಿ ಕಾಮೆಂಟ್ ವಿಭಾಗದಲ್ಲಿ ದಾಖಲಿಸಲು ಮರೆಯಬೇಡಿ. ವಿಸ್ತಾರವಾಗಿ ಚಿತ್ರಸಮೇತ ಬರೆಯಲಿಚ್ಛಿಸುವವರು ಬರಹ ಅಥವಾ ಯುನಿಕೋಡ್ ನಲ್ಲಿ ಬರೆದು [email protected] ವಿಳಾಸಕ್ಕೆ ಕಳಿಸಿರಿ. ವಂದನೆಗಳು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications